ಹೈದರಾಬಾದಿಗೆ

ನಂತರ ಬಂದೆವು ನಾವು ಹೈದರಾಬಾದಿಗೆ
ಬರುವಾಗಲೇ ಮಧ್ಯಾಹ್ನ ಸುಡುಬಿಸಿಲು
ರಾತ್ರಿ ಧಗೆ ಕಾರಲೆಂದು ಹಗಲೆಲ್ಲ
ಕಾದು ಕೆಂಪಾಗಿರುವ ಕಲ್ಲು ಬಂಡೆಗಳು
ಅವುಗಳ ಕೆಳಗೆ ಮಾತ್ರ ತುಸು ನೆಳಲು

ಕ್ಲಾಕ್ ಟವರಿನ ಕಾಗೆ
ನುಡಿಯಿತೊಂದು ಒಗಟು
ನೀರಿಲ್ಲದ ಸಮುದ್ರ
ಹಾಯಿಯಿಲ್ಲದ ದೋಣಿ
ಇಲ್ಲಿ ಹೊರಟವರು
ಎಲ್ಲಿ ಸೇರುವರು?

ಸೈಕಲಿನ ವ್ಯಕ್ತಿ
ಟಣಟಣನೆ ಬಡಿದ ಗಂಟೆ
ಕನಸು ಕಾಣುವುದಕ್ಕೆ ನಿಮಗೆ
ರಾತ್ರಿಯಿಲ್ಲವೆ ಎ೦ದು ಜರೆದ-
ರಾತ್ರಿ ನಾವು ನಿದ್ರಿಸಿರಲಿಲ್ಲ

ಸಾಲಾರ್ಜಂಗ್ ಮ್ಯೂಸಿಯಮಿನಿಂದ ಕೇಳಿಸುವ ಕೂಗು
ಯಕ್ಷಿಯದೊ, ದೆವ್ವದ್ದೊ, ಒಂಟಿಯಾಗಿರುವ
ಮರದ ಪ್ರತಿಮೆಯ ಭಯವೊ-ಇಲ್ಲ
ಕೇಳುವವರ ಮನಸ್ಸಿನೊಳಗಿನ ಲಯವೊ

ನಾವು ಇದೊಂದನ್ನೂ ನಂಬುವುದಿಲ್ಲ
ನಮ್ಮ ನಮ್ಮ ಕೆಲಸಗಳನ್ನು ಮಾಡುತ್ತೇವೆ
ಏನು ಆಗದವರಂತಿದ್ದೇವೆ
ಕ್ಲಾಕ್‌ಟವರಿನ ಕಾಗೆಯನ್ನು ಕೂಡ
ಆಮೇಲೆ ಯಾರೂ ಕಂಡಿಲ್ಲ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಜೋಕೆ
Next post ಲಕ್ಷಣರೇಖೆ

ಸಣ್ಣ ಕತೆ

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…