ಮಿಂಜೈಮೇಳ

ನವ ಶತಮಾನದಲಿ ಕಾಲಿಡುತಿಹೆವು
ಸ್ವಾತಂತ್ರ್ಯದ ಸುವರ್ಣ ಹಬ್ಬದ..
ಸಡಗರದ… ಸಂತಸಗಳಲಿ

ಗತಿಸಿ ಹೋದ ನಲವತ್ತೇಳರ
ಘಟನೆಗಳ ನೆನೆಯುತ
ಬಲಿದಾನದ ವೀರಸೇನಾನಿಗಳ
ತ್ಯಾಗದ ರೂಪ ಕಾಣುತ
ಸಾಗಿಹದು ಸ್ವಾತಂತ್ರ್ಯಯ ಸುವರ್ಣೋತ್ಸವ

ಸೌಂದರ್ಯರಾಣಿ… ಮುಕುಟ ಮಣಿ
ಶ್ವೇತಧಾರಿಣಿ ಜಮ್ಮು ಕಾಶ್ಮೀರದ
ಗಿರಿ ಕಾನನಗಳ ಮಡಿಲು
ನದಿ ನಲೆಗಳ ನಡುವಲಿ
ಮಿಂಜೈಮೇಳ… ನಡೆದಿತ್ತು

ಹಸಿರ ಧರೆಯ ಸೊಬಗಿನಲಿ
ಚಂಬಾ, ಟಿಸ್ಸಾ, ದೋಡದ, ಜನಪದರು
ಸಂಪಾಗಿ ಸಂತಸದಿ ನಿದ್ರಾವಶದಲ್ಲಿದ್ದರು
ಮಧ್ಯರಾತ್ರಿಯ ಕಾರ್ಗತ್ತಲಲ್ಲಿ
ಏ.ಕೆ-ನಲವತ್ತೇಳು ಗುಡುಗಿದವು
ಅಟ್ಟಹಾಸದಿ ಜಿಹಾದಿಗಳು ಮೆರೆದವು

ಮಲಗಿದಲ್ಲೆ ನಲುಗಿದ ಜೀವಗಳು
ಸ್ವಾತಂತ್ರ್ಯಯೋತ್ಸವ ಸಡಗರದಲಿ…
ವಿಧಿಯಾಟದ ರೂಪ ಕುಣಿದಿತ್ತು
ನಲವತ್ತೇಳರ ನೆನಪಿನಂಗಳದ
ನೆನಪನ್ನೆ ಅಳಿಸಿದವು – ಏಕ.ಎ.೪೭
ವಿಕಾರದಿ-ವಿಕ್ಷಿಪ್ತದಿ ನಗುತ್ತಿದ್ದವು
೫೦ನೇ ಸ್ವಾತಂತ್ರ್ಯಯದ ಸಂಭ್ರಮವ ಅಣಕಿಸುತ್ತಿದ್ದವು

***

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬೂದಿ ಬೀಳುತಿತ್ತು
Next post ರಾಷ್ಟ್ರಚೇತನ

ಸಣ್ಣ ಕತೆ

  • ಹಳ್ಳಿ…

    ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿ‌ಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

cheap jordans|wholesale air max|wholesale jordans|wholesale jewelry|wholesale jerseys