ಛೇ ಛೇ ಬ್ಯಾಡ ಬ್ಯಾಡ

ಛೇ ಛೇ ಬ್ಯಾಡ ಬ್ಯಾಡ ಬ್ಯಾಡ ತಗಿ
ಪಾಡ ಕಾಣೋದಿಲ್ಲೋ ಸಮರಾ ಐಸುರಾ              ||ಪ||

ಕವಿತ ಮಾಡುವದು ಮೂಲಸ್ಥಾನದಲಿ
ತಿಳಿಯಲೋ ತಿಳಿದ್ಹೇಳಲೋ
ಸೆಳವಿಗೆ ಬಿದ್ದು ನೀನು ಬಳಲಿ ಬಳಲಿ ಸತ್ತಿ     ||೧||

ಅಂಗವನರಿಯದೆ ರಂಗಿಲೆ ಹಾಡುವದು
ಸಂಗನೇ ಮುದಿಮಂಗನೇ
ಬಂಗಿ ಸೇದವರಂತೆ ಕೊಂಗಿ ಕವಿತೆ ನಿಂದು         ||೨||

ಆರ್ಥವನರಿಯದೆ ಮರ್ತ ಹಾಡುವದು
ಜಾಣನೇ ಮುದಿ ಕೋಣನೆ
ತುರ್ತ ನಮ್ಮಲ್ಲಿಗೆ ಬುದು ಶರ್ತಹಾಕುವದುಂಟೆ    ||೩||

ದೇಶದೊಳಗ ಇದು ಹೇಸಿ ಕವಿತೆ ನಿಂದು
ಬ್ಯಾಡಲೋ ಮಹಾ ಕೆಡಲೋ
ಬ್ಯಾಸರಾದಿತು ಶಿಶುನಾಳಧೀಶನಿಗೆ            ||೪||

*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಜೆಟ್ ವಿಮಾನಗಳು
Next post ನಗೆ ಡಂಗುರ – ೫೧

ಸಣ್ಣ ಕತೆ

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ಕತೆಗಾಗಿ ಜತೆ

    ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…

  • ಗ್ರಹಕಥಾ

    [ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

cheap jordans|wholesale air max|wholesale jordans|wholesale jewelry|wholesale jerseys