ಬದಲಾಗಿದೆ ಕಾಲ

ಅಪ್ಪ, ನೆನಪಾಗಿದೆ ಈಗ
ರಜೆಯ ಮಜಾ ಗೋತಾ
ಮೂಲೆಯಲ್ಲೆಸೆದ ಪಾಟಿಚೀಲ
ತಳಮಳ ಜೋತು ಬೀಳುವ
ಹೆಗಲುಗಳ ನೆನೆದು
ಸಮವಸ್ತ್ರ, ಬೂಟುಗಳ ಒಳಗೆ
ಪೀಚಲು ಮತ್ತೆ ಅಪರೂಪಕ್ಕೆ
ಟೊಣಪ ದೇಹದ ಸೈನಿಕರ
ಕವಾಯತು ಮುಂಜಾನೆ
ಇದೆಲ್ಲ ಬದಲಾಗಬೇಕು

ಅದೊಂದೆ ಆಸೆ ಅಪ್ಪ
ಎಲ್ಲ ಹೊಸದಾಗಬೇಕು
ಬಳಪ ಮೂಡದ ಕರಿಹಲಗೆ
ಧೂಳಡರಿದ ಡುಬ್ಬೊಟ್ಟೆ ನಾಯಕ
ಕಿರಿಕಿರಿ ಕೊರೆತ ಕಾಂಡಗಳು
ಅವಧಿಗೊಂದಾವರ್ತಿ
ಕಾಲ ಬದಲಾಗಿದೆ.

ಓದುವ ಆಟ, ಕಲಿ-ನಲಿ
ಮತ್ತೆ ನಲಿ-ಕಲಿ
ಗೂಡು ಕಟ್ಟುವ ಗೊಂದಲ
ಒತ್ತಾಯದಿ ಉಣಿಸಿ ಮತ್ತೆ
ಕಕ್ಕಿಸುವ ಕಲಿಕೆ
ಔಪಚಾರಿಕ ಲೇಪನ
ಸೃಜನಶೀಲತೆ ಮರಣ
ಬದಲಾಗಬೇಕು.

ಸ್ಮಾರ್ಟ ಕ್ಲಾಸುಗಳಲಿ ಕಲಿತು
ಸ್ಮಾರ್ಟಾಗಬೇಕು
ಟ್ರಯಲ್ ಎಂಡ ಎರರ್ ವಿಧಾನದಿ
ಟ್ರಿಮ್ ಆಗಬೇಕು
ನನಗೆ ನಾನೇ ಕಲಿಯಬೇಕು
ನಾನೇ ನನ್ನ ಗುರುವಾಗಬೇಕು
ಕಾಲ ಬದಲಾಗಿದೆ
ಎಲ್ಲ ಬದಲಾಗಬೇಕು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಯಾಕೆ?
Next post ಟ್ರಾನ್ಸಾಲ್ಪಿನೋ

ಸಣ್ಣ ಕತೆ

  • ಅಜ್ಜಿ-ಮೊಮ್ಮಗ

    ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

  • ಮಿಂಚಿನ ದೀಪ

    ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…