ತೀ ನಂ ಶ್ರೀ

ಕತ್ತೆತ್ತಿ ನೋಡಿದಲ್ಲದೆ ಕಾಣರೆಂಬಷ್ಟು
ಎತ್ತರಕೆ ಬೆಳೆದಂಥ ಸತ್ಯಕಾಮರು ನೀವು.
ನೀವೆತ್ತಿದರೆ ನಿಮ್ಮ ಬುದ್ಧಿಭುಜದಲಿ ನಿಂತು
ಹೆದ್ದಲೆಯ ನೆಮ್ಮಿ ಏನೆಲ್ಲ ನೋಡಿದೆವು!
ಹಳೆಮಾತಿನೊಡಲಲ್ಲಿ ಕುದಿವ ಜೀವನರಸದ
ಕಡಲ ಚಿತ್ರವನು ಕಣ್ಣಾಗಿ ಈಜಿದೆವು.

ಪ್ರಕ್ಷೇಪ ಲೋಪ ಲಿಪಿಕಾರನಕ್ಷರಪಾಪ
ಕೋಪಗತ್ತರಿ ಬಾಯ್ಗೆ ಕೈಕಾಲುಗಳ ತೆತ್ತು,
ಮುಖಸತ್ತು ನರಳುವೆಷ್ಟೋ ಮಾತ ಎಡೆ ಹಿಡಿದು
ಹೆಕ್ಕಿ ಕರುಣೆಯಲಿ ಮುಖ ಮೈ ಸವರಿ ನೇಹದಲಿ,
ಗತಜೀವನದ ಶೋಕಕಥೆಗೆ ಕಿವಿಗೊಟ್ಟಿರಿ,
ಮೈತಿದ್ದಿ ಮತ್ತೆ ಮುನ್ನಿನ ಬಾಳನಿತ್ತಿರಿ.

ಮಾಸಿದ ಮಹಾಚಿತ್ರಗಳ ಗೆರೆಗಳನು ತಿದ್ದಿ
ಮತ್ತೆ ಮೆರುಗಿತ್ತ ನುಡಿಚಿತ್ರಕಾರರು ನೀವು;
ಬಿತ್ತದಲಿ ಮರ ಕಂಡ ಬುದ್ಧಿಭೀಮರು. ನಮ್ಮ
ನುಡಿಗಂಟನೆಷ್ಟೊ ಬಿಚ್ಚಿದಿರಿ, ಮೆಚ್ಚುವ ರೀತಿ
ಹೊಚ್ಚಿದಿರಿ ಶಾಸ್ತ್ರವಸ್ತ್ರವನು ಕಾವ್ಯದ ಮೈಗೆ.

ಮುಖದೆಲ್ಲ ಚೆಲುವು ಮಡಿ ಗೆಲುವು ಎತ್ತರ ನಿಲುವೆ
ಗೆರೆಗೊಂಡಿತೆಂಬಂತೆ ಸ್ವಲ್ಪ ಬರೆದಿರಿ. ಏಕೆ,
ಹತ್ತು ತಲೆ ಬೇಕೆ ಚೆಲುವನು ಮೆರೆಸೆ? ರಾಮರುಚಿ;
ಎಲ್ಲ ಬಳಸಲೆಬೇಕು ನಿತ್ಯಪಾರಾಯಣಕೆ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಿಯಮ
Next post ತೇರು ಎಳೆ

ಸಣ್ಣ ಕತೆ

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…

cheap jordans|wholesale air max|wholesale jordans|wholesale jewelry|wholesale jerseys