Home / ಕವನ / ಕವಿತೆ / ಅದೇನಂದ ಚೆಂದವೋ

ಅದೇನಂದ ಚೆಂದವೋ

ಅದೇನಂದ ಚೆಂದವೋ
ಈ ಕರುರಾಡು ಸೊಬಗಿನ ಬೀಡು|
ಸಂಸ್ಕೃತಿ ಸೌಹಾರ್ದತೆಗೆ ಹೆಸರಾಗಿರೊ
ಈ ಕನ್ನಡನಾಡು||

ಕರುಣೆಗೆ ತವರು ಶಾಂತಿಯೇ ಉಸಿರು|
ಕುಡಿಯುವ ತೀರ್ಥವೇ ಇಲ್ಲಿ
ಕೃಷ್ಣ ತುಂಗೆ ಕಾವೇರಿ ನೀರು|
ಕಣ ಕಣದಿ ದೇಶಭಕ್ತಿಯ ತುಂಬಿ ವೀರ ಯೋಧರುಗಳ
ಬೆಳೆಸುವ ನಾಡು||

ಕರ್ನಾಟಕದ ಕಾಶ್ಮೀರ
ಈ ನಮ್ಮ ಗಿರಿನಗರಿ ಮಡಕೇರಿ|
ನೋಡಲು ಬಲು ಅಂದ ಕೆಮ್ಮಣ್ಣುಗುಂಡಿ, ಕಲ್ಲತ್ತಗಿರಿ ಸಾಹಿತ್ಯ
ಸಂಗೀತದ ಸಾಮ್ರಾಜ್ಯವೀ ನಮ್ಮ ಸಾದನಕೇರಿ| ಹಂಪೆ,
ಬೇಲೂರು ಹಳೇಬೀಡ
ಶಿಲೆಗಳೆಲ್ಲ ಕಲೆಯ ಗೋಪುರಗಳಾಗಿ
ಸಾರುತಲಿಹವು ಗತಕಾಲದ ವೈಭವಸಿರಿ||
ಪ್ರಪಂಚದಲ್ಲೆ ಕಾಳಿಂಗ ಸರ್ಪಗಳಿಗೆ
ಹೆಸರುವಾಸಿಯಾಗಿದೆ ಆಗುಂಬೆ ಘಾಟು
ನೋಡಲು ಬಲು ಅಂದ ಮೇಕೆಧಾಟು|
ಕೈಬೀಸಿ ಕರೆಯುತ್ತಿದೆ ಪಶ್ಚಿಮದಲಿ
ಸೈಹಾದ್ರಿಯ ಸಾಲು ಉತ್ತರದಲಿ ಬಾದಾಮಿ ಪಟ್ಟದಕಲ್ಲು|
ಜೋಗದ ಸಿರಿ ಬೆಳಕಿನಲಿ
ಬೆಳಗುತಿಹುದು ಸುಂದರ ಮೈಸೂರು||

ಶ್ರೀಗಂಧ ಬೆಳೆವ ಒಂದೇ ನಾಡು
ಈ ನಮ್ಮ ಕರುನಾಡು
ಸಿದ್ದರು ಪುರುಷರ ವೀರರ ನಾಡು
ಈ ನಮ್ಮ ಕನ್ನಡನಾಡು|
ಶರಾವತಿ ನೇತ್ರಾವತಿ ಹೇಮಾವತಿ
ಕಾವೇರಿ ಕಪಿಲ ಭದ್ರೆಯರ ತವರೂರು|
ಹಿಂದು ಜೈನ ಬುದ್ಧ ಧರ್ಮೀಯರ ನಾಡು
ಇದುವೆ ನಮ್ಮ ಪುಣ್ಯದ ಕನ್ನಡನಾಡು||
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...