ಯಾಕೆ?

ಈಗೀಗ ಒಂದೇ ಯೋಚನೆ
ನನ್ನೊಳಗೆ.
ಬದಲಾದ ಸಂತೋಷಗಳಲ್ಲಿ
ಬದಲಾದ ನೋವುಗಳಲ್ಲಿ
ನಾನು ಬದಲಾಗಿದ್ದೇನೆಯೆ?

ನನ್ನ ಪ್ರೀತಿಯ ಬಗ್ಗೆಯೆ
ಗಾಢ ಅನುಮಾನ
ನಿನ್ನ ಕಣ್ಣೊಳಗಿನ ದುಃಖ
ಗೆಲ್ಲಲಾಗಿಲ್ಲ ಯಾಕೆ?

ಬಣ್ಣದ ಹಾಗೆ
ಬೆಳಕಿನ ಹಾಗೆ
ನುಣುಚಿ ಹೋಗುತ್ತಿದ್ದೀಯೆ
ಯಾಕೆ? ಯಾಕೆ?

ನೀನು ಕೇವಲ
ಹಸಿ-ಬಿಸಿ ರಕ್ತಮಾಂಸದ
ಮುದ್ದೆಯಾಗಿದ್ದಿದ್ದರೆ
ಎಂದೋ ಹೋಗುತ್ತಿದ್ದೆ
ಹಿಂದಿರುಗಿ ನೋಡದೆ

ಆದರೆ ನೀನು
ಪರಿಮಳಿಸುವ ಗಾಳಿಯಾಗಿ
ಇರುವೆ, ಮೊರೆಯುತ್ತಿರುವೆ
ನನ್ನೊಳಗೆ.

ಕೊನೆಗೆ-
ನೀನು ಪ್ರೀತಿಯ ದಂಡೆಯಾಗಿದ್ದರೆ
ನಾನು ನಡೆದು ಬರುತ್ತಿದ್ದೆ
ಆದರದು ಮಹಾಪೂರ
ಕಾಲಡಿಯ ಮಣ್ಣು ಕುಸಿಯುತ್ತಿದೆ
ಕೊಚ್ಚಿ ಹೋಗುತ್ತಿದ್ದೇನೆ.

*****

Previous post ಸತ್ಯ
Next post ಬದಲಾಗಿದೆ ಕಾಲ

ಸಣ್ಣ ಕತೆ

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ಹೃದಯ ವೀಣೆ ಮಿಡಿಯೆ….

    ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…

  • ಏಡಿರಾಜ

    ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…