Home / ಕವನ / ಕವಿತೆ / ಎದೆ ಹಾಲು ನೀಡಿರಮ್ಮ

ಎದೆ ಹಾಲು ನೀಡಿರಮ್ಮ

(ತೊಗಲುಬೊಂಬೆಯಾಟ)

ನೀಡಿರಮ್ಮ ಎದೆಯ ಹಾಲ
ನಿಮ್ಮ ಕೂಸಿನ ಜೀವ ಪಾಲು
ನೀಡಿ ಅಕ್ಕ ನೀಡಿ ತಂಗಿ
ನೀಡಿ ತಾಯಿ ಎದೆಯ ಹಾಲು ||

ಜೀವದಮೃತ ಎದೆಯ ಹಾಲು
ಸಾಟಿಯೆಲ್ಲಿದೆ ಮಗುವ ಪಾಲು
ಜೀವ ಜೀವವ ಧಾರೆ ಎರೆದು
ಒಕ್ಕಳ ಬಳ್ಳಿ ಕಿತ್ತು ಬಂದಿದೆ ||

ನಿಮ್ಮ ಬದುಕಿನ ಕುಡಿಯನು
ನರಳಿಸದಿರಿ ಕೊಡದೆ ಹಾಲನು
ಕಂದ ಅಳುತಿದೆ ಕೇಳು ತಾಯಿ
ನಿನ್ನ ಹಾಲೆ ಜೀವ ಕಾಯಿ ||

ಚೌಕಾಸಿ ಹಾಲಿಗೆ ಬೇಡ ತಂಗಿ
ರೂಪ ಕೆಟ್ಟಿತೆಂಬ ಭಾವ ತಗ್ಗಿ
ತಾಯಿ ತಾಯಿ ತಾಯಿ ಆಗು
ಜೀವ ನೀಡು ಮಗುವಿಗಾಗಿ ||

ಎದೆ ಹಾಲೆ ಔಷಧಿ ಕೇಳಮ್ಮ
ನಿನ್ನ ಮಗುವಿಗೆ ಡಾಕ್ಟರ್‍ಯಾಕಮ್ಮ
ನಿನ್ನೆದೆ ಹಾಲೆ ಪೂರ್ಣ ಆಹಾರ
ನಿನ್ನ ವಂಶದ ಬೆಳೆಗೆ ಆಧಾರ ||

ಹಾಡು ೧ : ಶೋಕಿ ಯಾಕವ್ವ ತಾಯಿ ನಿನಗೆ
ಕಂದ ಬೇಡವೆ ನಿನ್ನ ಮನೆಗೆ ||

ಎದೆ ಹಾಲ ನೀಡದೆ ನೀನು
ಮಗುವಿಗಾಗಿ ಮಾಡಿದ್ದೇನು
ಜೀವ ಕುಡಿ ಬೆಳೆಯದಂಗೆ
ತುತ್ತಾ ಮಣ್ಣಿಗಾದಂಗೆ ||

ಹಾಡು ೨ : ಹಾಲಿಗ್ಯಾವ ಬಣ್ಣ ಅಣ್ಣಾ
ಬೆಳ್ಳಗಿವುದಲ್ಲಾ ಸುಣ್ಣಾ ||

ಹಾಲು ಯಾವುದಾದರೇನು
ತಾಯ ಹಾಲಿಗೆ ಸಮವೇನು
ಹಾಲು ನೀರು ಸೇರಿದರೆ
ಮನುಷ ಮಾಯವಾಗಿರೆ ||

ಹಾಡು ೩ : ತಾಯ ಎದೆಹಾಲು ಬತ್ತಿದರೆ
ಮಗುವಿನ ಗತಿಯೇನು ಜನರೆ ||

ಹಣವಂತರ ಮನೆಯಲ್ಲಾದರೆ
ಬಡವರ ಎದೆಹಾಲ ಕೊಳ್ಳುತಾರೆ
ಬಡ ಹೆಣ್ಣು ಮಗಳಾದರೆ
ಮಗುವಿಗೇನು ಕುಡಿಸುತಾರೆ ||

ಕೇಳಿರಣ್ಣ ಕೇಳಿರೊ ಕೇಳಿರಿ
ಎದೆಹಾಲು ಕೊಳ್ಳುವುದಲ್ಲ
ಎದೆಹಾಲು ಮಾರುವುದಲ್ಲ
ನೆನಪಿರಲಿ ಮಾತು ನಿಮ್ಮಲ್ಲಿ ||

ಹಾಡು ೪ : ಕೇಳಿರಿ ಜನರೆ ಕೇಳಿರಿ
ತಾಯ್ತನದ ಶಾಯರಿ ||

ತಾಯಿ ಮಗುವಿನ ಜೀವ
ತಿಳಿ ಎದೆಹಾಲಿನ ಮಹತ್ವ
ಜೀವ ಉಳಿಸುವ ಬಗೆಯು
ಪಾಲು ಹಾಲ ಮಹಿಮೆಯು ||

*****

 

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...