ಸೂರ್ಯನಲ್ಲಿ ಇನ್ನೊಮ್ಮೆ

ರಾ ಎಂಬುದಾಗಿತ್ತು ನಿನ್ನ ಹೆಸರು
ಹಲವು ಕಾಲದ ತನಕ ನೈಲ್ ನದಿಯ
ಆಚೀಚೆಗೆ ನೀನೊಬ್ಬನೇ ದೇವರು

ಹೊಲಗದ್ದೆ ನಿನ್ನ ದಿನದಿನದ ಉದಯ
ಅಸ್ತಮಾನಗಳಲ್ಲಿ ಅಗಿ ಫಲವತ್ತು
ತುಂಬಿದ ಕಣಜ ನಿನ್ನ ಅಪಾರ ದಯ

ನದಿನೀರು ಕೂಡ ಹಾಗೆಯೇ ಹರಿದಿತ್ತು
ಅರಿತಿದ್ದೆವು ನಾವದರ ಆಳ ಅಗಲ
ಇಳಿದ ನದಿ ಮತ್ತೆ ತುಂಬುವ ಹೊತ್ತು

ಅರಿಯದೆ ಎಂದು ಮರೆತವು ನಮ್ಮ ಮೂಲ?
ಅದು ಎಲ್ಲವನ್ನೂ ಮರೆಸುವ ಸಾರ್ವ-
ಭೌಮ ಫಾರೋಗಳಾಳಿದ ಕಾಲ

ಏರಿ ತಲೆಯೊಳಗೆ ಬೇಡದ ಗರ್ವ
ಹೊಸ ದೇವರುಗಳಲ್ಲಿ ಇಟ್ವೆವು ಭಕ್ತಿ
ಕಳೆದು ಹೋಯಿತು ಒಂದು ಪ್ರಕ್ಷುಬ ಪರ್ವ-

ಪ್ರಾರ್ಥನೆಗಷ್ಟೆ ದೊರೆಯುವುದಾದರೆ ಮುಕ್ತಿ
ರಾ! ಹಿಡಿದುಕೊ ಈ ಒಳಹೊರಗಿನ ಭುಗಿಲು
ಸುಡದಿರಲಿ ಕಾಪಾಡಬೇಕಾದ ಶಕ್ತಿ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸತ್ಯಾಗ್ರಹಗಳು
Next post ಗೋಡೆ

ಸಣ್ಣ ಕತೆ

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

  • ತೊಳೆದ ಮುತ್ತು

    ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…

cheap jordans|wholesale air max|wholesale jordans|wholesale jewelry|wholesale jerseys