ಹೈದರಾಬಾದಿಗೆ

ನಂತರ ಬಂದೆವು ನಾವು ಹೈದರಾಬಾದಿಗೆ
ಬರುವಾಗಲೇ ಮಧ್ಯಾಹ್ನ ಸುಡುಬಿಸಿಲು
ರಾತ್ರಿ ಧಗೆ ಕಾರಲೆಂದು ಹಗಲೆಲ್ಲ
ಕಾದು ಕೆಂಪಾಗಿರುವ ಕಲ್ಲು ಬಂಡೆಗಳು
ಅವುಗಳ ಕೆಳಗೆ ಮಾತ್ರ ತುಸು ನೆಳಲು

ಕ್ಲಾಕ್ ಟವರಿನ ಕಾಗೆ
ನುಡಿಯಿತೊಂದು ಒಗಟು
ನೀರಿಲ್ಲದ ಸಮುದ್ರ
ಹಾಯಿಯಿಲ್ಲದ ದೋಣಿ
ಇಲ್ಲಿ ಹೊರಟವರು
ಎಲ್ಲಿ ಸೇರುವರು?

ಸೈಕಲಿನ ವ್ಯಕ್ತಿ
ಟಣಟಣನೆ ಬಡಿದ ಗಂಟೆ
ಕನಸು ಕಾಣುವುದಕ್ಕೆ ನಿಮಗೆ
ರಾತ್ರಿಯಿಲ್ಲವೆ ಎ೦ದು ಜರೆದ-
ರಾತ್ರಿ ನಾವು ನಿದ್ರಿಸಿರಲಿಲ್ಲ

ಸಾಲಾರ್ಜಂಗ್ ಮ್ಯೂಸಿಯಮಿನಿಂದ ಕೇಳಿಸುವ ಕೂಗು
ಯಕ್ಷಿಯದೊ, ದೆವ್ವದ್ದೊ, ಒಂಟಿಯಾಗಿರುವ
ಮರದ ಪ್ರತಿಮೆಯ ಭಯವೊ-ಇಲ್ಲ
ಕೇಳುವವರ ಮನಸ್ಸಿನೊಳಗಿನ ಲಯವೊ

ನಾವು ಇದೊಂದನ್ನೂ ನಂಬುವುದಿಲ್ಲ
ನಮ್ಮ ನಮ್ಮ ಕೆಲಸಗಳನ್ನು ಮಾಡುತ್ತೇವೆ
ಏನು ಆಗದವರಂತಿದ್ದೇವೆ
ಕ್ಲಾಕ್‌ಟವರಿನ ಕಾಗೆಯನ್ನು ಕೂಡ
ಆಮೇಲೆ ಯಾರೂ ಕಂಡಿಲ್ಲ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಜೋಕೆ
Next post ಲಕ್ಷಣರೇಖೆ

ಸಣ್ಣ ಕತೆ

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

  • ರಣಹದ್ದುಗಳು

    ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…