Home / ಲೇಖನ / ಇತರೆ / ರಸ್ತೆಗಿಳಿಯಲಿದೆ ೫ ಕೋಟಿಯ ‘ಮೇಬ್ಯಾಚ್’ ಕಾರು

ರಸ್ತೆಗಿಳಿಯಲಿದೆ ೫ ಕೋಟಿಯ ‘ಮೇಬ್ಯಾಚ್’ ಕಾರು

ಈ ಕಾರು ಇನ್ನು ೬ ತಿಂಗಳಲ್ಲಿ ಭಾರತೀಯ ಹೆದ್ದಾರಿಗಳಲ್ಲಿ ಚಲಿಸಲಿದೆ. ಡೈಮ್ಲರ್ ಕ್ರೈಸೃರ್ ಕಂಪನಿ ಮರ್ಸಿಡಿಸ್‌ಬೆಂಜ್ ಕಾರುಗಳ ತಯಾರಿಕೆಗೆ ಪ್ರಸಿದ್ಧವಾಗಿದೆ. ಈ ಕಂಪನಿಯು ಪ್ರತಿವರ್ಷ ಕೇವಲ ೧,೦೦೦ ಮೇಬ್ಯಾಚ್‍ಗಳನ್ನು ಉತ್ಪಾದಿಸಬೇಕೆಂದು ಮಿತಿಹಾಕಿ ಕೊಂಡಿದೆ. ಆದರೆ ಈ ಕಾರಿನಲ್ಲಿ ೫ ಕೋಟಿ ಬೆಲೆ ಬಾಳುವಂಥಾದ್ದೇನಿದೆ ಎಂಬ ಪ್ಪಶ್ನೆ ಸಾಮಾನ್ಯವಾಗಿ ಮೂಡುತಿದೆ. ಹಾಗಾದರೆ ನೋಡಿ – ಇದರಲ್ಲಿಯ ಆಂತರೀಕ ವಿನ್ಯಾಸಗಳನ್ನು ೨೦ ವಿಧಗಳಲ್ಲಿ ಬದಲಿಸಬಹುದು. ಬಳಸಲಾಗುವ ಚರ್ಮಕ್ಕೆ ವಿವಿಧ ಆಯ್ಕೆಗಳಿವೆ. ಮರದಲ್ಲಿ೩ ವಿಧ ಮತ್ತು ಬಾಹ್ಯ ಬಣ್ಣದಲ್ಲಿ ೧೭ ವಿಧಗಳಲ್ಲಿ ಆಯ್ಕೆಮಾಡಿಕೊಳ್ಳಬಹುದು. ಎರಡು ಡಜನ್‌ಗೂ ಹೆಚ್ಚು ಆಧುನಿಕ ತಾಂತ್ರಿಕ ಐಷಾರಾಮವನ್ನು ಒಳಗೊಂಡಿದೆ. ಸೀಟ್‌ಗಳಲ್ಲಿಯೇ ವೆಂಟಿಲೇಷನ್ ಇದೆ, ೨.೬೮ ಮೀಟರ್ ಒಳಭಾಗದಲ್ಲಿ ಮಲ್ಟಿಪಲ್ ಡಿ.ವಿ.ಡಿ. ಪ್ಲೇಯರ್ಗಳಿವೆ. ಒಂದು ಟಿ.ವಿ. ಒಂದು ಪ್ರಿಜ್, ಎರಡು ಹ್ಯಾಂಡ್‌ಸಟ್‌ಗಳು ಕಾರ್ಡ್‌ಲೆಸ್ ಫೋನ್‌ಗಳಿವೆಯಲ್ಲದೇ ಬೆಳಕಿಗೆ ಬಣ್ಣಬದಲಿಸಬಲ್ಲ ಮೇಲ್ಚಾವಣಿ, ವಿಶೇಷ ಅಳತೆಯ ಲಗೇಜ್‌ಸೆಟ್, ವಿಶಿಷ್ಟ ಗಾಲ್ಫ್ ಬ್ಯಾಗ್, ಇವೆಲ್ಲವೂ ಮೆಬ್ಯಾಚ್ ವೈಶಿಷ್ಟತೆಯ ಕೆಲವು ಅಂಶಗಳು. ೫೫೧೩ ಸಿ.ಸಿ. ೫೫೦ ಬಿ.ಹೆಚ್.ಪಿ. ಮತ್ತು ಟ್ವಿನ್‌ಟರ್ಬೋದ ಈ ಪೆಟ್ರೋಲ್ ಕಾರು ಕೇವಲ ೫.೪ ಸೆಕೆಂಡುಗಳಲ್ಲಿ ೧೦೦ ಕಿ.ಮೀ. ವೇಗದಲ್ಲಿಚಲಿಸುತ್ತದೆ! ಗರಿಷ್ಟವೆಂದರೂ ಗಂಟೆಗೆ ೨೫೦ ಕಿ.ಮೀ. ವೇಗದಲ್ಲಿ ಓಡಬಲ್ಲದು. ಈ ಕಾರಿನಲ್ಲಿರುವವರ ಸುರಕ್ಷತೆಗಾಗಿ ಅನೇಕ ವ್ಯವಸೆಗಳಿದ್ದು ಅದರಲಿ ೧೦ ಏರ್‌ಬ್ಯಾಗ್‌ಗಳ ವ್ಯವಸ್ಥೆ ಇದೆ. ಇಂಥಹ ಅತ್ಯಮೂಲ್ಯವಾದ ಅದ್ಭುತ ಕಾರನ್ನು (ನಮ್ಮ ದೇಶದಲ್ಲಿ) ಯಾರು ಖರೀದಿಸಬಲ್ಲರು, ಯಾರು ಒಳಗೆ ಕುಳಿತು ಐಷಾರಾಮಿಗಳಾಗಬಲ್ಲರು, ಯಾರು ಬಳೆಸಬಲ್ಲರು ಎಂಬುವುದು ಕೆಲವೇ ದಿನಗಳಲ್ಲಿ ತಿಳಿಯುತ್ತದೆ.
*****

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...