ದೀಪದ ಕುಡಿ ನಿಶ್ಚಲವಾಗಿ
ಉರಿದಿರಲು
ಅಗರಬತ್ತಿಯು ಘಮಘಮಿಸಿ
ಸುವಾಸನೆಯ ಬೀರಿರಲು
ಕುಂಕುಮದ ಬೊಟ್ಟಿಟ್ಟು
ಹೂಗಳನೇರಿಸಿ
ಹಾಲು-ಸಕ್ಕರೆಯನಿರಿಸಿ
ನನ್ನ ಕಷ್ಟಗಳ ಕಟ್ಟು ಬಿಚ್ಚಿದೆ

ನಾನು ಹೇಳುತ್ತಾ ಹೋದೆ
ಅವನು ಕೇಳುತ್ತಾ ಕೂತ

ಸಮಯ ಸರಿದದ್ದೆ ತಿಳಿಯಲಿಲ್ಲ
ಅವನೂ ಕೂತಲ್ಲಿಂದ ಕದಲಲಿಲ್ಲ

ಕೊನೆಕೊನೆಗೆ
ನನ್ನ ಕಂಠವೂ ತುಂಬಿ ಬಂದಿತ್ತು
ಅವನ ಕಣ್ಣಿಂದಲೂ ನೀರು ತುಳುಕಿತ್ತು.
*****