Home / ಲೇಖನ / ವಿಜ್ಞಾನ / ಕೋಟಿ ಸೂರ್ಯನಿಗೆ ಸಮನಾದ ‘ಪಿಸ್ಟಲ್’ ನಕ್ಷತ್ರ

ಕೋಟಿ ಸೂರ್ಯನಿಗೆ ಸಮನಾದ ‘ಪಿಸ್ಟಲ್’ ನಕ್ಷತ್ರ

೧೪ ಲಕ್ಷ ಕಿಲೋ ಮೀಟರ್ ವ್ಯಾಸವನ್ನು ಹೊಂದಿದ ಸೂರ್ಯ ಒಂದು ಅಗ್ನಿಗೋಳ. ಇದರ ಒಂದು ದಿಕ್ಕಿನ ಉಷ್ಣತೆಯು ಒಂದು ಕೋಟಿ ನಲವತ್ತು ಲಕ್ಷ ಡಿಗ್ರಿ ಸೆಂಟಿಗ್ರೆಡ್ ಇದೆ. ಅತಿ ತಂಪಾದ ಪ್ರದೇಶದಲ್ಲಿ ೫,೦೦೦ ಡಿಗ್ರಿ ಸೆಂಟಿಗ್ರೆಡ್ ಇರುತ್ತದೆಂದು ಉಷ್ಣತೆಯ ಮಾಪನ ಅಂತರೀಕ್ಷ ವಿಜ್ಞಾನಿಗಳು ಊಹಿಸಿದ್ದಾರೆ. ಭೂಮಿಯ ಮೇಲಿನ ಯಾವುದೇ ಘನ, ದ್ರವಪದಾರ್ಥಗಳು ಈ ಶಾಖಕ್ಕೆ ಆವಿಯಾಗಿ ಹೋಗುತ್ತವೆಂದೂ ಹೇಳುತ್ತಾರೆ.

ಈ ಸೂರ್ಯಗೋಳವನ್ನು ಆವರಿಸಿರುವ ವಾತಾವರಣ ಎರಡು ಪೊರೆಗಳಾಗಿರುತ್ತದೆ. ಈ ಪೊರೆಗಳ ಕೆಳಗೆ ಇರುವುದನ್ನು ಪೊಟೊಸ್ಟೀಯರ್ ಅಥವಾ ಸೊಲೂರ್ ಡಿಸ್ಕ್, ಎಂದು ಕರೆಯುತ್ತಾರೆ. ಇದರ ದಟ್ಟತೆ ೩೨೦ ಕಿ.ಮೀ. ಪೊಟೋಸ್ಟಿಯರ್ ಮೇಲೆ ಸೂರ್ಯ ಕಲೆಗಳು ಉಂಟಾಗುತ್ತಲಿರುತ್ತವೆ. ಇವುಗಳಿಗೂ ಭೂ ವಾತಾವರಣಕ್ಕೂ ಇರುವ ಸಂದರ್ಭದ ಬಗ್ಗೆ ಶತಮಾನಗಳಿಂದ ಸಂಶೋಧನೆಗಳು ನಡೆಯುತ್ತಿವೆ.

ಪೊಟೊಸ್ಟೀಯರ್ ಮೇಲೆ ಇರುವ ಮೊದಲ ಪೊರೆಗೆ ಕ್ರೋಮೊಸ್ಟಿಯರ್ ಎಂದು ಕರೆಯುತ್ತಿದ್ದು ಇದರ ದಪ್ಪ ೧೨,೦೦೦ ಕಿ.ಮೀ. ಇರುತ್ತದೆ. ಇಲ್ಲಿಯ ಉಷ್ಣತೆ ೫೦೦ ಕೋಟಿ ವರ್ಷಗಳಾಯಿತೆಂದು ಅಂದಾಜು ಮಾಡಲಾಗಿದೆ. ಕೆಲವು ವಿಜ್ಞಾನಿಗಳು ಸೂರ್ಯನ ಜೀವಿತಾವಧಿ (ಕಾಲಾವಧಿ) ಒಂದು ಸಾವಿರ ಕೋಟಿ ವರ್ಷಗಳೆಂದು ಹೇಳುತ್ತಾರೆ. ಸೂರ್ಯಗ್ರಹದ ಮೇಲಿರುವ ಹೈಡ್ರೋಜನ್ ಬೇಗ ಕಡಿಮೆಯಾಗುತ್ತಿರುವುದೇ ಸೂರ್ಯನ ಆಯುಷ್ಯ ಮೊಟಕಾಗಲು ಕಾರಣವೆಂದು ವಿಜ್ಞಾನಿಗಳು ಹೇಳುತ್ತಾರೆ. ಸೂರ್ಯನ ಭವಿಷ್ಯದ ಬಗೆಗೆ ಏನೇ ವರದಿಗಳಿದ್ದರೂ ಇಂಥಹ ಸೂರ್ಯನಿಗಿಂತ ಕಾಂತಿಯುತವಾದ ನಕ್ಷತ್ರಗಳು ಬಾಹ್ಯಾಕಾಶದಲ್ಲಿವೆ ಎಂಬ ವಿಷಯದಲ್ಲಿ ಮಾತ್ರ ಭಿನ್ನಾಭಿಪ್ರಾಯಗಳಿಲ್ಲ. ಭೂಮಿಗೆ ೨೫,೦೦೦ ಬೆಳಕಿನ ವರ್ಷ ದೂರದಲ್ಲಿರುವ ಕೋಟಿ ಸೂರ್ಯರ ಸಮನಾದ ಬೆಳಕಿನೊಂದಿಗೆ ಬೆಳಗುವ “ಪಿಸ್ಟಲ್‌ಸ್ಟಾರ್” ಒಂದಿದೆ ಎಂದು ಇತ್ತೀಚಿಗೆ ಲಾಸ್ ಎಂಜಲೀಸ್ ವಿಜ್ಞಾನಿಗಳು ಗುರುತಿಸಿದ್ದಾರೆ.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...