ಜೋಕೆ

ತುಂಬಿಲ್ಲವಿನ್ನು ಜೋಳಿಗೆ
ಮತ್ತದು ಎಂದಿಗೂ ತುಂಬದು
ಅವರಿವರು ಅಷ್ಟಷ್ಟು ಕೊಟ್ಟಷ್ಟು
ತೃಷೆ ಮಿಗುವುದೇ ಹೊರತು
ಇಂಗದದು ಜೋಕೆ?

ಕರೆದು ನೀಡುವೆನೆನುವ
ಮಂದಿ ನಂಬಿ ನಿಂತಿರೋ,
ಹೊಂಚಿದ್ದು ತಲೆ ಮೇಲೆ
ಮೆಣಸು ಅರೆಯದೆ ಬಿಡರು ಜೋಕೆ?

ಜೋಳಿಗೆ ಹರಿದ ಗೋಣಿಯಾದೀತು
ಬಿಕ್ಕೆ ಇಕ್ಕಿದ ಬತ್ತ ಸೋರಿ ಹೋದೀತು.
ಮತ್ತೊಮ್ಮೆ ಜೋಕೆ?

ಅಜ್ಞಾನದ ಹಾಸು ಹಚ್ಚಡ
ಹೊದ್ದು ಗೊರಕೆ ಹೊಡೆಯುತ್ತ
ಮತ್ತೆ ಢಂಬದಾ ಡೌಲು
ಬಡೆದಿರೋ ಜೋಕೆ?

ಓಡಗೊಡಬೇಕು ಕಾಲದಾ
ಕುದುರೆಯ ಜೀನು ಜೀಕುತ್ತ
ಸತ್ಸಂಗ ಸಾಹಿತ್ಯ ಪರಿಮಳವ ಹೀರುತ್ತ
ಆದರೂ ತುಂಬಿಲ್ಲವಿನ್ನು ಜೋಳಿಗೆ
ಮತ್ತದು ಎಂದಿಗೂ ತುಂಬದು
ತುಂಬಿತೆಂದಿರೋ ಜೋಕೆ?
ತಕ್ಕುದಲ್ಲ ಆ ಜೋಳಿಗೆ ನಿಮ್ಮ ಹೆಗಲಿಗೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಆವೊತ್ತು….
Next post ಹೈದರಾಬಾದಿಗೆ

ಸಣ್ಣ ಕತೆ

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…