ಸೀತಾಫಲ ಮಂಡಿ

ಹೊತ್ತು ಬೇಗನೆ ಮುಳುಗುವುದೆಂದರೆ
ಥಂಡಿ ಗಾಳಿ ಬೀಸುವುದೆಂದರೆ
ಸೀತಾಫಲ ಮಂಡಿಗೆ ಗಾಡಿಗಳು
ಬರತೊಡಗಿದವೆಂದೇ ಲೆಕ್ಕ

ಬರುತ್ತವೆ ಅವು ನಸುಕಿನಲ್ಲಿ
ಮುಂಜಾವದ ಮುಸುಕಿನಲ್ಲಿ
ಎಲ್ಲಿಂದಲೊ ಯಾರಿಗೆ ಗೊತ್ತು
ಎಲ್ಲರಿಗೂ ನಿದ್ದೆಯ ಮತ್ತು

ಎದ್ದು ನೋಡಿದರೆ ಮುಂದಿನ ಓಣಿ
ಗಾಡಿಗಳೆಲ್ಲ ಹೂಡಿವೆ ಠಿಕಾಣಿ
ಸೀತಾದೇವಿಯ ಕರುಣೆಯ ಫಲ
ಸೀತಾಫಲ ಎನ್ನುವ ಕಾಲ

ನವಂಬರ ಬಂತು ಡಿಸೆಂಬರ ಬಂತು
ಚಳಿ ಬಂತು ಚಳಿ ಹೋಯಿತು-ಎನ್ನುವಷ್ಟರಲಿ
ಸೀತಾಫಲ ಮಂಡಿಯೂ ಬರಿದು
ಗಾಡಿಗಳಿಲ್ಲ ಎತ್ತುಗಳಿಲ್ಲ
ಸಿಪ್ಪೆಯನುಳಿದರೆ ಇನ್ನೇನಿಲ್ಲಿ

ಇನ್ನು ಸೀತಾಫಲ ಮುಂದಿನ ವರ್ಷ-
ಅಷ್ಟರ ತನಕವು ಕಾಯಬೇಕು ಮನುಷ್ಯ
ಕಾಯುವುದಿಲ್ಲವೆ ಕಾಡಿನ ಮರ
ಸೀತಾಫಲ ಮಂಡಿಯಿಂದ
ಅದೆಷ್ಟೋ ದೂರ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಾಳಿ
Next post ಸರಿದಾರಿ

ಸಣ್ಣ ಕತೆ

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…