ಯಾಕೆ?

ಈಗೀಗ ಒಂದೇ ಯೋಚನೆ
ನನ್ನೊಳಗೆ.
ಬದಲಾದ ಸಂತೋಷಗಳಲ್ಲಿ
ಬದಲಾದ ನೋವುಗಳಲ್ಲಿ
ನಾನು ಬದಲಾಗಿದ್ದೇನೆಯೆ?

ನನ್ನ ಪ್ರೀತಿಯ ಬಗ್ಗೆಯೆ
ಗಾಢ ಅನುಮಾನ
ನಿನ್ನ ಕಣ್ಣೊಳಗಿನ ದುಃಖ
ಗೆಲ್ಲಲಾಗಿಲ್ಲ ಯಾಕೆ?

ಬಣ್ಣದ ಹಾಗೆ
ಬೆಳಕಿನ ಹಾಗೆ
ನುಣುಚಿ ಹೋಗುತ್ತಿದ್ದೀಯೆ
ಯಾಕೆ? ಯಾಕೆ?

ನೀನು ಕೇವಲ
ಹಸಿ-ಬಿಸಿ ರಕ್ತಮಾಂಸದ
ಮುದ್ದೆಯಾಗಿದ್ದಿದ್ದರೆ
ಎಂದೋ ಹೋಗುತ್ತಿದ್ದೆ
ಹಿಂದಿರುಗಿ ನೋಡದೆ

ಆದರೆ ನೀನು
ಪರಿಮಳಿಸುವ ಗಾಳಿಯಾಗಿ
ಇರುವೆ, ಮೊರೆಯುತ್ತಿರುವೆ
ನನ್ನೊಳಗೆ.

ಕೊನೆಗೆ-
ನೀನು ಪ್ರೀತಿಯ ದಂಡೆಯಾಗಿದ್ದರೆ
ನಾನು ನಡೆದು ಬರುತ್ತಿದ್ದೆ
ಆದರದು ಮಹಾಪೂರ
ಕಾಲಡಿಯ ಮಣ್ಣು ಕುಸಿಯುತ್ತಿದೆ
ಕೊಚ್ಚಿ ಹೋಗುತ್ತಿದ್ದೇನೆ.

*****

Previous post ಸತ್ಯ
Next post ಬದಲಾಗಿದೆ ಕಾಲ

ಸಣ್ಣ ಕತೆ

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ಕೇರೀಜಂ…

    ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…