ಮಾತಲಿ ಮಮತೆ ತುಂಬಿರಬೇಕು

ಮಾತಲಿ ಮಮತೆ ತುಂಬಿರಬೇಕು
ಮಾತಲಿ ಕರುಣೆ ಕಾಣುತಿರಬೇಕು|
ಮಾತಲಿ ಹಿತ ತೋರುತಿರಬೇಕು
ಮಾತು ಮಾತಲಿ ಸತ್ಯಮೆರೆಯುತಿರಬೇಕು||

ಮಾತಲಿ ಪ್ರೀತಿ ತೇಲುತಿರಬೇಕು
ಮಾತಲಿ ವಾತ್ಸಲ್ಯ ಕಾಣಸಿಗಬೇಕು|
ಮಾತಲಿ ಸ್ನೇಹಹಸ್ತವದು ಸಿಗಬೇಕು
ಮಾತು ಅಂತರಂಗದ ಕದವ
ತೆರೆಯುವಂತಿರಬೇಕು|
ಮಾತಲಿ ಭಕ್ತಿ ಮನೆಮಾಡಿರಬೇಕು
ಮಾತು ಸೂರ್ಯಪ್ರಭೆಯಂತೆ ಪ್ರಕಾಶಿಸುತಿರಬೇಕು|
ಮಾತು ಹುಣ್ಣಿಮೆಯ ರಾತ್ರಿಯಲಿ
ಬೆಳಗುವ ತುಂಬು ಚಂದ್ರಮನಂತಿರಬೇಕು||

ಮಾತಲಿ ಔಚಿತ್ಯ ಔದಾರ್ಯತೆ ಇರಬೇಕು
ಮಾತು ಮುತ್ತಿನಂತೆ ಹೊಳೆಯುತಿರಬೇಕು|
ಮಾತಲಿ ಆಮಂತ್ರಣ ಆಹ್ವಾನತೆ ಬರಬೇಕು
ಮಾತು ನೊಂದವರ ಮನಮುಟ್ಟುತಿರಬೇಕು|
ಮಾತು ದೇವರ ಗುಡಿಯಲಿ ನಂದಾದೀಪದ
ಜೊತೆ ಆಗಾಗ ಮೊಳಗುವ ಘಂಟಾನಾದದಂತಿರಬೇಕು|
ಮಾತು ಮಡಕೆಯ ತೂತಾಗದೆ ಮೌನದ
ಬೆಲೆಗಿಂತ ಬೆಳ್ಳಿ ಬೆಳಕಾಗಬೇಕು||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಉತ್ತರ ಹೇಳು
Next post ಶುದ್ಧವಾಗಲಿ ಅಂತರಂಗ

ಸಣ್ಣ ಕತೆ

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…