ಗಾರೆಗಲ್ಲಿನ ಕಿಟಕಿ ಮತ್ತು ಮೃದು ಹಸ್ತ

ತೂತುಗಳನ್ನೆ ಹೊದ್ದ
ಗಾರೆಗಲ್ಲಿನ ಬಂಧಿಖಾನೆಗೂ
ಕಳೆಕಟ್ಟಿದೆ.
ಮೃದು ಮಧುರ ಹಸ್ತವೊಂದರ
ಇರುವು

ನಿರ್ಜೀವ ವಸ್ತುವೊಂದನ್ನು ಜೋಪಾನ
ಮಾಡಿದ ಆನಂದ
ಕಟಕಟೆಯ ಗೋಡೆಗೆ.

ನಿರ್ಜೀವತೆಗೂ ಜೀವ
ಭಾವವ ಬೆಸೆದ ಹುರುಪು
ಹಸ್ತಕ್ಕೆ. ಕಲ್ಪನೆಯ
ವ್ಯಾಪ್ತಿ ಸೀಮಾತೀತ.
ಬಂಧನದ ನಡುವೆಯೇ
ಜಗವನ್ನೆ ಗೆಲ್ಲುವ ಜಾಣತನ.

ಅಂದುಕೊಂಡಿದೆ ಕಲ್ಲಿನ ಗೋಡೆ
ಕೋಮಲ ಕೈಗೆ ಎಲ್ಲಿದೆ
ಕಲ್ಲನ್ನು ಗುದ್ದುವ ಪುಡಿ ಮಾಡುವ
ಗತ್ತು ಗೈರತ್ತು.

ಅದರೆ ಆ ಹಸ್ತಕ್ಕೆ ಗೊತ್ತು
ತನ್ನದೊಂದು ಮುಷ್ಟಿ ಪ್ರೀತಿ ಸಾಕು
ಕಲ್ಲಿನ ಮುಷ್ಟಿಯಗಲದ
ಹೃದಯ ಘಾಸಿಗೊಳ್ಳಲು
ಚಿಂದಿಚಿಂದಿಯಾಗಲು,
ಮತ್ತೆಂದು ಗಾರೆಗಲ್ಲು ಕುತಂತ್ರದ
ಕಾಳಜಿ ಪ್ರದರ್ಶಿಸುವ
ಗೋಡೆಯಾಗದೇ.
ತನ್ನ ಮೃದು ಹಸ್ತಕ್ಕೆ ಮದರಂಗಿಯಾಗಿ
ಬರಬಲ್ಲದೆಂದು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪಿಶಾಚಿಗೆ ದೈವದ ಉತ್ತರ
Next post ಶಬರಿ – ೧೦

ಸಣ್ಣ ಕತೆ

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

  • ತೊಳೆದ ಮುತ್ತು

    ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…