ಮಾಸಲು ಸೀರೆ

ವಿರಕ್ತ ಲೋಕದ ಅಸಂಬದ್ಧ ಉಲಿತ
ಉಳಿಯಿಂದ ತೂತು ಕೊರೆದಂತೆ
ಖಾಲಿಯಾದ ನೇತ್ರದ್ವಯಗಳು
ಪರಾಂಬರಿಸಿ ದೃಷ್ಟಿಯಿಟ್ಟರಷ್ಟೇ ದೃಶ್ಯ.

ಸೀಳುನೋಟ ಬೀರುತ್ತಿದ್ದಾಳೆ ಆಕೆ
ಬಾಗಿದ ಬೆನ್ನು ಸಹಕರಿಸುತ್ತಿಲ್ಲ,
ಒಮ್ಮೆಲೆ ತಡಕಾಡುತ್ತಾಳೆ,
ಜಾರಿದ ಚಾಳೀಸು ಜಾಗಕ್ಕೇರಿಸಲು:

ನಿರ್ಜೀವ ಬಿಳಿಕೂದಲುಗಳು
ಎತ್ತಿ ಕಟ್ಟಲಾಗದು
ನೆರಿಗೆಗಟ್ಟಿದ ಹಸ್ತದ ಬೆರಳುಗಳಿಗೆ:

ಮೈಗಂಟಿದ ಮಾಸಲು ಸೀರೆ
ಕೂಡ ಈಗೀಗ ಆಕೆಗೆ ಭಾರ
ಸಿಡುಕುತ್ತಾಳೆ- ಹೊರೆಗೆ
ಡೊಂಕು ಕಾಲುಗಳ ಜೋಡಿಸಲು
ಜರೂರು ಇಲ್ಲದಾಗಲು ಮತ್ತೆ
ಮಡಚುತ್ತಾಳೆ-ಮುಲುಗುತ್ತ,

ದಿಗಂತದಲ್ಲಿ ಅಸ್ತಂಗತನಾಗುತ್ತ ಭಾನು
ಭಾರವಾಗಿ ಕೊನೆಯ ಬಾಣಬಿಟ್ಟಂತೆ
ಹೊರಟು ನಿಂತಿದ್ದಾನೆ-
ಏಕಾಂಗಿತನದ ಉಯಿಲನ್ನು ಆಕೆಯ ಹೆಸರಿಗಿಟ್ಟು

ಧಗಧಗನೆ ಉರಿದು
ಬೆಳಕು ಚೆಲ್ಲಿದ ಕಾಲ
ಈಗ ಬರಿಯ ಮೆಲಕು ಮಾತ್ರ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಾನು ಸೂರ್ಯ
Next post ಹೈಡ್ ಪಾರ್ಕಿನಲ್ಲಿ ಭಯೋತ್ಪಾದಕರ ವಿರುದ್ಧ

ಸಣ್ಣ ಕತೆ

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…