ರಾಷ್ಟ್ರಚೇತನ

ನಭೋ… ಮಂಡಲದಿ..
ಮಿನುಗು-ತಾರೆಗಳನೇಕ..
ಸೂರ್ಯನ ಪ್ರಕಾಶ ಮೀರುತಲಿ
ಕತ್ತಲೆಯೊಂದಿಗ್ಗೆ – ಹೋರಾಡುತ
ಬೆಳಗು… ಮುನ್ನ ಕರಗುವವು

ರಾಷ್ಟ್ರ… ಮಂಡಲದಿ…
ಮಿಂಚಿದ ದೇಶಪ್ರೇಮಿಗಳನೇಕ
ನೇತಾಜಿ, ಭಗತ್, ಚಂದ್ರಶೇಖರ
ರಾಯಣ್ಣ… ರಾಜಗುರು…

ಝಾಂಸಿ ಲಕ್ಷ್ಮೀಬಾಯಿ… ಕೆಳದಿ…
ಕಿತ್ತೂರ… ಚೆನ್ನಮ್ಮ, ಬೆಳವಾಡಿ ಮಲ್ಲಮ್ಮ
ಮಿನುಗಿದ ರಾಷ್ಟ್ರಚೇತನಗಳು

ದೇಶ ಪ್ರೀತಿಸುತ…
ದಾಸ್ಯ-ಸಂಕೋಲೆ ಕಡಿಯಲು
ಬದುಕು… ಪಣವಾಗಿಸಿ…
ಗಗನ ತಾರೆಗಳ-ತರಹ

ಸ್ವಾತಂತ್ರ್‍ಯ ಮೊಳಗುವ ಮುನ್ನ
ಮರೆಯಾದರು ಸಂತಸದ
ಬೆಳಗು ಮುಂಜಾನೆಯಲಿ

ಸ್ವಾತಂತ್ರ್‍ಯದ ಹಗಲಲಿ ನೆನೆಯುತ
ಉತ್ಸವ, ಹರಿ ಹಬ್ಬಗಳಲಿ…
ಕೊಂಡಾಡಿ ಬರಿ ಮಾತಲ್ಲಿ ಮೆರೆದಾಡಿ…
ಮೋಜಿನಲಿ ಮರೆಯುತಿಹೆವು
***

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಿಂಜೈಮೇಳ
Next post ಬೀಳಬಾರದೋ ಕೆಸರಿನೊಳು ಜಾರಿ

ಸಣ್ಣ ಕತೆ

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ಒಂದು ಹಿಡಿ ಪ್ರೀತಿ

    ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ದಾರಿ ಯಾವುದಯ್ಯಾ?

    ಮೂವತೈದು ವರ್‍ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್‍ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್… Read more…

cheap jordans|wholesale air max|wholesale jordans|wholesale jewelry|wholesale jerseys