Home / ಕವನ / ಕವಿತೆ / ಚಾರೋ ಯಾರೋ ಅಲಿ ಪಾದಕ್ಕೆರಗಿ

ಚಾರೋ ಯಾರೋ ಅಲಿ ಪಾದಕ್ಕೆರಗಿ

ಚಾರೋ ಯಾರೋ ಅಲಿ ಪಾದಕ್ಕೆರಗಿ                 !|ಪ||

ಧರಿಸ್ಥಲದಿ ವಿರಾಟ ನಗರದಲ್ಲಿ
ಪಾಂಡವರ ಗುರುತವು ತಿಳಿದುಬಂದು
ಇರಲಿಕ್ಕಾಗಿ ತ್ವರಿತದಿ ಸಾಗಿ ಕೌರವರನ್ನು ನೀಗಿ
ಧರಿ ಭಾರಕ್ಕಾಗಿ ಸಾರಿ ಬೀಳಬೇಕನ್ನುತ ದಕ್ಷಿಣಭಾಗಕ್ಕೇರಿ  ||೧||

ಮಾರ್ಗ ಹಿಡಿದು ಬರುವ ಕಾಲದಲ್ಲಿ
ಮದೀನದ ಸ್ವರ್ಗಮಾನ
ಆ ಶಹರಿನೊಳು ಮಹಮ್ಮದನಿರಲು
ಯಮಜಗೆ ತೋರಲು ಭೂಮಿಪತಿ ಸಾರಲು
ಭೀಮನಿದನು ಕಂಡು ಅರ್ಜುನ ನಕುಲ-ಸಹದೇವರೋ      ||೨||

ಅಲ್ಲೇ ಕಂಡು ಹೇಳಿದ ಪಾಂಡವಸಂತರಲ್ಲಿ
ಹಿರಿಯ ಧರ್ಮನಿಗೆ ಕಂಕನಾಗೆನುತ
ಅಲಿ ಪಾತಕಿ ತಾ ಕಲಿ ಕರ್ಮೆನ್ನುತಾ
ನೋಡಿ ಬಂದೆನುತಾ
ಬಾಲೆ ದ್ರೌಪತಿಗೆ ಸೈರೇಂದ್ರಿ ಎಂದೆನಲಾಗಿ                ||೩||

ಜ್ಞಾನ ತಿಳಿದು ಈ ಮನುಜನ
ಕೂನ ತಪ್ಪಿಸಲಾಗಿ
ಶಾರ ಹಾನಗಲ್ಲು ವಿಸ್ತರದಿ ಭಾರ
ಕಾನನದ ಇವರಾ ಸುತ್ತು ವನದಾಕಾರಾ
ತಾನು ತಿಳಿದು ನಿಂತಾನೋ ಕುಂತಿಸುತಾ ಮನಹರುಷದಿ    !|೪||

ಇತ್ತ ಇರಲಿತ್ತ ಇಲ್ಲಿಗೆ
ಹದಿಮೂರು ಸಂವತ್ಸರ
ತಿಳಿದು ಕಾಳಗದೊಳಗೆ ಕಡಿದ
ಕೀಚಕ ಮಡಿದ
ದ್ರೋಣಪರ್ವಿನಮಾತು ಆತೋ ರಿವಾಯತೋ         || ೫ ||

ಅತಿ ಹಿತದ ಭಾರತ
ಕತಿ ಪುರಾಣ
ಹವಣ ಅರಿತು ರಾಧೆ ಹಿಂದಿನಲಿ
ಬಹು ಬಂದಿನಲಿ ವೇದ ಸಂದಿನಲಿ
ಸ್ಥಾನ ಶಿಶುವಿನಾಳಧೀಶನ ದಯದಿಂದ ಪಾಂಡವರೋ   ||೬ ||

*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...