ಸಂತೆ

ಸಂತೆಯಲಿ ಕಿಷ್ಕಿಂದೆ ಯಾರಿದ್ದಾರೆ
ಯಾರಿಲ್ಲ ತುಳಿಸಿಕೊಂಡ ದಾರಿಯ
ಮೈಯಲ್ಲ ಗಾಯ ಮತ್ತು ತಲ್ಲಣಗಳು
ಸೋಜಿಗದ ವಾರೆ ನೋಟಗಳು
ತಕ್ಕಡಿ ಹಿಡಿದು ತೂಗುವರ ಕೈ ಸೋಲು.

ಬರುತ್ತಾರೆ ಎಲ್ಲರೂ ಈ ನೆಲದಲ್ಲಿ
ಕಾಲೂರಿ ವ್ಯಾಪಾರ ವಹಿವಾಟು
ವರ್ತಮಾನಕ್ಕೆ ಬೇಕು ಬೆಳಕಾದ ಇತಿಹಾಸ
ಶಕ್ತಿ ಇದ್ದವರು ಇಲ್ಲದವರು ಅವರವರೇ
ನಡೆಯುವ ತ್ರಾಣ ರಂಗದಲಿ ಬರೀ ಗೌಜು.

ಬೀಜಕ್ಕಳಿದ ಆಕಾಶದ ಹನಿ
ಬೆಟ್ಟವಿಳಿದು ಬಂದ ಗಾಳಿ ಬಲದಂಡೆ
ಹರಿಯುವ ನದಿ ಮೈ ಮರೆತು ಕ್ರಿಯೆ
ಕ್ಷಣಕ್ಕೆ ಕದ ಝಣಝಣ ಹಣ ಹರಿವು
ಹರಿದ ಮಾತುಗಳು ಅರ್ಥದಲಿ ಪರಾಭವ.

ಎಲ್ಲೆಲ್ಲೋ ಹುಟ್ಟಿದ ಭಾವ ಹರಿದು ಬಂದ
ಸಾಗಿ ಬಂದ ದಾರಿಯೇರು ಕರ್ಮಕ್ಕೆ ಕೆಲಸ
ಮುಟ್ಟಲಾಗದ ಹಿಮಾಲಯ ಎತ್ತರ
ಗುಡಿಸಲ ಮುಂದೆ ತೇಲಿದ ಕಂದೀಲು
ಕಾರುಬಾರು ಮಣ್ಣ ಮಡಿಕೆ ತುಂಬ ಬೀಜಗಳು.

ಕಾಯುವ ಕಳವಳಿಸುವ ನೋಯುವ
ಲೋಕಾಲೋಕ ತುದಿಗಾಲಲಿ ನಿಂತು
ಮಂತ್ರ-ತಂತ್ರ ಯುದ್ಧಗಳ ಮೇಳ
ಆಟಿಕೆ ಹೂಡಿದದಾಳ ಮುಗ್ಗರಿಸಿದ ಹೊಸಿಲು
ಚಿಂತೆ ಕಲಿಸಿದ ಆಧುನಿಕ ಪರಾಭವ

ಯಾರಿಗೂ ಯಾರೂ ಗೊತ್ತಿಲ್ಲ ಶಬ್ದಗಳ ಸಂತೆಯಲಿ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಾರಜನಕ ಸ್ಥಿರೀಕರಣ
Next post ಕಾವ್ಯ ಸಂಜೆ

ಸಣ್ಣ ಕತೆ

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ಒಂಟಿ ತೆಪ್ಪ

    ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ… Read more…

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

cheap jordans|wholesale air max|wholesale jordans|wholesale jewelry|wholesale jerseys