Home / ಕವನ / ಕವಿತೆ / ಪಿಶಾಚಿಗೆ ದೈವದ ಉತ್ತರ

ಪಿಶಾಚಿಗೆ ದೈವದ ಉತ್ತರ

ಹೊತ್ತು ಮೀರಿತ್ತು
ಮನಸ್ಸು ದಣಿದಿತ್ತು
ತನಗೆ ತಾನೇ ವಿರೋಧಿಸುತಿತ್ತು
ಆಗ ಟಣ್ಣನೆ ಸಿಡಿದೆ ನೀನು
ನಕ್ಷತ್ರಪಥದಿಂದ ಬಿದ್ದ ಶಾಖೆ
ರೂಪಿಸುವಂತೆ ತನ್ನ ದಾರಿಯ ರೇಖೆ
ತಡೆಯಲೆಳಸಿದ್ದೆ
ಕೈಚಾಚಬಯಸಿದ್ದೆ
ಕಾದು ಕೆಂಪಾದ ಕಬ್ಬಿಣದ ತುಂಡು
ಬಡಿವ ಕಮ್ಮಾರನದರ ಕಿಡಿ ಕಂಡು
ಮರೆವಂತೆ ಮೈ ಮರೆತಿದ್ದೆ
ಅದು ಅಂಥ ಘಳಿಗೆ

ಆಹ! ಅದು ಹಾಗಿದ್ದರೆಷ್ಟು ಚೆನ್ನಾಗಿತ್ತು!
ಹಾಗಾಗಲಿಲ್ಲ ನೋಡು
ಮೂಡಿದೆವು ಜತೆಜತೆಯಾಗಿ
ಅಥವ ತುಸು ಹಿಂದುಮುಂದಾಗಿ
ಒಂದು ಎರಡಾಗಿ
ಕ್ರಿಸ್ತ ಪೂರ್ವದ ಯಾವುದೋ ಸಂವತ್ಸರದಲ್ಲಿ
ಯಾರ ದುಗುಡದಲ್ಲಿ
ಬೆಬಿಲೋನಿನಲ್ಲಿ ಯಾವುದೊ ಒಂದು ಗಲ್ಲಿ
ಅಥವ ಮೆಸಪೊಟೇಮಿಯಾದಲ್ಲಿ
ಮೆಕ್ಸಿಕೋದಲ್ಲಿ
ಬೈಜಾಂಟಿಯಮಿನಲ್ಲಿ
ಶಕುನ ನುಡಿದ ಹಲ್ಲಿ
ನನ್ನ ಕನಸಿನಲ್ಲಿ ನೀನು
ನಿನ್ನ ಮನಸ್ಸಿನಲ್ಲಿ ನಾನು

ಪ್ರಳಯವೆನ್ನುವುದು ಕಲ್ಪನೆಯ ಕೊನೆಯೆ
ಎಲ್ಲ ಚಿಂತಿಸಿ ಇನ್ನು ಚಿಂತಿಸಲಾರದ ಭಾವನೆಯೆ
ಕತ್ತಲೆಯೆ, ಬೆಳಕೆ, ಬೆಂಕಿಯ ಮಳೆಯೆ
ಬಿಡಿಸಿಕೊಳ್ಳಲಾಗದ ಕಗ್ಗಂಟಿನ ರಕ್ಕಸ ಬಲೆಯೆ
ಕೊನೆಮೊದಲಿಲ್ಲಿದ ಮೌನದ ಹೊಳೆಯೆ
ಅಖಂಡ ಶಿಲೆಯೇ, ಮರುಭೂಮಿಯೆ
ಇನ್ನೂ ತೆರೆಯದ ಅಜ್ಞಾನದ ನಿಧಿಯೆ
ಸಾವು ಬಿಡುಗಡೆಯೆ
ಒಬ್ಬನ ವಿಧಿಯಲ್ಲಿ ಇನ್ನೊಬ್ಬನದೂ ಇದೆಯೆ
ಯಾಕೆ ಏನೆಂದು ತಿಳಿಯದೆಯೆ
ಕಾಯುತಿರುವೆವೆ ಹೀಗೆ
ಕಲ್ಪನೆಯ ಮರೆಗೆ?
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...