Home / ಲೇಖನ / ಇತರೆ / ರಸ್ತೆಗಿಳಿಯಲಿದೆ ೫ ಕೋಟಿಯ ‘ಮೇಬ್ಯಾಚ್’ ಕಾರು

ರಸ್ತೆಗಿಳಿಯಲಿದೆ ೫ ಕೋಟಿಯ ‘ಮೇಬ್ಯಾಚ್’ ಕಾರು

ಈ ಕಾರು ಇನ್ನು ೬ ತಿಂಗಳಲ್ಲಿ ಭಾರತೀಯ ಹೆದ್ದಾರಿಗಳಲ್ಲಿ ಚಲಿಸಲಿದೆ. ಡೈಮ್ಲರ್ ಕ್ರೈಸೃರ್ ಕಂಪನಿ ಮರ್ಸಿಡಿಸ್‌ಬೆಂಜ್ ಕಾರುಗಳ ತಯಾರಿಕೆಗೆ ಪ್ರಸಿದ್ಧವಾಗಿದೆ. ಈ ಕಂಪನಿಯು ಪ್ರತಿವರ್ಷ ಕೇವಲ ೧,೦೦೦ ಮೇಬ್ಯಾಚ್‍ಗಳನ್ನು ಉತ್ಪಾದಿಸಬೇಕೆಂದು ಮಿತಿಹಾಕಿ ಕೊಂಡಿದೆ. ಆದರೆ ಈ ಕಾರಿನಲ್ಲಿ ೫ ಕೋಟಿ ಬೆಲೆ ಬಾಳುವಂಥಾದ್ದೇನಿದೆ ಎಂಬ ಪ್ಪಶ್ನೆ ಸಾಮಾನ್ಯವಾಗಿ ಮೂಡುತಿದೆ. ಹಾಗಾದರೆ ನೋಡಿ – ಇದರಲ್ಲಿಯ ಆಂತರೀಕ ವಿನ್ಯಾಸಗಳನ್ನು ೨೦ ವಿಧಗಳಲ್ಲಿ ಬದಲಿಸಬಹುದು. ಬಳಸಲಾಗುವ ಚರ್ಮಕ್ಕೆ ವಿವಿಧ ಆಯ್ಕೆಗಳಿವೆ. ಮರದಲ್ಲಿ೩ ವಿಧ ಮತ್ತು ಬಾಹ್ಯ ಬಣ್ಣದಲ್ಲಿ ೧೭ ವಿಧಗಳಲ್ಲಿ ಆಯ್ಕೆಮಾಡಿಕೊಳ್ಳಬಹುದು. ಎರಡು ಡಜನ್‌ಗೂ ಹೆಚ್ಚು ಆಧುನಿಕ ತಾಂತ್ರಿಕ ಐಷಾರಾಮವನ್ನು ಒಳಗೊಂಡಿದೆ. ಸೀಟ್‌ಗಳಲ್ಲಿಯೇ ವೆಂಟಿಲೇಷನ್ ಇದೆ, ೨.೬೮ ಮೀಟರ್ ಒಳಭಾಗದಲ್ಲಿ ಮಲ್ಟಿಪಲ್ ಡಿ.ವಿ.ಡಿ. ಪ್ಲೇಯರ್ಗಳಿವೆ. ಒಂದು ಟಿ.ವಿ. ಒಂದು ಪ್ರಿಜ್, ಎರಡು ಹ್ಯಾಂಡ್‌ಸಟ್‌ಗಳು ಕಾರ್ಡ್‌ಲೆಸ್ ಫೋನ್‌ಗಳಿವೆಯಲ್ಲದೇ ಬೆಳಕಿಗೆ ಬಣ್ಣಬದಲಿಸಬಲ್ಲ ಮೇಲ್ಚಾವಣಿ, ವಿಶೇಷ ಅಳತೆಯ ಲಗೇಜ್‌ಸೆಟ್, ವಿಶಿಷ್ಟ ಗಾಲ್ಫ್ ಬ್ಯಾಗ್, ಇವೆಲ್ಲವೂ ಮೆಬ್ಯಾಚ್ ವೈಶಿಷ್ಟತೆಯ ಕೆಲವು ಅಂಶಗಳು. ೫೫೧೩ ಸಿ.ಸಿ. ೫೫೦ ಬಿ.ಹೆಚ್.ಪಿ. ಮತ್ತು ಟ್ವಿನ್‌ಟರ್ಬೋದ ಈ ಪೆಟ್ರೋಲ್ ಕಾರು ಕೇವಲ ೫.೪ ಸೆಕೆಂಡುಗಳಲ್ಲಿ ೧೦೦ ಕಿ.ಮೀ. ವೇಗದಲ್ಲಿಚಲಿಸುತ್ತದೆ! ಗರಿಷ್ಟವೆಂದರೂ ಗಂಟೆಗೆ ೨೫೦ ಕಿ.ಮೀ. ವೇಗದಲ್ಲಿ ಓಡಬಲ್ಲದು. ಈ ಕಾರಿನಲ್ಲಿರುವವರ ಸುರಕ್ಷತೆಗಾಗಿ ಅನೇಕ ವ್ಯವಸೆಗಳಿದ್ದು ಅದರಲಿ ೧೦ ಏರ್‌ಬ್ಯಾಗ್‌ಗಳ ವ್ಯವಸ್ಥೆ ಇದೆ. ಇಂಥಹ ಅತ್ಯಮೂಲ್ಯವಾದ ಅದ್ಭುತ ಕಾರನ್ನು (ನಮ್ಮ ದೇಶದಲ್ಲಿ) ಯಾರು ಖರೀದಿಸಬಲ್ಲರು, ಯಾರು ಒಳಗೆ ಕುಳಿತು ಐಷಾರಾಮಿಗಳಾಗಬಲ್ಲರು, ಯಾರು ಬಳೆಸಬಲ್ಲರು ಎಂಬುವುದು ಕೆಲವೇ ದಿನಗಳಲ್ಲಿ ತಿಳಿಯುತ್ತದೆ.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...