ಸಂತೆ

ಸಂತೆಯಲಿ ಕಿಷ್ಕಿಂದೆ ಯಾರಿದ್ದಾರೆ
ಯಾರಿಲ್ಲ ತುಳಿಸಿಕೊಂಡ ದಾರಿಯ
ಮೈಯಲ್ಲ ಗಾಯ ಮತ್ತು ತಲ್ಲಣಗಳು
ಸೋಜಿಗದ ವಾರೆ ನೋಟಗಳು
ತಕ್ಕಡಿ ಹಿಡಿದು ತೂಗುವರ ಕೈ ಸೋಲು.

ಬರುತ್ತಾರೆ ಎಲ್ಲರೂ ಈ ನೆಲದಲ್ಲಿ
ಕಾಲೂರಿ ವ್ಯಾಪಾರ ವಹಿವಾಟು
ವರ್ತಮಾನಕ್ಕೆ ಬೇಕು ಬೆಳಕಾದ ಇತಿಹಾಸ
ಶಕ್ತಿ ಇದ್ದವರು ಇಲ್ಲದವರು ಅವರವರೇ
ನಡೆಯುವ ತ್ರಾಣ ರಂಗದಲಿ ಬರೀ ಗೌಜು.

ಬೀಜಕ್ಕಳಿದ ಆಕಾಶದ ಹನಿ
ಬೆಟ್ಟವಿಳಿದು ಬಂದ ಗಾಳಿ ಬಲದಂಡೆ
ಹರಿಯುವ ನದಿ ಮೈ ಮರೆತು ಕ್ರಿಯೆ
ಕ್ಷಣಕ್ಕೆ ಕದ ಝಣಝಣ ಹಣ ಹರಿವು
ಹರಿದ ಮಾತುಗಳು ಅರ್ಥದಲಿ ಪರಾಭವ.

ಎಲ್ಲೆಲ್ಲೋ ಹುಟ್ಟಿದ ಭಾವ ಹರಿದು ಬಂದ
ಸಾಗಿ ಬಂದ ದಾರಿಯೇರು ಕರ್ಮಕ್ಕೆ ಕೆಲಸ
ಮುಟ್ಟಲಾಗದ ಹಿಮಾಲಯ ಎತ್ತರ
ಗುಡಿಸಲ ಮುಂದೆ ತೇಲಿದ ಕಂದೀಲು
ಕಾರುಬಾರು ಮಣ್ಣ ಮಡಿಕೆ ತುಂಬ ಬೀಜಗಳು.

ಕಾಯುವ ಕಳವಳಿಸುವ ನೋಯುವ
ಲೋಕಾಲೋಕ ತುದಿಗಾಲಲಿ ನಿಂತು
ಮಂತ್ರ-ತಂತ್ರ ಯುದ್ಧಗಳ ಮೇಳ
ಆಟಿಕೆ ಹೂಡಿದದಾಳ ಮುಗ್ಗರಿಸಿದ ಹೊಸಿಲು
ಚಿಂತೆ ಕಲಿಸಿದ ಆಧುನಿಕ ಪರಾಭವ

ಯಾರಿಗೂ ಯಾರೂ ಗೊತ್ತಿಲ್ಲ ಶಬ್ದಗಳ ಸಂತೆಯಲಿ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಾರಜನಕ ಸ್ಥಿರೀಕರಣ
Next post ಕಾವ್ಯ ಸಂಜೆ

ಸಣ್ಣ ಕತೆ

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

cheap jordans|wholesale air max|wholesale jordans|wholesale jewelry|wholesale jerseys