ನಾನು ಸೂರ್ಯ

ಎಲ್ಲ ಹೇಳುತ್ತಾರೆ ನಾನು
ಹಕ್ಕಿಗಳ ಗಡಿಯಾರ
ನನಗೊ….
ಚಿಲಿಪಿಲಿ ಸದ್ದು
ಕುಲುಕಿ ಎಬ್ಬಿಸಿದಾಗಲೆ
ಎಚ್ಚರ!

ನಾನು ಬಂಗಾರದ ರಥದ
ಒಡೆಯ ಎನ್ನುವುದು
ಕೇವಲ ಉಳ್ಳವರ ಕುಹಕ
ನಾನು ನಿಮ್ಮಂತೆಯೆ
ಬೆಂಕಿಯ ಕಾರ್ಖಾನೆಯಲ್ಲಿ
ಬಡ ಕಾರ್ಮಿಕ

ನಾನು ಅಸ್ಪೃಶ್ಯ
ನನ್ನ ಜೊತೆಗೆ ಎದ್ದು
ಧೂಳು ಗುಡಿಸುವ
ಜಾಡಮಾಲಿಯನ್ನು
ಬೆಚ್ಚಗೆ ಚುಂಬಿಸುತ್ತೇನೆ
ನಂತರ ಮಿಕ್ಕವರನ್ನು
ಸುಡುತ್ತಾ ಹೋಗುತ್ತೇನೆ.

ನಾನು ಹುಟ್ಟು ಬಂಡಾಯಗಾರ
ಜಗತ್ತಿನ ಅನ್ಯಾಯದ
ವಿರುದ್ಧ ಯಾವತ್ತು
ಸಿಡಿದು ನಿಂತಿದ್ದೇನೆ ದೂರ
ನಾನು ಕವಿ
ಹಳ್ಳಗಳು ನನ್ನ
ಹನಿಗವನಗಳು
ನದಿಗಳು ನನ್ನ
ದೀರ್ಘ ಕವನಗಳು
ಸಾಗರಗಳು ನನ್ನ
ಮಹಾಕಾವ್ಯಗಳು.

ನಾನು ಕಲಾವಿದ
ನನ್ನ ಸಂಜೆ
ಇಡಿ ಜಗತ್ತಿನಲ್ಲೆ
ಮಾನ್ಯತೆ ಪಡೆದ
ಉತ್ಕೃಷ್ಟ ಕಲಾಕೃತಿ

ನಾನು ಕಾವಿ ಉಡುತ್ತೇನೆ
ಸಂನ್ಯಾಸಿಯಲ್ಲ
ನಾನು ಬೆಳಕು ಕೊಡುತ್ತೇನೆ
ಜ್ಞಾನಿಯಲ್ಲ
ನಾನು ಸೂರ್ಯ-
ನಾನು ವಸ್ತು
ನಾನು ಚೈತನ್ಯ.

*****

Previous post ಕಾಲ
Next post ಮಾಸಲು ಸೀರೆ

ಸಣ್ಣ ಕತೆ

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

  • ತಿಮ್ಮರಯಪ್ಪನ ಕಥೆ

    ರಂಗಣ್ಣ ಎರಡು ತಿಂಗಳು ಕಾಲ ರಜ ತೆಗೆದು ಕೊಂಡು ಬೆಂಗಳೂರಿಗೆ ಬಂದು ವಾಸಮಾಡುತ್ತಿದ್ದನು. ಶಿವಮೊಗ್ಗದಲ್ಲಿ ಪಿತ್ತವೇರಿಸುವ ತುಂಗಾಪಾನವನ್ನು ನಿತ್ಯವೂ ಮಾಡಿ, ಕಿವಿ ಮೂಗು ಬಾಯಿಗಳಿಗೆಲ್ಲ ಮುಸುರುವ ಸೊಳ್ಳೆಗಳ… Read more…

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…