Home / ಕವನ / ಕವಿತೆ / ಭಗತಸಿಂಗ ಮತ್ತು ಸಾವು

ಭಗತಸಿಂಗ ಮತ್ತು ಸಾವು

ಕರಾಳ ರಾಕ್ಷಸರ ಹೊಟ್ಟೆ ಹರಿದು
ಹೊರಗೆ ಬಾ ಭಗತಸಿಂಗ,
ಹೆಣ್ಣಿಗಾಗಿ ಸತ್ತವರ ಕಂಡೆ
ಹೊನ್ನಿಗಾಗಿ ಹೋರಾಡಿದವರ ಕಂಡೆ
ಮಣ್ಣಿಗಾಗಿ ಮಡಿದವರ ಕಂಡೆ,
ಆದರೆ ನಿನ್ನಂತಹ ವೀರನನ್ನು
ಕಾಣಲಿಲ್ಲ ಬಿಡು ಧೀರ.

ಸಾವು ಬಾಗಿಲಲಿ ನಿಂತು
ಕೈ ಬೀಸಿ ಕರೆದಾಗ
ಇಸಂಗಳ ಬಗ್ಗೆ ನಾನಿನ್ನೂ
ಅಭ್ಯಾಸ ಮಾಡಿ ಬರುತ್ತೇನೆ
ಹೋಗು ನಿನಗೆ
ಬೇರೆ ಕೆಲಸವಿಲ್ಲವೇ?
ಎಂದು ಸಾವನ್ನು ದೂರಕಟ್ಟಿದ
ನೀನು ಸಾಯಲಿಲ್ಲ ಬಿಡು ಧೀರ.

ನಿನ್ನ ಕೆಚ್ಚು, ಸ್ವಾಭಿಮಾನಗಳು
ಇಂದಿಗೂ ಸ್ಫೂರ್ತಿಯ ಸೆಲೆಗಳು
ಪರದೇಶಿ ಬಿಳಿಯರಿಗೆ ಸಲಾಮು
ಹೊಡೆಯದ ನೀನೇ
ನಿಜವಾದ ದೇಶಭಕ್ತ.

ಇತಿಹಾಸದ ಪುಟ ಪುಟಗಳಲ್ಲಿಯೂ
ಗಾಂಧಿ, ಗಾಂಧಿಗಳೇ ತುಂಬಿರುವಾಗ,
ಸಂದಿ ಗೊಂದಿಗಳಲ್ಲೂ ನಿನಗೆ
ಸೇರಲು ಜಾಗವಿಲ್ಲದಂತೆ ಮಾಡಿದರು.

ಕುಟಿಲ ಕಾರಸ್ಥಾನಕ್ಕಿಳಿಯದ ನೀನು
ಜನತೆಯ ನಿಜವಾದ ಸ್ನೇಹಿತ
ನಿಜವಾದ ಸ್ವಾತಂತ್ರ್ಯದ ವ್ಯಾಖ್ಯಾನಕಾರ
ನೀನು ಮರಳಿ ಬಾ ಧೀರ,
ಕತ್ತಲೆ ರಾಕ್ಷಸನ ಹೊಟ್ಟೆ ಹರಿದು
ಹೊರಗೆ ಬಾ ವೀರ.
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...