ಅದೆಷ್ಟು ಸಾರಿ ಕ್ಷಮಿಸೆನ್ನ ಜೀವ

ಅದೆಷ್ಟು ಸಾರಿ ಕ್ಷಮಿಸೆನ್ನ ಜೀವ
ಉಳಿಸಿರುವೆಯೋ ಕಾಣೆ, ದೇವಾ|
ನಿನ್ನದಯೆ ಇರಲಿ ಸದಾ ಹೀಗೆ
ಬದುಕಿ ಮತ್ತೆ ಮತ್ತೆ ಸ್ತುತಿಸಿ ನಿನ್ನ
ನಮಿಸಿ ಸ್ಮರಿಸುತ್ತಿರುವೆ ಹೀಗೆ||

ಮತಿಗೆಟ್ಟು ನಾಲಿಗೆ ಎಡವಿ
ಮಹಾ ಪ್ರಮಾದವಾಗಿಬಿಡಹುದು|
ದೃಷ್ಟಿ ದೋಷ ಪೂರಿತನಾಗಿ ನಾ
ನಿಂದನೆಗಳಿಗೊಳಗಾಗಬಹುದು|
ದಿನ ನೂರು ಇಂಥ ಅಪರಾಧ
ಸಂಭವಿಸಿ ಬಿಡಬಹುದು, ಆದರೂ…||

ಚಂಚಲ ಮನಸ್ಸು
ಮನಬಂದಂತೆ ವರ್ತಿಸಿ
ಮಾನಾಪಮಾನವಾಗಬಹುದು|
ಚಪಲ ನಾಲಿಗೆ ಕಂಡದ್ದನ್ನೆಲ್ಲಾ
ಸವಿಯ ಬಯಸಿ ದೇಹ ಕೃಶವಾಗಬಹುದು|
ನಾ ಮುಂದೆಂಬ ವಿಪರೀತ ಬುದ್ಧಿ
ವಿಪತ್ತನ್ನೇ ತಂದಿಡಲುಬಹುದು|
ಕ್ಷಣಮಾತ್ರದಲಿ ಅವಘಡ
ಬಂದೆರಗಿ ಪ್ರಾಣಪಕ್ಷಿ
ಹಾರಿಬಿಡಬಹುದು, ಆದರೂ…||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕೋಟಿ ಸೂರ್ಯನಿಗೆ ಸಮನಾದ ‘ಪಿಸ್ಟಲ್’ ನಕ್ಷತ್ರ
Next post ಗಳಿಗೆಬಟ್ಟಲ ತಿರುವುಗಳಲ್ಲಿ – ೯೦

ಸಣ್ಣ ಕತೆ

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ದಾರಿ ಯಾವುದಯ್ಯಾ?

    ಮೂವತೈದು ವರ್‍ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್‍ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್… Read more…