Home / ಕವನ / ಕವಿತೆ / ಚಾರೋ ಯಾರೋ ಅಲಿ ಪಾದಕ್ಕೆರಗಿ

ಚಾರೋ ಯಾರೋ ಅಲಿ ಪಾದಕ್ಕೆರಗಿ

ಚಾರೋ ಯಾರೋ ಅಲಿ ಪಾದಕ್ಕೆರಗಿ                 !|ಪ||

ಧರಿಸ್ಥಲದಿ ವಿರಾಟ ನಗರದಲ್ಲಿ
ಪಾಂಡವರ ಗುರುತವು ತಿಳಿದುಬಂದು
ಇರಲಿಕ್ಕಾಗಿ ತ್ವರಿತದಿ ಸಾಗಿ ಕೌರವರನ್ನು ನೀಗಿ
ಧರಿ ಭಾರಕ್ಕಾಗಿ ಸಾರಿ ಬೀಳಬೇಕನ್ನುತ ದಕ್ಷಿಣಭಾಗಕ್ಕೇರಿ  ||೧||

ಮಾರ್ಗ ಹಿಡಿದು ಬರುವ ಕಾಲದಲ್ಲಿ
ಮದೀನದ ಸ್ವರ್ಗಮಾನ
ಆ ಶಹರಿನೊಳು ಮಹಮ್ಮದನಿರಲು
ಯಮಜಗೆ ತೋರಲು ಭೂಮಿಪತಿ ಸಾರಲು
ಭೀಮನಿದನು ಕಂಡು ಅರ್ಜುನ ನಕುಲ-ಸಹದೇವರೋ      ||೨||

ಅಲ್ಲೇ ಕಂಡು ಹೇಳಿದ ಪಾಂಡವಸಂತರಲ್ಲಿ
ಹಿರಿಯ ಧರ್ಮನಿಗೆ ಕಂಕನಾಗೆನುತ
ಅಲಿ ಪಾತಕಿ ತಾ ಕಲಿ ಕರ್ಮೆನ್ನುತಾ
ನೋಡಿ ಬಂದೆನುತಾ
ಬಾಲೆ ದ್ರೌಪತಿಗೆ ಸೈರೇಂದ್ರಿ ಎಂದೆನಲಾಗಿ                ||೩||

ಜ್ಞಾನ ತಿಳಿದು ಈ ಮನುಜನ
ಕೂನ ತಪ್ಪಿಸಲಾಗಿ
ಶಾರ ಹಾನಗಲ್ಲು ವಿಸ್ತರದಿ ಭಾರ
ಕಾನನದ ಇವರಾ ಸುತ್ತು ವನದಾಕಾರಾ
ತಾನು ತಿಳಿದು ನಿಂತಾನೋ ಕುಂತಿಸುತಾ ಮನಹರುಷದಿ    !|೪||

ಇತ್ತ ಇರಲಿತ್ತ ಇಲ್ಲಿಗೆ
ಹದಿಮೂರು ಸಂವತ್ಸರ
ತಿಳಿದು ಕಾಳಗದೊಳಗೆ ಕಡಿದ
ಕೀಚಕ ಮಡಿದ
ದ್ರೋಣಪರ್ವಿನಮಾತು ಆತೋ ರಿವಾಯತೋ         || ೫ ||

ಅತಿ ಹಿತದ ಭಾರತ
ಕತಿ ಪುರಾಣ
ಹವಣ ಅರಿತು ರಾಧೆ ಹಿಂದಿನಲಿ
ಬಹು ಬಂದಿನಲಿ ವೇದ ಸಂದಿನಲಿ
ಸ್ಥಾನ ಶಿಶುವಿನಾಳಧೀಶನ ದಯದಿಂದ ಪಾಂಡವರೋ   ||೬ ||

*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...