Home / ಕವನ / ಕವಿತೆ / ನನ್ನಾಕೆ ಸುಂದರಿ

ನನ್ನಾಕೆ ಸುಂದರಿ

ನನ್ನಾಕೆ ಸುಂದರಿ
ಬಲು ಸುಂದರೀ
ನೆರೆದ ಕೂದಲ ಬೈತಲೆ
ಕುಂಕುಮ ಕೆಂಪು||

ಫಳ ಫಳ ಹೊಳೆವಂತ
ಕಣ್ಣ ತುಂಬ ಧನ್ಯತೆಯ ಬಿಂಬ
ನನ್ನದೆಯಾಳದೆ ಅವಳದೇ ಪ್ರತಿಬಿಂಬ||

ಗುಳಿ ಬಿದ್ದಗಲ್ಲ ನಗುವಿನಂಚಿನ ತುಟಿಕೆಂಪು
ಜಾಣೆ ನನ್ನಾಕೆ ಬಲು ಸೌಂದರ್‍ಯವತಿ||

ಅವಳ ಕುಡಿನೋಟ ಚೈತನ್ಯ ತುಂಬಿ
ಬಂಗಾರ ಸಸಿ ನೆಟ್ಟ ಚತುರೆ
ನಾನು ಬರುವ ಹಾದಿಯಲಿ ಹೂವಹಾಸಿ ಕರೆದಳೆನ್ನ
ಜಾಣೆ ನನ್ನಾಕೆ ಬಲು ಸೌಂದರ್‍ಯವತಿ||

ಅರವತ್ತಾದರೂ ಹದಿನಾರರ ಮನಸು
ಭಾವನೆ ಕೆಳೆಯ ಬಂಧನ ಸೊಗಸು
ಎಂತು ಹೇಳಲಿ ಬಾರಲವಳು ಹತ್ತಿರ||

ಹಿಡಿ ಜೀವ ಹಿರಿಯಳಾದಳು ಕಿರಿಯರ ಅಣತಿಗೆ
ಪ್ರೀತಿ ಪ್ರೇಮ, ವಾತ್ಸಲ್ಯ ಮಮತೆ, ಮೆರೆದ ಸುಖ
ನಾನು ಅಂದು ಕಂಡೆ, ಅವಳ ಅಂತರಂಗ
ಜಾಣೆ ಇವಳು ನನ್ನಾಕೆ ಬಲು ಸೌಂದರ್‍ಯವತಿ||

ದೀಪ ಹಚ್ಚಿ ಕಿರಣವಾಗಿ ಬೆಳಗಿ
ಎನ್ನ ಮನೆ ಅಂಗಳ ಮನೆತನದ
ಸಿರಿಗೌರಿ, ಬಡತನಕೆ ಕಡಿವಾಣ ಹಾಕಿ
ಎನ್ನ ಮನದಾಳದ ಒಡತಿಯಾದಳು
ಜಾಣೆ ಇವಳು ನನ್ನಾಕೆ ಬಲು ಸೌಂದರ್‍ಯವತಿ||

ಸಪ್ತಪದಿಯ ನೆನಪು ಕೈಹಿಡಿದು
ಮನದೆ ನಿಂದಾಕೆ, ಇನ್ನು ಇಲ್ಲ ಚಂತೆ
ಜನುಮ ಜನುಮಕೂ ಅವಳೆ ನನ್ನಾಕೆ
ಜಾಣೆ ಇವಳೂ ಬಲು ಜಾಣೆ ಇವಳು
ನನ್ನಾಕೆ ಬಲು ಸೌಂದರ್‍ಯವತಿ||
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...