Home / ಲೇಖನ / ವಿಜ್ಞಾನ / ತೂತು ಬಿದ್ದ ನೀಲಿ ಛತ್ರಿ !!

ತೂತು ಬಿದ್ದ ನೀಲಿ ಛತ್ರಿ !!

ಈ ಜಗತ್ತೆ ಒಂದು ಜೀವಸಂಕುಲದ ಮಹಾನ್ ಜೀವಶಕ್ತಿ ಇದನ್ನೂ ರಕ್ಷಿಸಲೊಂದು ಬೃಹತ್ ಆಕಾರದ ಛತ್ರಿ, ತೂತು ಬಿದ್ದರೆ ಸೂರ್ಯನ ಕಿರಣ ಒಳನುಗ್ಗಿ ನಮ್ಮನ್ನೇ ಬಲಿ ತೆಗೆದುಕೊಳ್ಳಬಹುದು. ಈಗಾಗಲೇ ಹೀಗಾಗಿದೆ. ಹೊಲಿಯಲು ಆಗದ ಈ ಛತ್ರಿಗೆ ನಾವೇ ಕೆಳನಿಂತು ಪರಿಸರವನ್ನು ಕೆಡಿಸಿ ಸ್ಪೋಟಕಗಳಂಥಹ ಅನಿಷ್ಟ ವಾಯುವನ್ನು ತೂರಿ ತೂತು
ಕೊರದದ್ದು ತೂತು ಬಿದ್ದ ಈ ನೀಲಿ ಛತ್ರಿಯ ಕೆಳಗಿನ ಜೀವ ಸಂಕುಲದ ರಕ್ಷಣೆ ಕಷ್ಟ ಸಾಧ್ಯ. ಇದಕ್ಕೆ ಪರಿಹಾರವನ್ನು ನಾವೇ ಕಂಡುಕೊಂಡು ಇನ್ನಷ್ಟು ಛತ್ರಿ ಹರಿಯದಂತೆ ನೋಡಕೊಳ್ಳಬೇಕಿದೆ ಹಾಗಾದರೆ ಈಗಿರುವ ಅಪಾಯದ ಕ್ಷಣಗಳಲ್ಲಿಯೇ ದಿನಗಳನ್ನು ಕಳೆಯಬಹುದು.

ಈ ಮಾತನ್ನು ಹೇಳಿದ್ದು ಭೂವಾತಾವರದಿಂದ 10 ಕಿ.ಮೀಟರ್ ಮೇಲಿನಿಂದ 40 ಕಿ.ಮೀಟರ್ ವರೆಗೆ ಆಕಾಶಕ್ಕೆ ನೀಲಿ ಪರದೆಯಂತೆ ಹಬ್ಬಿಕೊಂಡಿರುವ ಓಜೋನ್, ಪರದೆ ಈ ಪರದೆ ನೈಸರ್ಗಿಕವಾಗಿಯೇ ಮಾನವ ಜಗತ್ತಿಗೆ ಕೊಟ್ಟ ವರ ಓಜೋನ್ (ಆಮ್ಲಜನಕದ ಬಹುದೂಪ) ತೆಳು ನೀಲಿ ಬಣ್ಣದಿಂದ ಕೂಡಿದ್ದು ನಾವು ಆಕಾಶ ನೋಡಿದಾಗ ಅರಿವಾಗುತ್ತದೆ. ಸೂರ್ಯನೊಂದು ಮೆಗಾವಾಟ್ಸ್‌ನಿಂದ ಉರಿಯುತ್ತಿರುವ ಅಗ್ನಿ ಕುಂಡ, ಇದರಿಂದ ಬರುವ
ಕ್ಷ- ಕಿರಣಗಳು (Ultra Violet Rags) ನೇರವಾಗಿ ಭೂಮಿಗೆ ಬಿದ್ದರೆ ಜೀವಕೋಟಿಗೆ ಅತ್ಯಂತ ಅಪಾಯಕಾರಿ ಪರಿಣಾಮ ಉಂವಾಗುತ್ತದೆ. ಈ ಭೀಕರ ಕಿರಣಗಳನ್ನು ಶಾಂತಗೊಳಿಸಿ ಸೂಕ್ಷ್ಮವಾಗಿ ಭೂಮಿಗೆ ಕಳಿಸುತ್ತವಾದ್ದರಿಂದ ಇದಕ್ಕೆ ‘ರಕ್ಷಾಕವಚ’ ವೆಂದೂ ಕರಯಲಾಗುತ್ತದೆ. ಸೂರ್ಯನ ರಶ್ಮಿಯಲ್ಲಿರುವ ಅಲ್ಟ್ರಾವಾಯೋಲೆಟ್, ಕಿರಣಗಳು ಜೀವಿಗೆ ಮಾರಕವಾದ್ದರಿಂದ ಅದನ್ನು ಫಿಲ್ಬರ್ ಮಾಡಿಕಳಿಸುವುದೇ ಈ ಓಜೋನ್.

ಭೂಮಿಯ ಮೇಲಿನ ಪರಿಸರ ಮಾಲಿನ್ಯದ ತೀವ್ರತೆಯಿಂದಾಗಿ ಅಂದರೆ ಕೈಗಾರಿಕೆಗಳ ಹೊಗೆ, ಅಗ್ನಿ ದುರಂತಗಳ ಪರಿಣಾಮ, ರಾಕೇಟ್, ಜೆಟ್, ವಿಮಾನಗಳ ಇಂಧನ ಉರಿಸುವಿಕೆ (ಈ ಇಂಧನವು ಇಂಗಾಲದ ಮಾನಕ್ಸೈಡ್ ಮತ್ತು ಮತ್ತುಇಂಗಾಲದ ಡೈ ಆಕ್ಸೈಡ್ ಅನಿಲಗಳು ಹೊರಚಲ್ಲುತ್ತದೆ.) ಗಳಿಂದಾಗಿ ಈ ಪರದೆ ಅಲ್ಲಲ್ಲಿ ತೂತು ಬಿದ್ದಿದ್ದರಿಂದ ಸೂರ್ಯನಿಂದ ನೇರವಾಗಿ ಅಲ್ಟ್ರಾವಾಯೊಲೆಟ್ ಕಿರಣಗಳು ಭೂಮಿಯೆಡೆಗೆ ಧಾವಿಸಿ ಬರುತ್ತವೆ. ಈ ಕಾರಣವಾಗಿ ಅತ್ಯಂತ ಅಧಿಕ ಉಷ್ಣತೆಯಿಂದ ಅನೇಕ ಅಪಾಯಗಳಾಗುತ್ತಲಿವೆ. ಮನುಷ್ಯರಿಗೆ ಬರುವ ಚರ್ಮದ ಕ್ಯಾನ್ಸರಿನ ಪ್ರಮಾಣವು ಹೆಚ್ಚುತ್ತಿರುವುದಕ್ಕೆ ಈ ಓಜೋನ್‌ ಪದರದ ಕ್ಷೀಸುವಿಕೆಯೇ ಕಾರಣವಾಗಿದೆ. ನಾವು ಬಳಸುತ್ತಿರುವ ರಾಸಾಯನಿಕಗಳು ವಾಹನಗಳಿಂದ ಕೈಗಾರಿಕೆಗಳಿಂದ ಹೊಮ್ಮುವ ಹೊಗೆಯಲ್ಲಿರುವ ಅನಿಲಗಳು ಓಜೋನ್ ಪದರವನ್ನು ತೂತು ಮಾಡುತ್ತದೆ ಎಂದು ಕಂಡು ಹಿಡಿಯಲಾಗಿದೆ. ಈ ಪದರದ ಕ್ಷೀಣಿಸುವಿಕಗೆ ಇತ್ತೀಚಿಗೆ
ಅಧ್ಯಯನವು ನೈಟ್ರಿಕ್ ಆಕ್ಸೈಡ್ ಪ್ರಬಲ ಕಾರಣವೆಂದು ಹೇಳಿದೆ.

ಅಪಾಯಕಾರಿ ರಾಸಾಯನಿಕ ಗೊಬ್ಬರಗಳು : ಈ ನೈಟ್ರಿಕ್ ಆಕ್ಸೈಡ್ ಅನಿಲವು ಜಗತ್ತಿನಾದ್ಯಂತ ಕೃಷಿಕರು ಬಳಸುತ್ತಿರುವ ಅತೀವ ಪ್ರಮಾಣದ ರಾಸಾಯನಿಕ ಗೊಬ್ಬರಗಳಲ್ಲಿ ಅಧಿಕವಾಗಿದೆ ಎಂದು ಕಂಡು ಹಿಡಿಯಲಾಗಿದೆ. ಇದರಿಂದ ಯಾರೂ ಅರಿಯದಷ್ಟು ಪ್ರಮಾಣದಲ್ಲಿ ದುಷ್ಟರಿಣಾಮ ಬೀರಿದೆ. ಓಜೋನ್ ವಲಯವನ್ನು ಕ್ಷೀಣಿಸುವ ಕ್ಲೋರಿನ್ ಹ್ಯಾಲನ್ ಮತ್ತು ಬ್ರೋಮೈಡ್‌ನಂತಹ ವಸ್ತುಗಳನ್ನು ಬಹಿಷ್ಕರಿಸುವ ಮಾತುಗಳು ಕೇಳಿಬರುತ್ತವೆ. ಹೆಚ್ಚಿನ ಪ್ರಮಾಣದಲ್ಲಿ ಉತ್ಪನ್ನಗೊಳ್ಳಲು ಕೃಷಿಕರು ಬಳಸುತ್ತಿರುವ ರಾಸಾಯನಿಕ ಗೊಬ್ಬರಗಳು ಮುಖ್ಯಕಾರಣವಾಗಿದೆ. ಪ್ರತಿವರ್ಷಕ್ಕಿಂತ ವರ್ಷವೂ ಹೆಚ್ಚಿನ ಪ್ರಮಾಣದಲ್ಲಿ ಈ ಗೊಬ್ಬರಗಳು ಮುಖ್ಯಕಾರಣವಾಗಿವೆ. ಪ್ರತಿವರ್ಷಕ್ಕಿಂತ ವರ್ಷವೂ ಹೆಚ್ಚಿನ ಪ್ರಮಾಣದಲ್ಲಿ ಈ ಗೊಬ್ಬರಗಳು ಭೂಮಿಯನ್ನು ಸೇರುತ್ತವೆ. ಈ ಕಾರಣವಾಗಿ ಓಜೋನ್ ದುರ್ಬಲಗೊಳುತ್ತದೆ.

ಓಜೋನ್‌ ಪರದೆಯು ದುರ್ಬಲಗೊಂಡು ಕ್ಷೀಣಿಸುವುದು ತಡೆಗಟ್ಟಲು ಇಂಥಹ ರಾಸಾಯನಿಕವನ್ನು ಬಳಸದೇ ಇರುವುದು, ಅಗ್ನಿದುರಂತಗಳನ್ನು ತಡೆಯುವುದು ಪರಿಸರವನ್ನು ಮಲಿನಗೊಳಿಸದೇ ಇರುವುದೇ ಆಗಿದೆ. ಈ ನಿಟ್ಟಿನಲ್ಲಿ ಚಿಂತಿಸಲು ವಿಶ್ವದ ಅನೇಕ ವಿಜ್ಞಾನಿಗಳು ಸೇರುತ್ತಿದ್ದಾರೆ. ಅಮೇರಿಕಾದ ವಿಜ್ಞಾನಿಗಳು ಮುಂದುವರೆದು ತೂತುಬಿದ್ದು ಸ್ಥಳವನ್ನು ತೇಪೆ ಹಾಕಲು ಪ್ರಯತ್ನ ಪಟ್ಟರೂ ಫಲಕಾಣಲಾಗಿಲ್ಲ.
************

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...