ಶುದ್ಧವಾಗಲಿ ಅಂತರಂಗ

ಸಾಕು ನಿಲ್ಲಿಸು ನಿನ್ನಾಟ
ಬಹಿರಂಗದಲಿ ಮೆರೆಯಬೇಡ
ಎತ್ತೆತ್ತ ನೀನು ನಲಿದರೂ
ಮತ್ತೆ ಸೊನ್ನೆದತ್ತ ನಿ ನೋಡ

ಅಂತರಂಗದಲ್ಲಿ ಬೆಳಕಿಲ್ಲದೆ
ಯಾವುದಕ್ಕೆ ನಿನ್ನ ಕಾರ್ಯಭಾರ
ಎಲ್ಲಿಂದಲೊ ಬಂದು ನೆಲೆಸಿ
ನಿನ್ನದೆನ್ನುವುದು ಹುಚ್ಚು ಬಡಿವಾರ

ನಾಳೆ ನಿನ್ನದಲ್ಲ ಗೆಳೆಯ
ಪೋಲು ಮಾಡದಿರು ಈ ಕಾಲ
ಹರಿಗೆ ನೀನು ಮಿಸಲಾಗು
ಮಾಡಬೇಡ ಕರ್ಮವೆಂಬ ಸಾಲ

ಶುದ್ಧವಾಗಲಿ ನಿನ್ನ ಅಂತರಂಗ
ಅತ್ತು ಬಿಡು ನಿತ್ಯವು ನೀನು
ಕಂಗಳಲ್ಲಿ ಹರಿಯಲಿ ಕಂಬನಿ
ಮಾಣಿಕ್ಯ ವಿಠಲನ ಮುಕ್ತಿ ಜೇನು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಾತಲಿ ಮಮತೆ ತುಂಬಿರಬೇಕು
Next post ಭಗತಸಿಂಗ ಮತ್ತು ಸಾವು

ಸಣ್ಣ ಕತೆ

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

  • ಮೇಷ್ಟ್ರು ರಂಗಪ್ಪ

    ಪ್ರಕರಣ ೫ ರಂಗಣ್ಣ ರೇಂಜಿನಲ್ಲಿ ಅಧಿಕಾರ ವಹಿಸಿ ನಾಲ್ಕು ತಿಂಗಳಾದುವು. ಸುಮಾರು ನಲವತ್ತು ಐವತ್ತು ಪಾಠಶಾಲೆಗಳ ತನಿಖೆ ಮತ್ತು ಭೇಟಿಗಳಿಂದ ಪ್ರಾಥಮಿಕ ವಿದ್ಯಾಭ್ಯಾಸದ ಸ್ಥಿತಿ ತಕ್ಕ ಮಟ್ಟಿಗೆ… Read more…