Home / ಕವನ / ಕವಿತೆ / ಎದೆ ಹಾಲು ನೀಡಿರಮ್ಮ

ಎದೆ ಹಾಲು ನೀಡಿರಮ್ಮ

(ತೊಗಲುಬೊಂಬೆಯಾಟ)

ನೀಡಿರಮ್ಮ ಎದೆಯ ಹಾಲ
ನಿಮ್ಮ ಕೂಸಿನ ಜೀವ ಪಾಲು
ನೀಡಿ ಅಕ್ಕ ನೀಡಿ ತಂಗಿ
ನೀಡಿ ತಾಯಿ ಎದೆಯ ಹಾಲು ||

ಜೀವದಮೃತ ಎದೆಯ ಹಾಲು
ಸಾಟಿಯೆಲ್ಲಿದೆ ಮಗುವ ಪಾಲು
ಜೀವ ಜೀವವ ಧಾರೆ ಎರೆದು
ಒಕ್ಕಳ ಬಳ್ಳಿ ಕಿತ್ತು ಬಂದಿದೆ ||

ನಿಮ್ಮ ಬದುಕಿನ ಕುಡಿಯನು
ನರಳಿಸದಿರಿ ಕೊಡದೆ ಹಾಲನು
ಕಂದ ಅಳುತಿದೆ ಕೇಳು ತಾಯಿ
ನಿನ್ನ ಹಾಲೆ ಜೀವ ಕಾಯಿ ||

ಚೌಕಾಸಿ ಹಾಲಿಗೆ ಬೇಡ ತಂಗಿ
ರೂಪ ಕೆಟ್ಟಿತೆಂಬ ಭಾವ ತಗ್ಗಿ
ತಾಯಿ ತಾಯಿ ತಾಯಿ ಆಗು
ಜೀವ ನೀಡು ಮಗುವಿಗಾಗಿ ||

ಎದೆ ಹಾಲೆ ಔಷಧಿ ಕೇಳಮ್ಮ
ನಿನ್ನ ಮಗುವಿಗೆ ಡಾಕ್ಟರ್‍ಯಾಕಮ್ಮ
ನಿನ್ನೆದೆ ಹಾಲೆ ಪೂರ್ಣ ಆಹಾರ
ನಿನ್ನ ವಂಶದ ಬೆಳೆಗೆ ಆಧಾರ ||

ಹಾಡು ೧ : ಶೋಕಿ ಯಾಕವ್ವ ತಾಯಿ ನಿನಗೆ
ಕಂದ ಬೇಡವೆ ನಿನ್ನ ಮನೆಗೆ ||

ಎದೆ ಹಾಲ ನೀಡದೆ ನೀನು
ಮಗುವಿಗಾಗಿ ಮಾಡಿದ್ದೇನು
ಜೀವ ಕುಡಿ ಬೆಳೆಯದಂಗೆ
ತುತ್ತಾ ಮಣ್ಣಿಗಾದಂಗೆ ||

ಹಾಡು ೨ : ಹಾಲಿಗ್ಯಾವ ಬಣ್ಣ ಅಣ್ಣಾ
ಬೆಳ್ಳಗಿವುದಲ್ಲಾ ಸುಣ್ಣಾ ||

ಹಾಲು ಯಾವುದಾದರೇನು
ತಾಯ ಹಾಲಿಗೆ ಸಮವೇನು
ಹಾಲು ನೀರು ಸೇರಿದರೆ
ಮನುಷ ಮಾಯವಾಗಿರೆ ||

ಹಾಡು ೩ : ತಾಯ ಎದೆಹಾಲು ಬತ್ತಿದರೆ
ಮಗುವಿನ ಗತಿಯೇನು ಜನರೆ ||

ಹಣವಂತರ ಮನೆಯಲ್ಲಾದರೆ
ಬಡವರ ಎದೆಹಾಲ ಕೊಳ್ಳುತಾರೆ
ಬಡ ಹೆಣ್ಣು ಮಗಳಾದರೆ
ಮಗುವಿಗೇನು ಕುಡಿಸುತಾರೆ ||

ಕೇಳಿರಣ್ಣ ಕೇಳಿರೊ ಕೇಳಿರಿ
ಎದೆಹಾಲು ಕೊಳ್ಳುವುದಲ್ಲ
ಎದೆಹಾಲು ಮಾರುವುದಲ್ಲ
ನೆನಪಿರಲಿ ಮಾತು ನಿಮ್ಮಲ್ಲಿ ||

ಹಾಡು ೪ : ಕೇಳಿರಿ ಜನರೆ ಕೇಳಿರಿ
ತಾಯ್ತನದ ಶಾಯರಿ ||

ತಾಯಿ ಮಗುವಿನ ಜೀವ
ತಿಳಿ ಎದೆಹಾಲಿನ ಮಹತ್ವ
ಜೀವ ಉಳಿಸುವ ಬಗೆಯು
ಪಾಲು ಹಾಲ ಮಹಿಮೆಯು ||

*****

 

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...