ಶುದ್ಧವಾಗಲಿ ಅಂತರಂಗ

ಸಾಕು ನಿಲ್ಲಿಸು ನಿನ್ನಾಟ
ಬಹಿರಂಗದಲಿ ಮೆರೆಯಬೇಡ
ಎತ್ತೆತ್ತ ನೀನು ನಲಿದರೂ
ಮತ್ತೆ ಸೊನ್ನೆದತ್ತ ನಿ ನೋಡ

ಅಂತರಂಗದಲ್ಲಿ ಬೆಳಕಿಲ್ಲದೆ
ಯಾವುದಕ್ಕೆ ನಿನ್ನ ಕಾರ್ಯಭಾರ
ಎಲ್ಲಿಂದಲೊ ಬಂದು ನೆಲೆಸಿ
ನಿನ್ನದೆನ್ನುವುದು ಹುಚ್ಚು ಬಡಿವಾರ

ನಾಳೆ ನಿನ್ನದಲ್ಲ ಗೆಳೆಯ
ಪೋಲು ಮಾಡದಿರು ಈ ಕಾಲ
ಹರಿಗೆ ನೀನು ಮಿಸಲಾಗು
ಮಾಡಬೇಡ ಕರ್ಮವೆಂಬ ಸಾಲ

ಶುದ್ಧವಾಗಲಿ ನಿನ್ನ ಅಂತರಂಗ
ಅತ್ತು ಬಿಡು ನಿತ್ಯವು ನೀನು
ಕಂಗಳಲ್ಲಿ ಹರಿಯಲಿ ಕಂಬನಿ
ಮಾಣಿಕ್ಯ ವಿಠಲನ ಮುಕ್ತಿ ಜೇನು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಾತಲಿ ಮಮತೆ ತುಂಬಿರಬೇಕು
Next post ಭಗತಸಿಂಗ ಮತ್ತು ಸಾವು

ಸಣ್ಣ ಕತೆ

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

cheap jordans|wholesale air max|wholesale jordans|wholesale jewelry|wholesale jerseys