ಛೇ ಛೇ ಬ್ಯಾಡ ಬ್ಯಾಡ

ಛೇ ಛೇ ಬ್ಯಾಡ ಬ್ಯಾಡ ಬ್ಯಾಡ ತಗಿ
ಪಾಡ ಕಾಣೋದಿಲ್ಲೋ ಸಮರಾ ಐಸುರಾ              ||ಪ||

ಕವಿತ ಮಾಡುವದು ಮೂಲಸ್ಥಾನದಲಿ
ತಿಳಿಯಲೋ ತಿಳಿದ್ಹೇಳಲೋ
ಸೆಳವಿಗೆ ಬಿದ್ದು ನೀನು ಬಳಲಿ ಬಳಲಿ ಸತ್ತಿ     ||೧||

ಅಂಗವನರಿಯದೆ ರಂಗಿಲೆ ಹಾಡುವದು
ಸಂಗನೇ ಮುದಿಮಂಗನೇ
ಬಂಗಿ ಸೇದವರಂತೆ ಕೊಂಗಿ ಕವಿತೆ ನಿಂದು         ||೨||

ಆರ್ಥವನರಿಯದೆ ಮರ್ತ ಹಾಡುವದು
ಜಾಣನೇ ಮುದಿ ಕೋಣನೆ
ತುರ್ತ ನಮ್ಮಲ್ಲಿಗೆ ಬುದು ಶರ್ತಹಾಕುವದುಂಟೆ    ||೩||

ದೇಶದೊಳಗ ಇದು ಹೇಸಿ ಕವಿತೆ ನಿಂದು
ಬ್ಯಾಡಲೋ ಮಹಾ ಕೆಡಲೋ
ಬ್ಯಾಸರಾದಿತು ಶಿಶುನಾಳಧೀಶನಿಗೆ            ||೪||

*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಜೆಟ್ ವಿಮಾನಗಳು
Next post ನಗೆ ಡಂಗುರ – ೫೧

ಸಣ್ಣ ಕತೆ

  • ಮೇಷ್ಟ್ರು ರಂಗಪ್ಪ

    ಪ್ರಕರಣ ೫ ರಂಗಣ್ಣ ರೇಂಜಿನಲ್ಲಿ ಅಧಿಕಾರ ವಹಿಸಿ ನಾಲ್ಕು ತಿಂಗಳಾದುವು. ಸುಮಾರು ನಲವತ್ತು ಐವತ್ತು ಪಾಠಶಾಲೆಗಳ ತನಿಖೆ ಮತ್ತು ಭೇಟಿಗಳಿಂದ ಪ್ರಾಥಮಿಕ ವಿದ್ಯಾಭ್ಯಾಸದ ಸ್ಥಿತಿ ತಕ್ಕ ಮಟ್ಟಿಗೆ… Read more…

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ಮಿಂಚಿನ ದೀಪ

    ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…

  • ಪ್ರೇಮನಗರಿಯಲ್ಲಿ ಮದುವೆ

    ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…