ಕಾಳಿ

ನಿತ್ಯ ಜುಳುಜುಳು ಝೇಂಕಾರ
ಆಡೊಂಬಲ ನಿನಗೀ ನೆಲ ಓಂಕಾರ
ಕೃಷ್ಣವರ್ಣ ಜಲಕನ್ಯೆಯ ವೈಯಾರ
ಕಾಳಿ ನಿನಗಿದೋ ಅನ್ವರ್ಥ ಶೃಂಗಾರ
ಸವಾಲು ಸಾಸಿರ ಎದುರಿಸಿ ಕರುಣೆ
ಹೊನ್ನ ಬದುಕಿಗೆ ದಾನದ ಸ್ಫುರಣೆ
ನಮ್ಮಯ ಮನದಲಿ ನಿನ್ನದೇ ಸ್ಮರಣೆ
ಕಾಳಿ ಜಪವಿದೋ ಮರೆಸಿತು ಬವಣೆ.

ಹುಟ್ಟನು ಕಂಡಳು ಜೋಯಿಡಾ ರಾಜ್ಯದಿ
ಡಿಗ್ಗಿಯ ಬುಡದಲಿ ಢಮರುಗೈದಳು
ಮಿಲನ ಉಂಡಳು ಕಾರವಾರದ ಕಡಲರಾಜನ
ತೋಳಸೆರೆಯಲಿ ವೀಣೆಯಾದಳು.

ಪಾಂಡರಿ, ನಾಗಿ, ನಾಶಿ, ಕಾನೇರಿ
ನದಿಗಳ ಸಂಗಮ ಸಾಲೆ
ಕುಣಿದು, ಕುಣಿಸಿ, ಕೊಳಲಗೈದಳು
ಬೆಳಕಿನ ಪುಂಜವ ಬೆಳಗಿದ ಬಾಲೆ
ಸುಪಾ, ನಾಗಝರಿ, ಕೊಡಸಳ್ಳಿ ಆಣೆಕಟ್ಟಿಗೆ ಶಾಲೆ
ಒಡಲೊಳು ತುಂಬಿವೆ ಮುಕುಟ ಮಣಿಗಳು
ನೀನೆಂದೂ ಬತ್ತದ ಮಾಲೆ

ಮಲೆಯ ಬನ ಬೆರಗು ನಿನ್ನಯ ಹೆದ್ದಾರಿ
ಇಂಚೂ ಇಂಚಿಗೂ ಸಂಚಿನ ಚಲನೆ ನಿನ್ನಯ ಮಾದರಿ
ಖಗಗಾನ ಮೀಟಿ ಮತಿಯಲಿ ನಿನ್ನದೆ ಶ್ರೀಕಾರ
ಹೆಮ್ಮೆಯ ಹೆಣ್ಣಿಗೆ ನಮ್ಮನೆ ಕಣ್ಣಿಗೆ ಹಾಕಿರಿ ಜಯಕಾರ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅದೇ ಕೊನೆ
Next post ಸೀತಾಫಲ ಮಂಡಿ

ಸಣ್ಣ ಕತೆ

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

cheap jordans|wholesale air max|wholesale jordans|wholesale jewelry|wholesale jerseys