ಏಕೆ ದೂಷಿಸುವೆ ಎನ್ನ?

ಏಕೆ ದೂಷಿಸುವೆ ಎನ್ನ?
ಎರಡನೆಯದು ಹೆಣ್ಣಾಗಿರುವುದಕೆ|
ಹೆಣ್ಣು ಗಂಡು ಬೇಧ ಬಾರದೆನಗೆ
ತಾಯಿಯಾಗೆನ್ನ ಪ್ರೀತಿಸುಧೆಯ
ಹರಿಸುವೆ ಸದಾ ಹೀಗೆ||

ನಮ್ಮಿಬ್ಬರ ಹಡೆದವಳು ಹೆಣ್ಣಲ್ಲವೇನು?
ಹಸಿದು ಅಳುವಾಗ ಕಣ್ಣಕಂಬನಿವರೆಸಿ
ಹಾಲುಣಿಸಿ ಹಸಿವ ತಣಿಸಿ
ಪ್ರೀತಿಯುಣಿಸಿದವಳು ಹೆಣ್ಣಲ್ಲವೇನು||

ಅಕ್ಕರೆಯ ಮಾತ ಕಲಿಸಿ
ಅಕ್ಷರವ ಕಲಿಸಿದ ಮೊದಲಗುರುವಾಕೆ|
ಹಗಲಿರುಳು ಜೀವ ಕಾಯ್ದು
ಕಣ್ಣಲಿ ಕಣ್ಣನಿಟ್ಟು
ಜೀವಮಾನವ ಮುಡಿಪಿಟ್ಟಾಕೆ ಹೆಣ್ಣಲ್ಲವೇ||

ಅಪ್ಪನಿಲ್ಲದಾದಗ
ಅಮ್ಮನೇ ಒಳಹೊರಗೆ ದುಡಿದು
ಹೊಟ್ಟೆ ತುಂಬಲಿಲ್ಲವೇ ನಮಗೆ|
ಅಕ್ಕ, ತಾಯಿಯ ಅನುಸರಿಸಿ
ಅಮ್ಮನಿಲ್ಲದಾದಾಗ ಅವಳ
ನೆನಪಿನ ಬುತ್ತಿಯ ಬಿಡಿಸಿ
ಸಮಾಧಾನ ತೋರಿದವಳೇ ಹೆಣ್ಣು||

ದುರ್ಗೆ ಪಾರ್ವತಿ ಹೆಣ್ಣು|
ನೂರಾರು ನದಿಗಳೆಲ್ಲವೂ ಹೆಣ್ಣು
ನಮ್ಮೆಲ್ಲರ ಹೊರುವ ಭೂತಾಯಿ ಹೆಣ್ಣು
ಪ್ರೀತಿಯ ಜೀವವೇ ಹೆಣ್ಣು
ಪ್ರೀತಿಯ ದೈವವು ಹೆಣ್ಣು||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಾಗರದಡಿಯ ಇಂದ್ರನಗರಿ ಹವಳ ದಿಬ್ಬಗಳು
Next post ಗಳಿಗೆಬಟ್ಟಲ ತಿರುವುಗಳಲ್ಲಿ – ೧೧೯

ಸಣ್ಣ ಕತೆ

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

  • ಉಪ್ಪು

    ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…