Home / ಕವನ / ಕವಿತೆ / ಎದೆ ಹಾಲು ನೀಡಿರಮ್ಮ

ಎದೆ ಹಾಲು ನೀಡಿರಮ್ಮ

(ತೊಗಲುಬೊಂಬೆಯಾಟ)

ನೀಡಿರಮ್ಮ ಎದೆಯ ಹಾಲ
ನಿಮ್ಮ ಕೂಸಿನ ಜೀವ ಪಾಲು
ನೀಡಿ ಅಕ್ಕ ನೀಡಿ ತಂಗಿ
ನೀಡಿ ತಾಯಿ ಎದೆಯ ಹಾಲು ||

ಜೀವದಮೃತ ಎದೆಯ ಹಾಲು
ಸಾಟಿಯೆಲ್ಲಿದೆ ಮಗುವ ಪಾಲು
ಜೀವ ಜೀವವ ಧಾರೆ ಎರೆದು
ಒಕ್ಕಳ ಬಳ್ಳಿ ಕಿತ್ತು ಬಂದಿದೆ ||

ನಿಮ್ಮ ಬದುಕಿನ ಕುಡಿಯನು
ನರಳಿಸದಿರಿ ಕೊಡದೆ ಹಾಲನು
ಕಂದ ಅಳುತಿದೆ ಕೇಳು ತಾಯಿ
ನಿನ್ನ ಹಾಲೆ ಜೀವ ಕಾಯಿ ||

ಚೌಕಾಸಿ ಹಾಲಿಗೆ ಬೇಡ ತಂಗಿ
ರೂಪ ಕೆಟ್ಟಿತೆಂಬ ಭಾವ ತಗ್ಗಿ
ತಾಯಿ ತಾಯಿ ತಾಯಿ ಆಗು
ಜೀವ ನೀಡು ಮಗುವಿಗಾಗಿ ||

ಎದೆ ಹಾಲೆ ಔಷಧಿ ಕೇಳಮ್ಮ
ನಿನ್ನ ಮಗುವಿಗೆ ಡಾಕ್ಟರ್‍ಯಾಕಮ್ಮ
ನಿನ್ನೆದೆ ಹಾಲೆ ಪೂರ್ಣ ಆಹಾರ
ನಿನ್ನ ವಂಶದ ಬೆಳೆಗೆ ಆಧಾರ ||

ಹಾಡು ೧ : ಶೋಕಿ ಯಾಕವ್ವ ತಾಯಿ ನಿನಗೆ
ಕಂದ ಬೇಡವೆ ನಿನ್ನ ಮನೆಗೆ ||

ಎದೆ ಹಾಲ ನೀಡದೆ ನೀನು
ಮಗುವಿಗಾಗಿ ಮಾಡಿದ್ದೇನು
ಜೀವ ಕುಡಿ ಬೆಳೆಯದಂಗೆ
ತುತ್ತಾ ಮಣ್ಣಿಗಾದಂಗೆ ||

ಹಾಡು ೨ : ಹಾಲಿಗ್ಯಾವ ಬಣ್ಣ ಅಣ್ಣಾ
ಬೆಳ್ಳಗಿವುದಲ್ಲಾ ಸುಣ್ಣಾ ||

ಹಾಲು ಯಾವುದಾದರೇನು
ತಾಯ ಹಾಲಿಗೆ ಸಮವೇನು
ಹಾಲು ನೀರು ಸೇರಿದರೆ
ಮನುಷ ಮಾಯವಾಗಿರೆ ||

ಹಾಡು ೩ : ತಾಯ ಎದೆಹಾಲು ಬತ್ತಿದರೆ
ಮಗುವಿನ ಗತಿಯೇನು ಜನರೆ ||

ಹಣವಂತರ ಮನೆಯಲ್ಲಾದರೆ
ಬಡವರ ಎದೆಹಾಲ ಕೊಳ್ಳುತಾರೆ
ಬಡ ಹೆಣ್ಣು ಮಗಳಾದರೆ
ಮಗುವಿಗೇನು ಕುಡಿಸುತಾರೆ ||

ಕೇಳಿರಣ್ಣ ಕೇಳಿರೊ ಕೇಳಿರಿ
ಎದೆಹಾಲು ಕೊಳ್ಳುವುದಲ್ಲ
ಎದೆಹಾಲು ಮಾರುವುದಲ್ಲ
ನೆನಪಿರಲಿ ಮಾತು ನಿಮ್ಮಲ್ಲಿ ||

ಹಾಡು ೪ : ಕೇಳಿರಿ ಜನರೆ ಕೇಳಿರಿ
ತಾಯ್ತನದ ಶಾಯರಿ ||

ತಾಯಿ ಮಗುವಿನ ಜೀವ
ತಿಳಿ ಎದೆಹಾಲಿನ ಮಹತ್ವ
ಜೀವ ಉಳಿಸುವ ಬಗೆಯು
ಪಾಲು ಹಾಲ ಮಹಿಮೆಯು ||

*****

 

Tagged:

Leave a Reply

Your email address will not be published. Required fields are marked *

ಸರ್‍ಕಸ್ಸು ಮುಗಿದರೂ ಅವನು ಅಲ್ಲಿಯೇ ಕುಳಿತಿದ್ದ. ಎಲ್ಲಾ ಎದ್ದು ಹೋಗಿದ್ದರು. ಎರಡನೇ ಷೋ ಆರಂಭವಾಗಲು ಕೆಲವೇ ಸಮಯ ಉಳಿದಿತ್ತು. ಅವನ ಕಣ್ಣುಗಳು ಏನನ್ನೋ ಹುಡುಕುತ್ತಿದ್ದವು. ಆ ಸರ್‍ಕಸ್ಸಿನ ಹುಡುಗಿ ಪ್ರವೇಶಿಸಿ ಓಡಿ ಬಂದು ಎರಡು ಬಾರಿ ಲಾಗಾ ಹಾಕಿ ಇವನ ಮುಂದೆಯೇ ನಿಂತಂತಾಯಿತು. ಆಕೆಯ...

“ಸುಭದ್ರೆ, ನೀನು ಎಂದು….” ದೈನ್ಯವಾಣಿಯಿಂದ ಕೇಳಿಕೊಂಡ ಶ್ರೀಧರ. “ತಡೆ ಶ್ರೀಧರ. ಹ್ಞ. ಹತ್ತಿರ ಬರಬೇಡ. ಪ್ರತಿಯೊಂದು ಕಾರ್ಯಕ್ಕೂ ಮುಹೂರ್ತ ಬರಬೇಕು; ಸ್ವಲ್ಪ ಕಾಲ ತಡೆ. ಒಮ್ಮೆ ಹೇಳಿದೆ: ನಾನು ನಿನ್ನವಳೆಂದು, ನಂಬಿಕೊ.” “ಎಷ್ಟು ದಿನ ಈ ನ...

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...