ಹರಿದ್ವಾರ

ಹೃಷೀಕೇಶದಲಿ ಮುಳುಗಿ ಹರಿದ್ವಾರದಲೆದ್ದವನೆ
ದೇವಗಂಗೆಯ ಆಳವೆಷ್ಟು ಹೇಳು ?
ಚರಾಚರಗಳನೂ ಪ್ರೀತಿಸುವ ಯಾತ್ರಿಕನೆ
ಕಪ್ಪೆ ಮೀನುಗಳಿಗೆ ಚೆಲ್ಲಿದೆಯ ಕಾಳು ?

ಯಾವ ದೇವರ ಗುಡಿಗೆ ಯಾವ ಗೋಪುರಗಳಿಗೆ
ಎಷ್ಟೆಷ್ಟು ಬಾರಿ ಬಂದೆ ಸುತ್ತು?
ತೊಯ್ದ ದಂಡೆಯಲಿ ಏನು ಸೋಜಿಗ ಕಂಡೆ
ಸಂಜೆಯಾಗಸದಲ್ಲಿ ಏನು ಮೂಡಿತ್ತು ?

ಗೋಪಿಚಂದನ ಕೊರಡು ಶಂಖ ಸಾಲಿಗ್ರಾಮ
ತಣಿಸಿಕೊಳ್ಳಲೆಂದು ಮನಸ್ಸಾಕ್ಷಿ
ಕೊಂಡೆಯಲ್ಲವೆ ಹಿಮಾಲಯದ ತಪ್ಪಲಿನ
ಕಾಡುಗಳಲ್ಲಿ ಬೆಳೆದ ರುದ್ರಾಕ್ಷಿ

ಮರೆಯದಿರು ಮತ್ತೆ ದಾರಿ ನೋಡುವ ಮಕ್ಕಳಿಗೆ
ಆಡಿಕೊಳ್ಳಲು ಕವಡೆ ಬಾರಿಸಲು ಡೋಲು
ನಿನ್ನ ಸುಖಾಗಮನ ಕಾಯುತಿಹ ಶ್ರೀಮತಿಗೆ
ಅಸಲು ಕುರಿಗಳ ಮೈಯ ಉಣ್ಣೆ ಶಾಲು

ಎಲ್ಲವನು ಮುಗಿಸಿ ನೀ ಮರಳಲಣಿಯಾದಾಗ
ಹಿಂದೇಟು ಹಾಕಿತೆ ಮನಸ್ಸು?
ಜಗ್ಗಿದಂತಾಯಿತೆ ಬಟ್ಟೆ? ಸುಸ್ತಾದ ಮನುಷ್ಯ!
ಹೊರಟು ನಿಂತಿದೆ ನೋಡು ಬಂದ ಬಸ್ಸು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನನಗಿರಲಿ ಬೆಂಗ್ಳೂರ ಬಾಲಿ!
Next post ಪುಂಗಿ

ಸಣ್ಣ ಕತೆ

  • ಮತ್ತೆ ಬಂದ ವಸಂತ

    ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

  • ಬಿರುಕು

    ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್‍ತಿ ಬೆಚ್ಚಿ… Read more…

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

cheap jordans|wholesale air max|wholesale jordans|wholesale jewelry|wholesale jerseys