Home / ಕವನ / ಕವಿತೆ / ಶಿಲ್ಪಿ

ಶಿಲ್ಪಿ

ಕೆಂಪು ವಜ್ರ ನೀಲ ಪುಷ್ಯ
ರಾಗ ವೈಡೂರ್ಯವು
ಚಂಪರಾಗ ಚಂದ್ರಕಾಂತ
ನಾಗ ಗೋಮೇಧಿಕ

ಇಂತು ನೋಡಿ ಒಡೆದು ಕಡೆದು
ತಿಕ್ಕಿ ನಾಸಿಕ್ಕಿದೆ
ಚಿಂತೆಯಲ್ಲಿ ಸಾಣೆಯಿಟ್ಟು
ಮಿಕ್ಕುವನ್ನಿಕ್ಕಿದೆ

ಇಡಲು ಕಳಸ ಗೋಪುರಾದಿ
ರತುನ ಮಂದಿರಕೆನೆ
ನುಡಿಯ ಗಣಿಗಳಿಂದ ತೆಗೆದೆ
ರತುನ ಗಲ್ಲೆಂಬಿವ

ಹೂಡಿ ನೋಡಿ ತೋರಣಾದಿ
ಅಕ್ಷರಾಲಯಕನೆ
ಜೋಡಿಸಿಹೆನು ರೂಢಿಯೊಳಗೆ
ಅಕ್ಷರಾಲಯವಿದ

ಕಣ್ಣಿವೆಂದು ಉಣ್ಣದಂಥ
ರೂಪ ಸೌಂದಯ್ಯವು!
ಅಣ್ಣ ಕೇಳು ಚಲ್ವರೂಹ
ರೂಪ ರಾಗಾದಿಯು

ದ್ವಾರ ತೋರಣಾದಿಯಿಲ್ಲಿ
ಬಿಜಯಿಸೈ! ಅತಿಧಿಯೆ!
ದ್ವಾರ ದರ್ಪಣಾದಿಯಲ್ಲಿ
ಬಿಜಯಿಸೈ ಪಧಿಕನೆ

ಸಾಗಿ ಮುಂದೆ ನೀಡು‌ಅಲ್ಲಿ
ಅತ್ತಲಲ್ಲಿ ಕರಗಳ!
ರಾಗಿಣಿಯರು ಬಂದರಲ್ಲಿ
ಮತ್ತಕಾಶಿನಿಯರು!

ಇಲ್ಲಿ ಸಾಲಗೊಂಬೆ ನೋಡು
ನೋಡು ಕೈಸಾಲೆಯ!
ಇಲ್ಲಿ ಏರುಗಲ್ಲ ರಾಜಿ
ನೋಡು ವೈಭೋಗವ!

ಭೋಗ ಸಾಧ್ಯ ಸ್ವಪ್ನ ಸುಧೆಯ
ದೆಂದೆಯಾ ಈ ದಿನ
ಯೋಗ ಸಾಧ್ಯವೆಂಬ ರೂಪಿ
ವೆಂದೆಯಾ! ಈ ದಿನ!

ಏಳುನೆಲೆಯ ಶಿರಿಯನಲ್ಲಿ
ಶೀಲನೀ ಕಂಡೆಯ
ಭಾಳವುಂಡು ದಣಿದೆನೆಂದು
ಲೋಲನೀನೆಂದೆಯ!

ಇಷ್ಟು ರೂಪು ನೋಡಿ ದಿಟ್ಟಿ
ನೊಂದುದೇ ನೆಂಬೆಯ
ಇಷ್ಟ ದೈವ! ಕಾಣಲಿಲ್ಲ!
ವೆಂದಿತೇ ಹೃದಯವು!

ಕಾಣಲಿಲ್ಲ ಕಾಂತೆಯನ್ನು
ಕಾಂತೆಯೆಲ್ಲೆಂದಿತೆ?
ಜಾಣ ತಿರುಗು ವಳಗೆ ನೋಡು
ಕ್ಲಾಂತ! ನೀ ಮುಂಗಡೆ.

ಬಿಗಿದು ಆಶೆ ಬಿಗಿದು ಊಹೆ
ಮುಗುದ! ಮೆಲ್ಲನಡಿಯಿಡು
ಮುಗಿಲಿನಂತೆ ತೆರೆಯ ಕಡೆಗೆ
ಮುಗುದ! ಮೆಲ್ಲನಡಿಯಿಡು.

ಏಳು ಹೊಸಿಲ ದಾಟ ಬೇಕು
ಏಳು ತರೆಯ ಹಾರಿಸಿ
ಏಳು ವರಣ ಜೋತಿ ರಾಜಿ
ಏಳ ನೀ ದಾಟುವೆ.

ತೆರೆಯ ಶೆಳೆದು ನೋಡು ವಳಗೆ
ಇರುವ ಮೂರ್ತಿ ಯಾವುದು?
ಶಿರಿನಿಕೇತನಕ್ಕೆ ಈಕೆ
ಅರಿಯೆ ನೀ ರಾಣಿಯು!

ಬಲ್ಲೆ ಬಲೆ! ನೀನು ಇವಳ
ಬಲ್ಲೆಯೈಯ್ಯ! ಅತಿಥಿಯೆ!
ಚಲ್ಪ ರೂಹ ತೇಜದಲ್ಲಿ
ಎಲ್ಲೋ ನೀ ಮಿಂದಿಹೆ.

ಇದುವೆ ಪದುಮವನ್ನು ಹುಡಕಿ
ಭ್ರಮರ ಕೋರಿಕೆಗಳು
ಚದುರ! ತಿರುಗಿ ಯೇಳು ಲೋಕ
ಅಮಮ! ಹಿಂದಿರುಗಿವೆ.

ಹೃದಯ ರಮೆಯನದಯಳೆಂದು
ವಿರಹಿ ನೀ ನೊಂದೆಯ?
ಚದುರೆಯನ್ನು ವಿರಹ ಮನವು
ಅರಸಿ ಕಾಣದಿದ್ದಿತೇ?

ನೀನು ಕಂಡು ಭ್ರಮಿಸಿ ಪೋದ
ನಾಳೆಯೆಂಬಾದಿನ
ರಾಣಿ! ನಿನ್ನ ಧ್ಯಾನದಲ್ಲಿ
ಭಾಳ ಮೈಮರೆತಿರೆ

ಚಂಡಬಲರು ದೈತ್ಯ ಸುತರು
ದೂರ ನೀರವರಿರೆ!
ಕಂಡು ಶೆಳೆದು ವೊಯ್ದರವಳ
ನೀರು ಯೇಳ ರಾಚೆಗೆ!

ರಸಿಕ ! ನಿನ್ನ ನೆನಹಿನಲ್ಲಿ
ಕನಲುತಿರ್ದೀಕೆಯ
ಸಸಿಯ ಮೊಗವ ಕಂಡೆನೊಮ್ಮ
ಕನಸ ಸಂಚರಿಯಲಿ.

ಕಮಲ ನಾಳ ದೊಳಗೆ ಯಿಳಿದು
ಕಂಡೆ ನಾ ಶರೆಮನೆ.
ರಮಣಿ ಇವಳ ಬಿಡಿಸಿ ತಂದೆ
ಪುಂಡರಂ ಖಂಡ್ರಿಸಿ.

ನುಡಿಯ ಲಲಿತ ಗೃಹವ ಕಟ್ಟಿ
ಕುವರಿಯನ್ನಿಟ್ಟೆನು,
ಒಡನೆ ಛಲವ ಹಿಡಿದವಳವಳು
ಅವನ ತೋರೆನುತಲಿ!

ರತುನ ದ್ವಾರ ಮುಚ್ಚದಿಹುದು
ಸತತ ರಾಗಿಣಿಯರು
ಪಧಿಕ! ರಸಿಕ! ಬರುವನೆಂದು
ಸತತ ಕಾದಿರುವರು!
*****

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಎಂ ಎನ್ ಎಸ್ ರಾವ್