ಅದೇನಂದ ಚೆಂದವೋ

ಅದೇನಂದ ಚೆಂದವೋ
ಈ ಕರುರಾಡು ಸೊಬಗಿನ ಬೀಡು|
ಸಂಸ್ಕೃತಿ ಸೌಹಾರ್ದತೆಗೆ ಹೆಸರಾಗಿರೊ
ಈ ಕನ್ನಡನಾಡು||

ಕರುಣೆಗೆ ತವರು ಶಾಂತಿಯೇ ಉಸಿರು|
ಕುಡಿಯುವ ತೀರ್ಥವೇ ಇಲ್ಲಿ
ಕೃಷ್ಣ ತುಂಗೆ ಕಾವೇರಿ ನೀರು|
ಕಣ ಕಣದಿ ದೇಶಭಕ್ತಿಯ ತುಂಬಿ ವೀರ ಯೋಧರುಗಳ
ಬೆಳೆಸುವ ನಾಡು||

ಕರ್ನಾಟಕದ ಕಾಶ್ಮೀರ
ಈ ನಮ್ಮ ಗಿರಿನಗರಿ ಮಡಕೇರಿ|
ನೋಡಲು ಬಲು ಅಂದ ಕೆಮ್ಮಣ್ಣುಗುಂಡಿ, ಕಲ್ಲತ್ತಗಿರಿ ಸಾಹಿತ್ಯ
ಸಂಗೀತದ ಸಾಮ್ರಾಜ್ಯವೀ ನಮ್ಮ ಸಾದನಕೇರಿ| ಹಂಪೆ,
ಬೇಲೂರು ಹಳೇಬೀಡ
ಶಿಲೆಗಳೆಲ್ಲ ಕಲೆಯ ಗೋಪುರಗಳಾಗಿ
ಸಾರುತಲಿಹವು ಗತಕಾಲದ ವೈಭವಸಿರಿ||
ಪ್ರಪಂಚದಲ್ಲೆ ಕಾಳಿಂಗ ಸರ್ಪಗಳಿಗೆ
ಹೆಸರುವಾಸಿಯಾಗಿದೆ ಆಗುಂಬೆ ಘಾಟು
ನೋಡಲು ಬಲು ಅಂದ ಮೇಕೆಧಾಟು|
ಕೈಬೀಸಿ ಕರೆಯುತ್ತಿದೆ ಪಶ್ಚಿಮದಲಿ
ಸೈಹಾದ್ರಿಯ ಸಾಲು ಉತ್ತರದಲಿ ಬಾದಾಮಿ ಪಟ್ಟದಕಲ್ಲು|
ಜೋಗದ ಸಿರಿ ಬೆಳಕಿನಲಿ
ಬೆಳಗುತಿಹುದು ಸುಂದರ ಮೈಸೂರು||

ಶ್ರೀಗಂಧ ಬೆಳೆವ ಒಂದೇ ನಾಡು
ಈ ನಮ್ಮ ಕರುನಾಡು
ಸಿದ್ದರು ಪುರುಷರ ವೀರರ ನಾಡು
ಈ ನಮ್ಮ ಕನ್ನಡನಾಡು|
ಶರಾವತಿ ನೇತ್ರಾವತಿ ಹೇಮಾವತಿ
ಕಾವೇರಿ ಕಪಿಲ ಭದ್ರೆಯರ ತವರೂರು|
ಹಿಂದು ಜೈನ ಬುದ್ಧ ಧರ್ಮೀಯರ ನಾಡು
ಇದುವೆ ನಮ್ಮ ಪುಣ್ಯದ ಕನ್ನಡನಾಡು||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಕ್ಕರೆಯೂ ಸಿಹಿ ವಿಷ: ಯಾವಾಗ?
Next post ಗಳಿಗೆಬಟ್ಟಲ ತಿರುವುಗಳಲ್ಲಿ – ೯೯

ಸಣ್ಣ ಕತೆ

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…