Home / ಕವನ / ಕವಿತೆ / ಭಗತಸಿಂಗ ಮತ್ತು ಸಾವು

ಭಗತಸಿಂಗ ಮತ್ತು ಸಾವು

ಕರಾಳ ರಾಕ್ಷಸರ ಹೊಟ್ಟೆ ಹರಿದು
ಹೊರಗೆ ಬಾ ಭಗತಸಿಂಗ,
ಹೆಣ್ಣಿಗಾಗಿ ಸತ್ತವರ ಕಂಡೆ
ಹೊನ್ನಿಗಾಗಿ ಹೋರಾಡಿದವರ ಕಂಡೆ
ಮಣ್ಣಿಗಾಗಿ ಮಡಿದವರ ಕಂಡೆ,
ಆದರೆ ನಿನ್ನಂತಹ ವೀರನನ್ನು
ಕಾಣಲಿಲ್ಲ ಬಿಡು ಧೀರ.

ಸಾವು ಬಾಗಿಲಲಿ ನಿಂತು
ಕೈ ಬೀಸಿ ಕರೆದಾಗ
ಇಸಂಗಳ ಬಗ್ಗೆ ನಾನಿನ್ನೂ
ಅಭ್ಯಾಸ ಮಾಡಿ ಬರುತ್ತೇನೆ
ಹೋಗು ನಿನಗೆ
ಬೇರೆ ಕೆಲಸವಿಲ್ಲವೇ?
ಎಂದು ಸಾವನ್ನು ದೂರಕಟ್ಟಿದ
ನೀನು ಸಾಯಲಿಲ್ಲ ಬಿಡು ಧೀರ.

ನಿನ್ನ ಕೆಚ್ಚು, ಸ್ವಾಭಿಮಾನಗಳು
ಇಂದಿಗೂ ಸ್ಫೂರ್ತಿಯ ಸೆಲೆಗಳು
ಪರದೇಶಿ ಬಿಳಿಯರಿಗೆ ಸಲಾಮು
ಹೊಡೆಯದ ನೀನೇ
ನಿಜವಾದ ದೇಶಭಕ್ತ.

ಇತಿಹಾಸದ ಪುಟ ಪುಟಗಳಲ್ಲಿಯೂ
ಗಾಂಧಿ, ಗಾಂಧಿಗಳೇ ತುಂಬಿರುವಾಗ,
ಸಂದಿ ಗೊಂದಿಗಳಲ್ಲೂ ನಿನಗೆ
ಸೇರಲು ಜಾಗವಿಲ್ಲದಂತೆ ಮಾಡಿದರು.

ಕುಟಿಲ ಕಾರಸ್ಥಾನಕ್ಕಿಳಿಯದ ನೀನು
ಜನತೆಯ ನಿಜವಾದ ಸ್ನೇಹಿತ
ನಿಜವಾದ ಸ್ವಾತಂತ್ರ್ಯದ ವ್ಯಾಖ್ಯಾನಕಾರ
ನೀನು ಮರಳಿ ಬಾ ಧೀರ,
ಕತ್ತಲೆ ರಾಕ್ಷಸನ ಹೊಟ್ಟೆ ಹರಿದು
ಹೊರಗೆ ಬಾ ವೀರ.
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...