Home / ಲೇಖನ / ಇತರೆ / ಅರಿತವೇನು ಅಂತರಾಳವ?

ಅರಿತವೇನು ಅಂತರಾಳವ?

ಪ್ರಿಯ ಸಖಿ,

ಬೇರೆಯವರ ಭಾವನೆಗಳನ್ನು ಅರ್ಥೈಸುವುದು ಬಹಳವೇ ಕಷ್ಟ ಎನ್ನುತ್ತಾರೆ ತಿಳಿದವರು. ಅದು ನಿಜವೂ ಹೌದು. ಆದರೆ ಅದಕ್ಕಿಂತಾ ಕಷ್ಟವಾದುದು ನಮ್ಮನ್ನು ನಾವು ಅರಿಯುವುದು ! ಅಲ್ಲವೇ ? ಕವಿ ಎಚ್. ಎಸ್. ವೆಂಕಟೇಶಮೂರ್ತಿಯವರು ತಮ್ಮ ‘ಇಷ್ಟು ಕಾಲ’, ಎಂಬ ಕವನದಲ್ಲಿ

ಇಷ್ಟು ಕಾಲ ಒಟ್ಟಿಗಿBhrameದ್ದು
ಎಷ್ಟು ಬೆರೆತರೂ
ಅರಿತೆವೇನು ನಾವು
ನಮ್ಮ ಅಂತರಾಳವ?
ಕಡಲಮೇಲೆ ಸಾವಿರಾರು ಮೈಲಿ
ಸಾಗಿಯೂ
ನೀರಿನಾಳ ತಿಳಿಯಿತೇನು
ಹಾಯಿ ದೋಣಿಗೆ ?

ಎಂದು ಪ್ರಶ್ನಿಸುತ್ತಾರೆ. ತನಗೆಲ್ಲಾ ತಿಳಿದಿದೆ ಎಂದು ಬೀಗುವ ಮಾನವ ತನ್ನನ್ನು ತಾನು ಅರ್ಥ ಮಾಡಿಕೊಂಡಿರುವುದಾದರೂ ಎಷ್ಟು ? ಇಂದು ನಾವು ಬಾಹ್ಯದೊತ್ತಡದಲ್ಲಿ ಅಂತರಾಳದ ದನಿಗೆ ಕಿವಿಗೊಡುವುದನ್ನೇ ಮರೆತಿದ್ದೇವೆ. ನೀರಿನ ಮೇಲೆ ತೇಲಿದರೆ ಕಡಲಿನ ಆಳದ ಅನುಭವವಾಗುತ್ತದೆಯೆ?

ಮೆರಿ ಸ್ಕ್ರಾಲಿಬ್ ಎನ್ನುವ ಕವಿ “Have a quiet time in which to learn your own weakness and gods strength” ನಾವೆಲ್ಲರೂ ನಮ್ಮ ನಮ್ಮ ದೌರ್ಬಲ್ಯಗಳನ್ನರಿಯಲು ಹಾಗೂ ದೇವರು ನೀಡಿದ ಶಕ್ತಿಯನ್ನರಿಯಲು ತಕ್ಕಷ್ಟು ಸಮಯ ಕೊಡಬೇಕು ಎನ್ನುತ್ತಾನೆ. ಎಷ್ಟೊಂದು ಅರ್ಥಪೂರ್ಣವಾದ ಮಾತಲ್ಲವೇ ಸಖೀ? ನಮ್ಮ ನಮ್ಮ ದೌರ್ಬಲ್ಯಗಳನ್ನು ಅರಿತಾಗ ಮಾತ್ರ ಅದನ್ನು ಮೆಟ್ಟಿ ನಿಲ್ಲಲು ಪ್ರಯತ್ನಿಸುತ್ತೇವೆ. ನಮ್ಮಲ್ಲಿರುವ ವಿಶಿಷ್ಟ ಶಕ್ತಿಯ ಅರಿವಾದಾಗ ಮಾತ್ರ ಅದನ್ನು ಉಪಯೋಗಿಸಿಕೊಂಡು ಉತ್ತಮ ವ್ಯಕ್ತಿಗಳಾಗಲು ಪ್ರಯತ್ನಿಸುತ್ತೇವೆ. ನಮ್ಮ ಮನಸ್ಸನ್ನೇ ಅರಿಯದೇ ಹೋದಾಗ ಯಾವುದೂ ಸಾಧ್ಯವಿಲ್ಲ. ನಾವೂ ಬದುಕುತ್ತೇವೆ. ಆದರೆ ಅರ್ಥಪೂರ್ಣವಾಗಿಯಲ್ಲ!

ಅಕ್ಕಮಹಾದೇವಿ ಬಹಳ ಹಿಂದೆಯೇ “ಎಲ್ಲ ಎಲ್ಲವನರಿದು ಫಲವೇನಯ್ಯ ತನ್ನ ತಾನರಿಯಬೇಕಲ್ಲವೇ?” ಎಂದಿದ್ದಾರೆ. ಇಲ್ಲಿ ಎಲ್ಲಕ್ಕಿಂತಾ ಮುಖ್ಯವಾದುದೇ ತನ್ನನ್ನು ತಾನು ಅರಿತುಕೊಳ್ಳುವುದು. ಪ್ರತಿಯೊಬ್ಬ ವ್ಯಕ್ತಿಯಲ್ಲೂ ದೌರ್ಬಲ್ಯಗಳು, ಕೆಟ್ಟ ಗುಣಗಳಿರುವಂತೆ ಉತ್ತಮ ಗುಣ, ಶಕ್ತಿಗಳು ಇದ್ದೇ ಇರುತ್ತವೆ. ಕೆಟ್ಟದ್ದನ್ನು ಹತೋಟಿಯಲ್ಲಿರಿಸಿ ಉತ್ತಮವಾದುದನ್ನು ಉದ್ದೀಪನಗೊಳಿಸುವ ವಿವೇಕ ನಮ್ಮಲ್ಲಿ ಮೂಡಬೇಕಾದರೆ ಮೊದಲು ನಮ್ಮನ್ನು ನಾವು ಅರಿಯಬೇಕು! ನೀನೇನನ್ನುತ್ತೀ ಸಖೀ?
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...