Home / ಕವನ / ಕವಿತೆ / ಚಾರೋ ಯಾರೋ ಅಲಿ ಪಾದಕ್ಕೆರಗಿ

ಚಾರೋ ಯಾರೋ ಅಲಿ ಪಾದಕ್ಕೆರಗಿ

ಚಾರೋ ಯಾರೋ ಅಲಿ ಪಾದಕ್ಕೆರಗಿ                 !|ಪ||

ಧರಿಸ್ಥಲದಿ ವಿರಾಟ ನಗರದಲ್ಲಿ
ಪಾಂಡವರ ಗುರುತವು ತಿಳಿದುಬಂದು
ಇರಲಿಕ್ಕಾಗಿ ತ್ವರಿತದಿ ಸಾಗಿ ಕೌರವರನ್ನು ನೀಗಿ
ಧರಿ ಭಾರಕ್ಕಾಗಿ ಸಾರಿ ಬೀಳಬೇಕನ್ನುತ ದಕ್ಷಿಣಭಾಗಕ್ಕೇರಿ  ||೧||

ಮಾರ್ಗ ಹಿಡಿದು ಬರುವ ಕಾಲದಲ್ಲಿ
ಮದೀನದ ಸ್ವರ್ಗಮಾನ
ಆ ಶಹರಿನೊಳು ಮಹಮ್ಮದನಿರಲು
ಯಮಜಗೆ ತೋರಲು ಭೂಮಿಪತಿ ಸಾರಲು
ಭೀಮನಿದನು ಕಂಡು ಅರ್ಜುನ ನಕುಲ-ಸಹದೇವರೋ      ||೨||

ಅಲ್ಲೇ ಕಂಡು ಹೇಳಿದ ಪಾಂಡವಸಂತರಲ್ಲಿ
ಹಿರಿಯ ಧರ್ಮನಿಗೆ ಕಂಕನಾಗೆನುತ
ಅಲಿ ಪಾತಕಿ ತಾ ಕಲಿ ಕರ್ಮೆನ್ನುತಾ
ನೋಡಿ ಬಂದೆನುತಾ
ಬಾಲೆ ದ್ರೌಪತಿಗೆ ಸೈರೇಂದ್ರಿ ಎಂದೆನಲಾಗಿ                ||೩||

ಜ್ಞಾನ ತಿಳಿದು ಈ ಮನುಜನ
ಕೂನ ತಪ್ಪಿಸಲಾಗಿ
ಶಾರ ಹಾನಗಲ್ಲು ವಿಸ್ತರದಿ ಭಾರ
ಕಾನನದ ಇವರಾ ಸುತ್ತು ವನದಾಕಾರಾ
ತಾನು ತಿಳಿದು ನಿಂತಾನೋ ಕುಂತಿಸುತಾ ಮನಹರುಷದಿ    !|೪||

ಇತ್ತ ಇರಲಿತ್ತ ಇಲ್ಲಿಗೆ
ಹದಿಮೂರು ಸಂವತ್ಸರ
ತಿಳಿದು ಕಾಳಗದೊಳಗೆ ಕಡಿದ
ಕೀಚಕ ಮಡಿದ
ದ್ರೋಣಪರ್ವಿನಮಾತು ಆತೋ ರಿವಾಯತೋ         || ೫ ||

ಅತಿ ಹಿತದ ಭಾರತ
ಕತಿ ಪುರಾಣ
ಹವಣ ಅರಿತು ರಾಧೆ ಹಿಂದಿನಲಿ
ಬಹು ಬಂದಿನಲಿ ವೇದ ಸಂದಿನಲಿ
ಸ್ಥಾನ ಶಿಶುವಿನಾಳಧೀಶನ ದಯದಿಂದ ಪಾಂಡವರೋ   ||೬ ||

*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...