ಎಲ್ಲಿ ಅಡಗಿದೆಯೇ

ಎಲ್ಲಿ ಅಡಗಿರುವೆ ಹೇಳೆ
ಕೋಗಿಲೆ ನಿನ್ನ ದನಿಯು
ಕೇಳಿ ಬರುತಿದೆ ||

ಯಾವ ರಾಗದ ಭಾವವೂ
ಯಾವ ತಾಳದ ವೇಗವೂ
ಯಾರ ಪ್ರೇಮದ ಪಲ್ಲವಿಯು
ತಿಳಿದಿಲ್ಲ ಎನಗೆ ಹೇಳೆ ಕೋಗಿಲೆ ||

ಎಷ್ಟು ದೂರವಿರುವೇ ನೀನು
ಯಾವ ಮರದಲ್ಲಡಗಿರುವೇ
ನಿನ್ನ ಪ್ರೇಮ ಪಲ್ಲವಿಗೆ
ಚರಣಗಳ ಸಾಲು ಬರೆಯುವೆ ||

ಹೂ ಗೊಂಚಲುಗಳ ನಡುವೆ
ಕುಳಿತು ಭ್ರಮರಗಳ ಸ್ಪರ್‍ಶ
ತಿಳಿದು ಪಲ್ಲವಿಯ ಸಾಲು
ಹಾಡಿದೇ ನೀನು ಕೋಗಿಲೆ ||

ಹೂವಿನ ಮನದಾಳದ ಮಾತನರಿತು
ಸಂತಸದಿಂ ನಲಿದು ಹಾಡಿದೆ ಏನು
ನಿನ್ನ ಹಾಡ ಕೇಳಿ ನೋವ ಮರೆತೆ
ಎಂಥಾ ಸೊಗಸು ರಾಗಲಾಪ ||

ರೆಂಬೆಕೊಂಬೆಗಳ ನಡುವೆ
ಕಟ್ಟಿದ ಗೂಡುಗಳ ಸಂಸಾರ
ನಿನ್ನ ನೋಡುತ ಹಿಗ್ಗಿ ರೆಕ್ಕೆಗಳ
ಬಡಿದು ಯಾವ ತಾಯ್ ಹಕ್ಕಿಯ ಕರುಳು
ಎಂದು ಕೇಳುತಿದೆ ||

ನಿನ್ನ ಅರಿವಾಗದ ರೀತಿನೀತಿ
ದೇವನಿರಿಸಿದ ಕಂಠವೂ
ನಿನ್ನ ಮೈಬಣ್ಣ ಕಪ್ಪಾದರೂ
ಮನವು ಕಾವ್ಯವದೂ ಕೋಗಿಲೆ ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಜೀವಂತ ಜ್ವಾಲಾಮುಖಿ ಅಥವಾ ಹಳ್ಳಿಯ ಸೊಸ್ತ್ಯಾರು
Next post ಹೆಣ್ಣು

ಸಣ್ಣ ಕತೆ

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

cheap jordans|wholesale air max|wholesale jordans|wholesale jewelry|wholesale jerseys