Home / ಲೇಖನ / ಹಾಸ್ಯ / ಜೀವಂತ ಜ್ವಾಲಾಮುಖಿ ಅಥವಾ ಹಳ್ಳಿಯ ಸೊಸ್ತ್ಯಾರು

ಜೀವಂತ ಜ್ವಾಲಾಮುಖಿ ಅಥವಾ ಹಳ್ಳಿಯ ಸೊಸ್ತ್ಯಾರು

“ಅಯ್ಯ ಶಿವನಽಽ….,’ ಸೊಸ್ತ್ಯಾರು ಮಕ್ಕಳು ನೂಲತಿದ್ದರ ನನ್ನ ಗತಿ ಹಿಂಗ್ಯಾಂಕ ಆಗತಿತ್ತೊ ಯಪ್ಪಾ!…….. ಇವರೆಲ್ಯಾರೇ ದಗದಾ ಮಾಡವರಽ ದಗದಾ? ಹತ್ತಿ ಅರೀಲಾಕ ಕಲ್ಲ ಇಡ್ರೇ ಅಂದರ ನಡಾ ನೂಸತೈತಿ. ಪಿಂಡ್ರಿ ನೂಸತಾವು…. ಅಂತಾರು! ಒಂದಽ ಒಂದ ಧಡೆ ಕಾಳು ಆರೂದ್ರಾಗಽ ಚರೀನ ಕಟ್ತಾರ ಮ್ಯಾಗಿಂದ ತೆಳತನಕಾ! ಇದರಾ ಬದರಾ ಕಟ್ಟೀ ಮ್ಯಾಗ ಕುಂತು ಚಕ್ಕಂದ ಆಡಲಾಕ ಕಲ್ತಾರ ಚಕ್ಕಂದಾ!!!

“ಎಮ್ಮಿ ಮೈತೊಳಕೊಂಡ ಬಾ ಅಂದರ ಹಳ್ಳದ ದಂಡಿ ಮ್ಯಾಗ ಹಿಂಬಡಾ ತಿಕ್ಕೊಂತಽ ಕೂಂಡ್ರತಾಳ ನನ್ನ ಸೊಸಿ….! ಎಮ್ಮಿ ಬಾಲಕ್ಕ ಹತ್ತಿದ್ದ ಹೆಂಡಿ (ಶೆಗಣಿ) ಹಂಗಽ ಇರತೈತಿ…ಈ ಚದುರಿಽ ಮುರಕಾ ಮಾಡಿಕೊತೇಽ ತಿರತಿರಗಿ ಹಿಂಬಡಾ ನೋಡಿಕೋತಽ ಬರತಿರತಾಳ ಓಣಿಗುಂಟ. ಇಕಿ ಹೀಂಗ ಬರೂದರೊಳಗಽ ಎಮ್ಮಿ, ಕರೀಗೆ ಹಾಲುಣಸಿ ಬಿಟ್ಟಿರತೈತಿ… ಆತಲ್ಲಾ ಮುಗದಽ ಹೋತು”

“ಇವರನ್ನ ಸಂತಿ ಮಾಡಿಕೊಂಡು ಬರಲಾಕ ಕಳಸೂದಽ ಪಂಚೇತಿ ಐತ್ರಿ…. ಮುಂಗೈ ಮ್ಯಾಲಿನ ಹಚ್ಚೀಬಟ್ಟು ನೋಡಿಕೋತ ತಕ್ಕಡೀ ಹಿಡಿದರ ಏಲ್ಯಾರೆ ತೂಕ ಆಕ್ಕೈತೆ? ಆದರಾಗೂ ಕಳಕೊಳ್ಳೊದಽ ಮಾತ್ರ. ಬೆಣ್ಣೀ ಮಾರಿ ಕಂಡ್ಹಾಳ (ಕನ್ನಡಿ) ಕೊಳ್ಳೂ ಅವರನ್ನ ನೀ ಎಲ್ಲ್ಯಾರ ನೋಡೀದೀಯಾ ಯಪ್ಪಾ? ಹುಟ್ಟಿ ಮೂರಿಪ್ಪತ್ತರ ಮ್ಯಾಲೆ ಹತ್ತವರಸ ಆದೂ……. ನಾ ಹೆಣ ಮಗಳ ಇನ್ನೂವರಿಗೂ ಒಂದಿನಾ ಕಂಡ್ಹಂಳ್ಳ ಕೈಯಾಗ ಹಿಡಿದಿಲ್ಲ…? ಈಕಿ ನನ್ನ ಸೊಸಿ!… ಮುಚ್ಚೌಲು ಕೊಟ್ಟು ಕಂಡ್ಹಳ್ಳ ಕೊಂಡುಕೊಂಡು ಬಂದಾಳ. ಇದಕ್ಕ ಏನಿನ್ನ ಹಣೀಹಣೀ ಗಟ್ಟಿಸಿಕೊಂಡ್ರನಽ ಸರಿ! ಸಂತಿಗೆ ಹೋಗೂ ದಂದರಽ ಎಲ್ಲಮ್ಮನ ಜಾತರಿಗ್ಹೋದ್ಹಾಂಗ ಮಾಡ್ತಾರ! ಇವರ ಆದವಾನೀ ಕರೆ ಅಂಚಿನಸೀರಿ ಇವರ ಜರಾಗೊಂಡೇವಹಚ್ಚಿದ ಚೆಪ್ಪಲಿ ಏನ ಹೇಳ್ಯೂ ಯಪ್ಪಾ; ಎಲ್ಲಾ ದಿವಸಾನಽ ಉಪರಾಟೇ ಬಂದಾವು!

“ಗಂಡಂದಿರ ಅಂಜಿಕ್ಯಂತ!… ಇದಕೇಳ್ರಿ ನಗ್ಗೇಡು….! ಗಂಡಂದಿರ ಅಂಜಿಕೆ ಇವರಿಗೆ ಎಲ್ಲೈತೊ ನನ್ನ ಮಗನಽ! ಹೆಂಡಂದಿರ ಸೀರಿ ಒಗೆಯೊ ಈ ಹೊಲಸ ಗೋಳು, ಹೆಣತಿನ್ನ ಅಂಜಿಕ್ಯಾಗಿಡತಾವಽ….! ಇವು ಎಲ್ಯಾರೆ ಬಲೂರೀ…. ಹಾಕ್ಕೊಂತ ಗೊಬ್ಬರ ಬಂಡೀನ ಹೊಡೀಬೇಕು. ಹೆಂಡರು ಇವರ ಮಾತ ಕೇಳಿದರ ಮಳೀಬೆಳಿ ಯಾಕ ಹೋಗತಿತ್ತು!”

“ಈಗಿನ ಕಾಲನಽ ಬ್ಯಾರೆ ಬಂದೈತಿ! ನೂಲವರೆಲ್ಲಾ ಸತ್ತಸತ್ತ ಹೋದರು….; ಇಲ್ಲೆ ಈ ನ್ಯಾಮದೇವರ ಕಟ್ಟೀಮ್ಯಾಗ ಆರಾರು ತಾಸು ರಾತ್ರೀ ತಂಕಾ ‘ರಂವ್‌ ರಂವ್‌’ ಅಂತ ನೂಲೂದಽ ನೂಲದು….; ಸೇರು ಹಂಜೀ ನೂಲೂದರೊಳಗ ಗಿರಪಾವು ಕಡ್ಲೀ ತಿಂತಿದ್ಲು ನಮ್ಮ ಅತ್ತಿ….! ಈಗಿನ ಹೆಣ್ಣಽ! ಹಾಲೂ ಅನ್ನಾ ಉಂಡು ಹಾಸು ಹೊಯ್ಯಽ ನನ್ನ ಮಗಳಽ ಅಂದರಽ ನಾ ಊರನ್ನ ನೋಡಿಕೊಂತಽ ನೀರ ತರತೀವಿ ಅಂತಾವು, ತಮ್ಮಾ…? ನೋಡೊಽ ಯಪ್ಪಾ ನೋಡು; ನಾ ಬೇದಽ ಬೆಯ್ಯತೇನು, ಅವಕ್ಕ ಏನಾರೆ ಬುದ್ದಿ ಐತೇ ನೋಡು ಹ್ಯಾಂಗ ಖಿಸಿ ಖಿಸಿ ಹಲ್ಲ ಕಿಸೂತಾವ! ಸುಟ್ಟಶಿವಾ ಮರತಾನ್ನ ನನ್ನ! ಏನು ಮಾಡೂದೈತಿ?…. ಅಷ್ಟಽ ಉಪ್ಪು ಮೆಣಸಿನಕಾಯಿ ಆದೀತು. ಬಡತನದ ಜಲಮ ಯಪ್ಪಾ….! ಕಾರಹುಣ್ಣವೀ ಆಗಾಣಾ ಜಂತ್ರಾ ಇಡತೇನಿ ತಮ್ಮಾ! ಇವರೀಗೇನ ಇಲ್ಲಿದ್ರೂ? ನನಗ್ಯಾಂಗ ಬಿಟ್ಟೀ-ತಪ್ಪಾ ನೋಡ್ರಿ!!!”
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...