ಸೀತಾಫಲ ಮಂಡಿ

ಹೊತ್ತು ಬೇಗನೆ ಮುಳುಗುವುದೆಂದರೆ
ಥಂಡಿ ಗಾಳಿ ಬೀಸುವುದೆಂದರೆ
ಸೀತಾಫಲ ಮಂಡಿಗೆ ಗಾಡಿಗಳು
ಬರತೊಡಗಿದವೆಂದೇ ಲೆಕ್ಕ

ಬರುತ್ತವೆ ಅವು ನಸುಕಿನಲ್ಲಿ
ಮುಂಜಾವದ ಮುಸುಕಿನಲ್ಲಿ
ಎಲ್ಲಿಂದಲೊ ಯಾರಿಗೆ ಗೊತ್ತು
ಎಲ್ಲರಿಗೂ ನಿದ್ದೆಯ ಮತ್ತು

ಎದ್ದು ನೋಡಿದರೆ ಮುಂದಿನ ಓಣಿ
ಗಾಡಿಗಳೆಲ್ಲ ಹೂಡಿವೆ ಠಿಕಾಣಿ
ಸೀತಾದೇವಿಯ ಕರುಣೆಯ ಫಲ
ಸೀತಾಫಲ ಎನ್ನುವ ಕಾಲ

ನವಂಬರ ಬಂತು ಡಿಸೆಂಬರ ಬಂತು
ಚಳಿ ಬಂತು ಚಳಿ ಹೋಯಿತು-ಎನ್ನುವಷ್ಟರಲಿ
ಸೀತಾಫಲ ಮಂಡಿಯೂ ಬರಿದು
ಗಾಡಿಗಳಿಲ್ಲ ಎತ್ತುಗಳಿಲ್ಲ
ಸಿಪ್ಪೆಯನುಳಿದರೆ ಇನ್ನೇನಿಲ್ಲಿ

ಇನ್ನು ಸೀತಾಫಲ ಮುಂದಿನ ವರ್ಷ-
ಅಷ್ಟರ ತನಕವು ಕಾಯಬೇಕು ಮನುಷ್ಯ
ಕಾಯುವುದಿಲ್ಲವೆ ಕಾಡಿನ ಮರ
ಸೀತಾಫಲ ಮಂಡಿಯಿಂದ
ಅದೆಷ್ಟೋ ದೂರ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಾಳಿ
Next post ಸರಿದಾರಿ

ಸಣ್ಣ ಕತೆ

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…