ಕಾಳಿ

ನಿತ್ಯ ಜುಳುಜುಳು ಝೇಂಕಾರ
ಆಡೊಂಬಲ ನಿನಗೀ ನೆಲ ಓಂಕಾರ
ಕೃಷ್ಣವರ್ಣ ಜಲಕನ್ಯೆಯ ವೈಯಾರ
ಕಾಳಿ ನಿನಗಿದೋ ಅನ್ವರ್ಥ ಶೃಂಗಾರ
ಸವಾಲು ಸಾಸಿರ ಎದುರಿಸಿ ಕರುಣೆ
ಹೊನ್ನ ಬದುಕಿಗೆ ದಾನದ ಸ್ಫುರಣೆ
ನಮ್ಮಯ ಮನದಲಿ ನಿನ್ನದೇ ಸ್ಮರಣೆ
ಕಾಳಿ ಜಪವಿದೋ ಮರೆಸಿತು ಬವಣೆ.

ಹುಟ್ಟನು ಕಂಡಳು ಜೋಯಿಡಾ ರಾಜ್ಯದಿ
ಡಿಗ್ಗಿಯ ಬುಡದಲಿ ಢಮರುಗೈದಳು
ಮಿಲನ ಉಂಡಳು ಕಾರವಾರದ ಕಡಲರಾಜನ
ತೋಳಸೆರೆಯಲಿ ವೀಣೆಯಾದಳು.

ಪಾಂಡರಿ, ನಾಗಿ, ನಾಶಿ, ಕಾನೇರಿ
ನದಿಗಳ ಸಂಗಮ ಸಾಲೆ
ಕುಣಿದು, ಕುಣಿಸಿ, ಕೊಳಲಗೈದಳು
ಬೆಳಕಿನ ಪುಂಜವ ಬೆಳಗಿದ ಬಾಲೆ
ಸುಪಾ, ನಾಗಝರಿ, ಕೊಡಸಳ್ಳಿ ಆಣೆಕಟ್ಟಿಗೆ ಶಾಲೆ
ಒಡಲೊಳು ತುಂಬಿವೆ ಮುಕುಟ ಮಣಿಗಳು
ನೀನೆಂದೂ ಬತ್ತದ ಮಾಲೆ

ಮಲೆಯ ಬನ ಬೆರಗು ನಿನ್ನಯ ಹೆದ್ದಾರಿ
ಇಂಚೂ ಇಂಚಿಗೂ ಸಂಚಿನ ಚಲನೆ ನಿನ್ನಯ ಮಾದರಿ
ಖಗಗಾನ ಮೀಟಿ ಮತಿಯಲಿ ನಿನ್ನದೆ ಶ್ರೀಕಾರ
ಹೆಮ್ಮೆಯ ಹೆಣ್ಣಿಗೆ ನಮ್ಮನೆ ಕಣ್ಣಿಗೆ ಹಾಕಿರಿ ಜಯಕಾರ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅದೇ ಕೊನೆ
Next post ಸೀತಾಫಲ ಮಂಡಿ

ಸಣ್ಣ ಕತೆ

  • ನಂಬಿಕೆ

    ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…

  • ಮತ್ತೆ ಬಂದ ವಸಂತ

    ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…