Home / ಕವನ / ಕವಿತೆ / ಅದೇನಂದ ಚೆಂದವೋ

ಅದೇನಂದ ಚೆಂದವೋ

ಅದೇನಂದ ಚೆಂದವೋ
ಈ ಕರುರಾಡು ಸೊಬಗಿನ ಬೀಡು|
ಸಂಸ್ಕೃತಿ ಸೌಹಾರ್ದತೆಗೆ ಹೆಸರಾಗಿರೊ
ಈ ಕನ್ನಡನಾಡು||

ಕರುಣೆಗೆ ತವರು ಶಾಂತಿಯೇ ಉಸಿರು|
ಕುಡಿಯುವ ತೀರ್ಥವೇ ಇಲ್ಲಿ
ಕೃಷ್ಣ ತುಂಗೆ ಕಾವೇರಿ ನೀರು|
ಕಣ ಕಣದಿ ದೇಶಭಕ್ತಿಯ ತುಂಬಿ ವೀರ ಯೋಧರುಗಳ
ಬೆಳೆಸುವ ನಾಡು||

ಕರ್ನಾಟಕದ ಕಾಶ್ಮೀರ
ಈ ನಮ್ಮ ಗಿರಿನಗರಿ ಮಡಕೇರಿ|
ನೋಡಲು ಬಲು ಅಂದ ಕೆಮ್ಮಣ್ಣುಗುಂಡಿ, ಕಲ್ಲತ್ತಗಿರಿ ಸಾಹಿತ್ಯ
ಸಂಗೀತದ ಸಾಮ್ರಾಜ್ಯವೀ ನಮ್ಮ ಸಾದನಕೇರಿ| ಹಂಪೆ,
ಬೇಲೂರು ಹಳೇಬೀಡ
ಶಿಲೆಗಳೆಲ್ಲ ಕಲೆಯ ಗೋಪುರಗಳಾಗಿ
ಸಾರುತಲಿಹವು ಗತಕಾಲದ ವೈಭವಸಿರಿ||
ಪ್ರಪಂಚದಲ್ಲೆ ಕಾಳಿಂಗ ಸರ್ಪಗಳಿಗೆ
ಹೆಸರುವಾಸಿಯಾಗಿದೆ ಆಗುಂಬೆ ಘಾಟು
ನೋಡಲು ಬಲು ಅಂದ ಮೇಕೆಧಾಟು|
ಕೈಬೀಸಿ ಕರೆಯುತ್ತಿದೆ ಪಶ್ಚಿಮದಲಿ
ಸೈಹಾದ್ರಿಯ ಸಾಲು ಉತ್ತರದಲಿ ಬಾದಾಮಿ ಪಟ್ಟದಕಲ್ಲು|
ಜೋಗದ ಸಿರಿ ಬೆಳಕಿನಲಿ
ಬೆಳಗುತಿಹುದು ಸುಂದರ ಮೈಸೂರು||

ಶ್ರೀಗಂಧ ಬೆಳೆವ ಒಂದೇ ನಾಡು
ಈ ನಮ್ಮ ಕರುನಾಡು
ಸಿದ್ದರು ಪುರುಷರ ವೀರರ ನಾಡು
ಈ ನಮ್ಮ ಕನ್ನಡನಾಡು|
ಶರಾವತಿ ನೇತ್ರಾವತಿ ಹೇಮಾವತಿ
ಕಾವೇರಿ ಕಪಿಲ ಭದ್ರೆಯರ ತವರೂರು|
ಹಿಂದು ಜೈನ ಬುದ್ಧ ಧರ್ಮೀಯರ ನಾಡು
ಇದುವೆ ನಮ್ಮ ಪುಣ್ಯದ ಕನ್ನಡನಾಡು||
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...