ತೂತು ಬಿದ್ದ ನೀಲಿ ಛತ್ರಿ !!

ಈ ಜಗತ್ತೆ ಒಂದು ಜೀವಸಂಕುಲದ ಮಹಾನ್ ಜೀವಶಕ್ತಿ ಇದನ್ನೂ ರಕ್ಷಿಸಲೊಂದು ಬೃಹತ್ ಆಕಾರದ ಛತ್ರಿ, ತೂತು ಬಿದ್ದರೆ ಸೂರ್ಯನ ಕಿರಣ ಒಳನುಗ್ಗಿ ನಮ್ಮನ್ನೇ ಬಲಿ ತೆಗೆದುಕೊಳ್ಳಬಹುದು. ಈಗಾಗಲೇ ಹೀಗಾಗಿದೆ. ಹೊಲಿಯಲು ಆಗದ ಈ ಛತ್ರಿಗೆ ನಾವೇ ಕೆಳನಿಂತು ಪರಿಸರವನ್ನು ಕೆಡಿಸಿ ಸ್ಪೋಟಕಗಳಂಥಹ ಅನಿಷ್ಟ ವಾಯುವನ್ನು ತೂರಿ ತೂತು
ಕೊರದದ್ದು ತೂತು ಬಿದ್ದ ಈ ನೀಲಿ ಛತ್ರಿಯ ಕೆಳಗಿನ ಜೀವ ಸಂಕುಲದ ರಕ್ಷಣೆ ಕಷ್ಟ ಸಾಧ್ಯ. ಇದಕ್ಕೆ ಪರಿಹಾರವನ್ನು ನಾವೇ ಕಂಡುಕೊಂಡು ಇನ್ನಷ್ಟು ಛತ್ರಿ ಹರಿಯದಂತೆ ನೋಡಕೊಳ್ಳಬೇಕಿದೆ ಹಾಗಾದರೆ ಈಗಿರುವ ಅಪಾಯದ ಕ್ಷಣಗಳಲ್ಲಿಯೇ ದಿನಗಳನ್ನು ಕಳೆಯಬಹುದು.

ಈ ಮಾತನ್ನು ಹೇಳಿದ್ದು ಭೂವಾತಾವರದಿಂದ 10 ಕಿ.ಮೀಟರ್ ಮೇಲಿನಿಂದ 40 ಕಿ.ಮೀಟರ್ ವರೆಗೆ ಆಕಾಶಕ್ಕೆ ನೀಲಿ ಪರದೆಯಂತೆ ಹಬ್ಬಿಕೊಂಡಿರುವ ಓಜೋನ್, ಪರದೆ ಈ ಪರದೆ ನೈಸರ್ಗಿಕವಾಗಿಯೇ ಮಾನವ ಜಗತ್ತಿಗೆ ಕೊಟ್ಟ ವರ ಓಜೋನ್ (ಆಮ್ಲಜನಕದ ಬಹುದೂಪ) ತೆಳು ನೀಲಿ ಬಣ್ಣದಿಂದ ಕೂಡಿದ್ದು ನಾವು ಆಕಾಶ ನೋಡಿದಾಗ ಅರಿವಾಗುತ್ತದೆ. ಸೂರ್ಯನೊಂದು ಮೆಗಾವಾಟ್ಸ್‌ನಿಂದ ಉರಿಯುತ್ತಿರುವ ಅಗ್ನಿ ಕುಂಡ, ಇದರಿಂದ ಬರುವ
ಕ್ಷ- ಕಿರಣಗಳು (Ultra Violet Rags) ನೇರವಾಗಿ ಭೂಮಿಗೆ ಬಿದ್ದರೆ ಜೀವಕೋಟಿಗೆ ಅತ್ಯಂತ ಅಪಾಯಕಾರಿ ಪರಿಣಾಮ ಉಂವಾಗುತ್ತದೆ. ಈ ಭೀಕರ ಕಿರಣಗಳನ್ನು ಶಾಂತಗೊಳಿಸಿ ಸೂಕ್ಷ್ಮವಾಗಿ ಭೂಮಿಗೆ ಕಳಿಸುತ್ತವಾದ್ದರಿಂದ ಇದಕ್ಕೆ ‘ರಕ್ಷಾಕವಚ’ ವೆಂದೂ ಕರಯಲಾಗುತ್ತದೆ. ಸೂರ್ಯನ ರಶ್ಮಿಯಲ್ಲಿರುವ ಅಲ್ಟ್ರಾವಾಯೋಲೆಟ್, ಕಿರಣಗಳು ಜೀವಿಗೆ ಮಾರಕವಾದ್ದರಿಂದ ಅದನ್ನು ಫಿಲ್ಬರ್ ಮಾಡಿಕಳಿಸುವುದೇ ಈ ಓಜೋನ್.

ಭೂಮಿಯ ಮೇಲಿನ ಪರಿಸರ ಮಾಲಿನ್ಯದ ತೀವ್ರತೆಯಿಂದಾಗಿ ಅಂದರೆ ಕೈಗಾರಿಕೆಗಳ ಹೊಗೆ, ಅಗ್ನಿ ದುರಂತಗಳ ಪರಿಣಾಮ, ರಾಕೇಟ್, ಜೆಟ್, ವಿಮಾನಗಳ ಇಂಧನ ಉರಿಸುವಿಕೆ (ಈ ಇಂಧನವು ಇಂಗಾಲದ ಮಾನಕ್ಸೈಡ್ ಮತ್ತು ಮತ್ತುಇಂಗಾಲದ ಡೈ ಆಕ್ಸೈಡ್ ಅನಿಲಗಳು ಹೊರಚಲ್ಲುತ್ತದೆ.) ಗಳಿಂದಾಗಿ ಈ ಪರದೆ ಅಲ್ಲಲ್ಲಿ ತೂತು ಬಿದ್ದಿದ್ದರಿಂದ ಸೂರ್ಯನಿಂದ ನೇರವಾಗಿ ಅಲ್ಟ್ರಾವಾಯೊಲೆಟ್ ಕಿರಣಗಳು ಭೂಮಿಯೆಡೆಗೆ ಧಾವಿಸಿ ಬರುತ್ತವೆ. ಈ ಕಾರಣವಾಗಿ ಅತ್ಯಂತ ಅಧಿಕ ಉಷ್ಣತೆಯಿಂದ ಅನೇಕ ಅಪಾಯಗಳಾಗುತ್ತಲಿವೆ. ಮನುಷ್ಯರಿಗೆ ಬರುವ ಚರ್ಮದ ಕ್ಯಾನ್ಸರಿನ ಪ್ರಮಾಣವು ಹೆಚ್ಚುತ್ತಿರುವುದಕ್ಕೆ ಈ ಓಜೋನ್‌ ಪದರದ ಕ್ಷೀಸುವಿಕೆಯೇ ಕಾರಣವಾಗಿದೆ. ನಾವು ಬಳಸುತ್ತಿರುವ ರಾಸಾಯನಿಕಗಳು ವಾಹನಗಳಿಂದ ಕೈಗಾರಿಕೆಗಳಿಂದ ಹೊಮ್ಮುವ ಹೊಗೆಯಲ್ಲಿರುವ ಅನಿಲಗಳು ಓಜೋನ್ ಪದರವನ್ನು ತೂತು ಮಾಡುತ್ತದೆ ಎಂದು ಕಂಡು ಹಿಡಿಯಲಾಗಿದೆ. ಈ ಪದರದ ಕ್ಷೀಣಿಸುವಿಕಗೆ ಇತ್ತೀಚಿಗೆ
ಅಧ್ಯಯನವು ನೈಟ್ರಿಕ್ ಆಕ್ಸೈಡ್ ಪ್ರಬಲ ಕಾರಣವೆಂದು ಹೇಳಿದೆ.

ಅಪಾಯಕಾರಿ ರಾಸಾಯನಿಕ ಗೊಬ್ಬರಗಳು : ಈ ನೈಟ್ರಿಕ್ ಆಕ್ಸೈಡ್ ಅನಿಲವು ಜಗತ್ತಿನಾದ್ಯಂತ ಕೃಷಿಕರು ಬಳಸುತ್ತಿರುವ ಅತೀವ ಪ್ರಮಾಣದ ರಾಸಾಯನಿಕ ಗೊಬ್ಬರಗಳಲ್ಲಿ ಅಧಿಕವಾಗಿದೆ ಎಂದು ಕಂಡು ಹಿಡಿಯಲಾಗಿದೆ. ಇದರಿಂದ ಯಾರೂ ಅರಿಯದಷ್ಟು ಪ್ರಮಾಣದಲ್ಲಿ ದುಷ್ಟರಿಣಾಮ ಬೀರಿದೆ. ಓಜೋನ್ ವಲಯವನ್ನು ಕ್ಷೀಣಿಸುವ ಕ್ಲೋರಿನ್ ಹ್ಯಾಲನ್ ಮತ್ತು ಬ್ರೋಮೈಡ್‌ನಂತಹ ವಸ್ತುಗಳನ್ನು ಬಹಿಷ್ಕರಿಸುವ ಮಾತುಗಳು ಕೇಳಿಬರುತ್ತವೆ. ಹೆಚ್ಚಿನ ಪ್ರಮಾಣದಲ್ಲಿ ಉತ್ಪನ್ನಗೊಳ್ಳಲು ಕೃಷಿಕರು ಬಳಸುತ್ತಿರುವ ರಾಸಾಯನಿಕ ಗೊಬ್ಬರಗಳು ಮುಖ್ಯಕಾರಣವಾಗಿದೆ. ಪ್ರತಿವರ್ಷಕ್ಕಿಂತ ವರ್ಷವೂ ಹೆಚ್ಚಿನ ಪ್ರಮಾಣದಲ್ಲಿ ಈ ಗೊಬ್ಬರಗಳು ಮುಖ್ಯಕಾರಣವಾಗಿವೆ. ಪ್ರತಿವರ್ಷಕ್ಕಿಂತ ವರ್ಷವೂ ಹೆಚ್ಚಿನ ಪ್ರಮಾಣದಲ್ಲಿ ಈ ಗೊಬ್ಬರಗಳು ಭೂಮಿಯನ್ನು ಸೇರುತ್ತವೆ. ಈ ಕಾರಣವಾಗಿ ಓಜೋನ್ ದುರ್ಬಲಗೊಳುತ್ತದೆ.

ಓಜೋನ್‌ ಪರದೆಯು ದುರ್ಬಲಗೊಂಡು ಕ್ಷೀಣಿಸುವುದು ತಡೆಗಟ್ಟಲು ಇಂಥಹ ರಾಸಾಯನಿಕವನ್ನು ಬಳಸದೇ ಇರುವುದು, ಅಗ್ನಿದುರಂತಗಳನ್ನು ತಡೆಯುವುದು ಪರಿಸರವನ್ನು ಮಲಿನಗೊಳಿಸದೇ ಇರುವುದೇ ಆಗಿದೆ. ಈ ನಿಟ್ಟಿನಲ್ಲಿ ಚಿಂತಿಸಲು ವಿಶ್ವದ ಅನೇಕ ವಿಜ್ಞಾನಿಗಳು ಸೇರುತ್ತಿದ್ದಾರೆ. ಅಮೇರಿಕಾದ ವಿಜ್ಞಾನಿಗಳು ಮುಂದುವರೆದು ತೂತುಬಿದ್ದು ಸ್ಥಳವನ್ನು ತೇಪೆ ಹಾಕಲು ಪ್ರಯತ್ನ ಪಟ್ಟರೂ ಫಲಕಾಣಲಾಗಿಲ್ಲ.
************

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಎದೆಯೊಳು ಮೊರೆದಿದೆ ಒಂದೇ ಸಮನೆ
Next post ಅರಿತವೇನು ಅಂತರಾಳವ?

ಸಣ್ಣ ಕತೆ

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

  • ತನ್ನೊಳಗಣ ಕಿಚ್ಚು

    ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

cheap jordans|wholesale air max|wholesale jordans|wholesale jewelry|wholesale jerseys