ನೇತ್ರಾವತಿ

ಪ್ರತಿ ಕ್ಷಣದಲ್ಲಿ ಪ್ರೀತಿ ಅಲೆ ಅಲೆಗಳಲಿ
ನಿರಾಳ ಪ್ರೇಮ ಹುಟ್ಟಿದ ತಂಪು
ತೂಗಿ ತೂಗಿ ತಿಳಿಗಾಳಿ ಗದ್ದೆ ಬಯಲು
ಎದೆ ತುಂಬಿ ಹಾಡಿದ ಸುಗ್ಗೀ ಪದ
ಜೀವನ ಜನಪದ ಕಣ್ಣುಗಳರಳಿಂದ
ಕಾಂತಿ ಹರಿಸಿದ ನೇತ್ರಾವತಿ.

ಹರಿಯುವ ಹರಿಗೋಲು ಹಾಯ್ದು ಧಾರಿಣಿ
ಮದು ಸೂಸಿದ ತಿಳಿಹಾಲು ಎದೆಗಿಳಿದ
ಗತಿ ಗುಣದ ಕ್ರಮ ಪರಿಚಲನೆ
ಅಂಗಳದಲ್ಲಿ ಅರಳಿ ಸೂಸಿದ ಮಲ್ಲಿಗೆ
ಪಸರಿಸಿದ ಹರಡಿ ಹಾಯ್ದ ಬೆಳದಿಂಗಳ
ಬಯಲು ಆಲಯ ಧ್ವನಿ ತರಂಗಳು ಅವಳ ಹಾಡು.

ಬೆಳ್ಳಗೆ ತೆಳ್ಳಗೆ ಹಗುರಾಗಿ ತೇಲಿದ ಬಿಳಿಗೆರೆ
ಜಿಗಿ ಜಿಗಿದು ನೆನೆನೆನೆದು ಹನಿಗಳೊಡಗೂಡಿ
ಜಾರು ಬಂಡಿ ಆಟ ಕರುಣಿಯ ನೋಟ
ಸುರಿ ಸುರಿದು ಹರಿದ ಝರಿ ನದಿಯಾಗಿ
ಸುಳಿದು ಸುಳಿದು ಹೆಜ್ಜೆಗಳು ಜಾರಿ
ಕಣಿವೆ ತುಂಬ ಬೆವರ ಹನಿಗಳು.

ಮುಗಿಯದ ಹಾದಿತುಂಬ ಹಿಮದಚಳಿ
ತಿಳಿಮೋಡ ತೇಲಿ ಪ್ರತಿಫಲಿಸಿದ ಕನ್ನಡಿ
ಒಳಹೊರಗೆ ಚಿಮ್ಮಿ ಹಾಡಿ ಧ್ವನಿಸುವ ಹಕ್ಕಿಗಳು
ಸುತ್ತಿ ಸುಳಿದು ಸುತ್ತುವ ಕಾಲುಹಾದಿಯ ಹೆಜ್ಜೆಗಳು
ಆಕಾಶಕ್ಕೆ ನೀಲಿ ತುಂಬಿ ಶಿಖರಬಿಂಬ ಅಂತರಿಕ್ಷ
ಒಡಲಲಿ ಕಡಲಲಿ ಹುಟ್ಟಿದ ಭವ್ಯ ಮತ್ತು ಕಾವ್ಯ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸೆಳೆತ
Next post ಪಯಣಿಗರು

ಸಣ್ಣ ಕತೆ

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ಮಾದಿತನ

    ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ಅಜ್ಜಿ-ಮೊಮ್ಮಗ

    ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…

cheap jordans|wholesale air max|wholesale jordans|wholesale jewelry|wholesale jerseys