Home / ಲೇಖನ / ವಿಜ್ಞಾನ / ಕೋಟಿ ಸೂರ್ಯನಿಗೆ ಸಮನಾದ ‘ಪಿಸ್ಟಲ್’ ನಕ್ಷತ್ರ

ಕೋಟಿ ಸೂರ್ಯನಿಗೆ ಸಮನಾದ ‘ಪಿಸ್ಟಲ್’ ನಕ್ಷತ್ರ

೧೪ ಲಕ್ಷ ಕಿಲೋ ಮೀಟರ್ ವ್ಯಾಸವನ್ನು ಹೊಂದಿದ ಸೂರ್ಯ ಒಂದು ಅಗ್ನಿಗೋಳ. ಇದರ ಒಂದು ದಿಕ್ಕಿನ ಉಷ್ಣತೆಯು ಒಂದು ಕೋಟಿ ನಲವತ್ತು ಲಕ್ಷ ಡಿಗ್ರಿ ಸೆಂಟಿಗ್ರೆಡ್ ಇದೆ. ಅತಿ ತಂಪಾದ ಪ್ರದೇಶದಲ್ಲಿ ೫,೦೦೦ ಡಿಗ್ರಿ ಸೆಂಟಿಗ್ರೆಡ್ ಇರುತ್ತದೆಂದು ಉಷ್ಣತೆಯ ಮಾಪನ ಅಂತರೀಕ್ಷ ವಿಜ್ಞಾನಿಗಳು ಊಹಿಸಿದ್ದಾರೆ. ಭೂಮಿಯ ಮೇಲಿನ ಯಾವುದೇ ಘನ, ದ್ರವಪದಾರ್ಥಗಳು ಈ ಶಾಖಕ್ಕೆ ಆವಿಯಾಗಿ ಹೋಗುತ್ತವೆಂದೂ ಹೇಳುತ್ತಾರೆ.

ಈ ಸೂರ್ಯಗೋಳವನ್ನು ಆವರಿಸಿರುವ ವಾತಾವರಣ ಎರಡು ಪೊರೆಗಳಾಗಿರುತ್ತದೆ. ಈ ಪೊರೆಗಳ ಕೆಳಗೆ ಇರುವುದನ್ನು ಪೊಟೊಸ್ಟೀಯರ್ ಅಥವಾ ಸೊಲೂರ್ ಡಿಸ್ಕ್, ಎಂದು ಕರೆಯುತ್ತಾರೆ. ಇದರ ದಟ್ಟತೆ ೩೨೦ ಕಿ.ಮೀ. ಪೊಟೋಸ್ಟಿಯರ್ ಮೇಲೆ ಸೂರ್ಯ ಕಲೆಗಳು ಉಂಟಾಗುತ್ತಲಿರುತ್ತವೆ. ಇವುಗಳಿಗೂ ಭೂ ವಾತಾವರಣಕ್ಕೂ ಇರುವ ಸಂದರ್ಭದ ಬಗ್ಗೆ ಶತಮಾನಗಳಿಂದ ಸಂಶೋಧನೆಗಳು ನಡೆಯುತ್ತಿವೆ.

ಪೊಟೊಸ್ಟೀಯರ್ ಮೇಲೆ ಇರುವ ಮೊದಲ ಪೊರೆಗೆ ಕ್ರೋಮೊಸ್ಟಿಯರ್ ಎಂದು ಕರೆಯುತ್ತಿದ್ದು ಇದರ ದಪ್ಪ ೧೨,೦೦೦ ಕಿ.ಮೀ. ಇರುತ್ತದೆ. ಇಲ್ಲಿಯ ಉಷ್ಣತೆ ೫೦೦ ಕೋಟಿ ವರ್ಷಗಳಾಯಿತೆಂದು ಅಂದಾಜು ಮಾಡಲಾಗಿದೆ. ಕೆಲವು ವಿಜ್ಞಾನಿಗಳು ಸೂರ್ಯನ ಜೀವಿತಾವಧಿ (ಕಾಲಾವಧಿ) ಒಂದು ಸಾವಿರ ಕೋಟಿ ವರ್ಷಗಳೆಂದು ಹೇಳುತ್ತಾರೆ. ಸೂರ್ಯಗ್ರಹದ ಮೇಲಿರುವ ಹೈಡ್ರೋಜನ್ ಬೇಗ ಕಡಿಮೆಯಾಗುತ್ತಿರುವುದೇ ಸೂರ್ಯನ ಆಯುಷ್ಯ ಮೊಟಕಾಗಲು ಕಾರಣವೆಂದು ವಿಜ್ಞಾನಿಗಳು ಹೇಳುತ್ತಾರೆ. ಸೂರ್ಯನ ಭವಿಷ್ಯದ ಬಗೆಗೆ ಏನೇ ವರದಿಗಳಿದ್ದರೂ ಇಂಥಹ ಸೂರ್ಯನಿಗಿಂತ ಕಾಂತಿಯುತವಾದ ನಕ್ಷತ್ರಗಳು ಬಾಹ್ಯಾಕಾಶದಲ್ಲಿವೆ ಎಂಬ ವಿಷಯದಲ್ಲಿ ಮಾತ್ರ ಭಿನ್ನಾಭಿಪ್ರಾಯಗಳಿಲ್ಲ. ಭೂಮಿಗೆ ೨೫,೦೦೦ ಬೆಳಕಿನ ವರ್ಷ ದೂರದಲ್ಲಿರುವ ಕೋಟಿ ಸೂರ್ಯರ ಸಮನಾದ ಬೆಳಕಿನೊಂದಿಗೆ ಬೆಳಗುವ “ಪಿಸ್ಟಲ್‌ಸ್ಟಾರ್” ಒಂದಿದೆ ಎಂದು ಇತ್ತೀಚಿಗೆ ಲಾಸ್ ಎಂಜಲೀಸ್ ವಿಜ್ಞಾನಿಗಳು ಗುರುತಿಸಿದ್ದಾರೆ.
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...