ಏನೇ ಬಂದರೂ

ಏನೇ ಬಂದರೂ ನೀ ದಯೆತೋರು
ನಿನ್ನಾ ದಯೆಯಲಿ ಬಾಳನು ನೀಡು |
ಬಾನಿಗೆ ರವಿಕಾಂತಿ ಶೋಭಿಸುವಂತೆ
ನನ್ನೀ ಬಾಳಿಗೆ ನೀ ಬೆಳಕಾಗು||ಕೃಷ್ಣಾ||

ಕಷ್ಟವೇ ಬರಲಿ, ಬದುಕಲಿ
ಕಾಳಿರುಳ ಕತ್ತಲೆ ಕವಿಯಲಿ|
ನಿನ್ನಾಕರುಣೆಯ ಕಿಡಿಯೊಂದಿರಲಿ
ಎದುರಿಸಿ ಜಯಿಸುವೆ ಕಠಿಣ ಸಂಕೋಲೆ||

ನಿಂತ ನೆಲವೆ ಕುಸಿಯಲಿ
ಜೀವವಿದು ಪಾತಾಳವನೇ ಸೇರಲಿ|
ನಿನ್ನಾಕರುಣೆಯ ಕರೆಯದು ಕೇಳೆ
ಜ್ವಾಲಾಮುಖಿಯಂತೆ ನೆಲಸೀಳಿ ಬರುವೆ||

ಬರವೇ ಬರಲಿ ಕ್ಷಾಮವೇ ಇರಲಿ
ಭೀಕರ ರೋಗವೇ ಬಳಲಿಸಿ ಬೇಯಿಸಲಿ|
ನಿನ್ನಾ ಅಭಯವು ಅರಳಿದ ಮರುಕ್ಷಣ
ನಾನುದ್ಭವಿಸುವೆ ಶಿಲ್ಪಕಲಾಮೂರ್ತಿಯಂತೆ
ಹೊಳೆಯುತಲಿ ಕಣಕಣ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಮ್ಮ ಆರೋಗ್ಯದಲ್ಲಿ ವಿಟಮಿನ್ನುಗಳ ಪಾತ್ರವೇನು?
Next post ಗಳಿಗೆಬಟ್ಟಲ ತಿರುವುಗಳಲ್ಲಿ – ೧೨೩

ಸಣ್ಣ ಕತೆ

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

  • ಕನಸುಗಳಿಗೆ ದಡಗಳಿರುದಿಲ್ಲ

    ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

  • ಅವನ ಹೆಸರಲ್ಲಿ

    ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…

cheap jordans|wholesale air max|wholesale jordans|wholesale jewelry|wholesale jerseys