ಗಾರೆಗಲ್ಲಿನ ಕಿಟಕಿ ಮತ್ತು ಮೃದು ಹಸ್ತ

ತೂತುಗಳನ್ನೆ ಹೊದ್ದ
ಗಾರೆಗಲ್ಲಿನ ಬಂಧಿಖಾನೆಗೂ
ಕಳೆಕಟ್ಟಿದೆ.
ಮೃದು ಮಧುರ ಹಸ್ತವೊಂದರ
ಇರುವು

ನಿರ್ಜೀವ ವಸ್ತುವೊಂದನ್ನು ಜೋಪಾನ
ಮಾಡಿದ ಆನಂದ
ಕಟಕಟೆಯ ಗೋಡೆಗೆ.

ನಿರ್ಜೀವತೆಗೂ ಜೀವ
ಭಾವವ ಬೆಸೆದ ಹುರುಪು
ಹಸ್ತಕ್ಕೆ. ಕಲ್ಪನೆಯ
ವ್ಯಾಪ್ತಿ ಸೀಮಾತೀತ.
ಬಂಧನದ ನಡುವೆಯೇ
ಜಗವನ್ನೆ ಗೆಲ್ಲುವ ಜಾಣತನ.

ಅಂದುಕೊಂಡಿದೆ ಕಲ್ಲಿನ ಗೋಡೆ
ಕೋಮಲ ಕೈಗೆ ಎಲ್ಲಿದೆ
ಕಲ್ಲನ್ನು ಗುದ್ದುವ ಪುಡಿ ಮಾಡುವ
ಗತ್ತು ಗೈರತ್ತು.

ಅದರೆ ಆ ಹಸ್ತಕ್ಕೆ ಗೊತ್ತು
ತನ್ನದೊಂದು ಮುಷ್ಟಿ ಪ್ರೀತಿ ಸಾಕು
ಕಲ್ಲಿನ ಮುಷ್ಟಿಯಗಲದ
ಹೃದಯ ಘಾಸಿಗೊಳ್ಳಲು
ಚಿಂದಿಚಿಂದಿಯಾಗಲು,
ಮತ್ತೆಂದು ಗಾರೆಗಲ್ಲು ಕುತಂತ್ರದ
ಕಾಳಜಿ ಪ್ರದರ್ಶಿಸುವ
ಗೋಡೆಯಾಗದೇ.
ತನ್ನ ಮೃದು ಹಸ್ತಕ್ಕೆ ಮದರಂಗಿಯಾಗಿ
ಬರಬಲ್ಲದೆಂದು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪಿಶಾಚಿಗೆ ದೈವದ ಉತ್ತರ
Next post ಶಬರಿ – ೧೦

ಸಣ್ಣ ಕತೆ

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…