ಮಾತಲಿ ಮಮತೆ ತುಂಬಿರಬೇಕು

ಮಾತಲಿ ಮಮತೆ ತುಂಬಿರಬೇಕು
ಮಾತಲಿ ಕರುಣೆ ಕಾಣುತಿರಬೇಕು|
ಮಾತಲಿ ಹಿತ ತೋರುತಿರಬೇಕು
ಮಾತು ಮಾತಲಿ ಸತ್ಯಮೆರೆಯುತಿರಬೇಕು||

ಮಾತಲಿ ಪ್ರೀತಿ ತೇಲುತಿರಬೇಕು
ಮಾತಲಿ ವಾತ್ಸಲ್ಯ ಕಾಣಸಿಗಬೇಕು|
ಮಾತಲಿ ಸ್ನೇಹಹಸ್ತವದು ಸಿಗಬೇಕು
ಮಾತು ಅಂತರಂಗದ ಕದವ
ತೆರೆಯುವಂತಿರಬೇಕು|
ಮಾತಲಿ ಭಕ್ತಿ ಮನೆಮಾಡಿರಬೇಕು
ಮಾತು ಸೂರ್ಯಪ್ರಭೆಯಂತೆ ಪ್ರಕಾಶಿಸುತಿರಬೇಕು|
ಮಾತು ಹುಣ್ಣಿಮೆಯ ರಾತ್ರಿಯಲಿ
ಬೆಳಗುವ ತುಂಬು ಚಂದ್ರಮನಂತಿರಬೇಕು||

ಮಾತಲಿ ಔಚಿತ್ಯ ಔದಾರ್ಯತೆ ಇರಬೇಕು
ಮಾತು ಮುತ್ತಿನಂತೆ ಹೊಳೆಯುತಿರಬೇಕು|
ಮಾತಲಿ ಆಮಂತ್ರಣ ಆಹ್ವಾನತೆ ಬರಬೇಕು
ಮಾತು ನೊಂದವರ ಮನಮುಟ್ಟುತಿರಬೇಕು|
ಮಾತು ದೇವರ ಗುಡಿಯಲಿ ನಂದಾದೀಪದ
ಜೊತೆ ಆಗಾಗ ಮೊಳಗುವ ಘಂಟಾನಾದದಂತಿರಬೇಕು|
ಮಾತು ಮಡಕೆಯ ತೂತಾಗದೆ ಮೌನದ
ಬೆಲೆಗಿಂತ ಬೆಳ್ಳಿ ಬೆಳಕಾಗಬೇಕು||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಉತ್ತರ ಹೇಳು
Next post ಶುದ್ಧವಾಗಲಿ ಅಂತರಂಗ

ಸಣ್ಣ ಕತೆ

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

cheap jordans|wholesale air max|wholesale jordans|wholesale jewelry|wholesale jerseys