Home / ಕವನ / ಕವಿತೆ / ಹೈಡ್ ಪಾರ್ಕಿನಲ್ಲಿ ಭಯೋತ್ಪಾದಕರ ವಿರುದ್ಧ

ಹೈಡ್ ಪಾರ್ಕಿನಲ್ಲಿ ಭಯೋತ್ಪಾದಕರ ವಿರುದ್ಧ

ಬಸ್ಸು ಸುರಂಗಮಾರ್ಗ ಬಾರು ಕೆಫೆಟೇರಿಯಾ
ವಿಂಬಲ್ಡನ್ ಪಂದ್ಯ ಸೂಪರ್ ಬಜಾರುಗಳಲ್ಲಿ
ನಿಮ್ಮ ಅಕ್ಕಪಕ್ಕ ನಿಂತವರನ್ನೇ ಸಂದೇಹಿಸುವ ಕಾಲ!
ಮುಂದೆ ನೋಡುವಿರ ಹಿಂದೆ ನೋಡುವಿರ
ಮನುಷ್ಯನಿಗಿರುವುದು ಎರಡೇ ಕಣ್ಣುಗಳು
ಕಛೇರಿಗೆ ಹೋದವರು ಹಿಂದೆ ಬರುತ್ತಾರೆಯೆ
ಬಂದರೂ ಅವರ ಕೈಕಾಲುಗಳು ಹಾಗೆಯೇ ಇರುತ್ತವೆಯೇ ?

ಉತ್ತರ ಅಯರ್ಲೆಂಡಿನಲ್ಲಿ ಏನಾಗುತ್ತಿದೆ?
ಆರ್ಜೆಂಟೇನಾದಲ್ಲಿ ನಿಕರಾಗುವಾದಲ್ಲಿ
ಇಲ್ಲಿ ಲಂಡನ್ನಲ್ಲಿ! ಜನ ಬದುಕಬೇಕೆ ಬೇಡವೆ?
ಕ್ರಾಂತಿಯನ್ನುವುದೀಗ ಅಂಗಡಿಯಲ್ಲಿ ಸಿಗುವ
ವಸ್ತುವಾಗಿಬಿಟ್ಟಿದೆ! ಸೆಲೋಫೇನ್ ಚೀಲಗಳಲ್ಲಿ
ಯಾರು ಬೇಕಾದರೂ ಕೊಳ್ಳಬಹುದು ಹತ್ತು,
ಪೌಂಡುಗಳಿಗೆ! “ಖಾಲಿ ಚೀಲಗಳನ್ನು ಮಾತ್ರ
ನಾಶಪಡಿಸಿರಿ, ಮಕ್ಕಳ ಕೈಗೆ ದೊರಕುವ ಕಡೆ
ಒಗೆಯಬೇಡಿರಿ!”- ಎನ್ನುತ್ತದೆ ಅದರ ಮೇಲಿನ
ಪ್ರಕಟಣೆ. ಆದರೆ ಚೀಲದೂಳಗಿನ ವಸ್ತು?
ಅದಕ್ಕೆ ಯಾರ ಲಂಗು ಲಗಾಮು ಸ್ವಾಮಿ? ಯಾವ
ಸರಕಾರೀ ನಿಯಂತ್ರಣ? ಅದು ಆಫ್ರಿಕೆಗೂ ಸಿದ್ಧ
ಲ್ಯಾಟಿನ್ ಅಮೇರಿಕೆಗೂ ಸಿದ್ಧ! ಮತ್ತೆ ಹೊಸ
ರೋಗಗಳ ಸೋಂಕು ತಗಲಿಸುತ್ತದೆ ನಮ್ಮ
ನಿಲಯದ ಬುದ್ದಿ ಜೀವಿಗಳಿಗೆ!

ಅವರೋ! ಹಾ! ಅವರ ಬಗ್ಗೆ ಎಷ್ಟು ಹೇಳಿದರೂ
ಕಡಿಮೆಯೆ! ಅವರು ಸಿಗರೇಟಿನ ಬೆಲೆಯಿಂದ
ಹಿಡಿದು ಅಣ್ವಸ್ತ್ರಗಳ ಬೆಲೆಯ ತನಕ ಎಲ್ಲವನ್ನೂ
ತಿಳಿದವರಂತೆ ಮಾತಾಡುತ್ತಾರೆ. ತಮ್ಮ ಪಕ್ಕದಲ್ಲೇ
ಬಾಂಬು ಸಿಡಿದರೂ ಕೇಳಿಸದಂತೆ ಸಾಕ್ರಟೀಸನ
ಶೈಲಿಯಲ್ಲಿ ಚರ್ಚಿಸುತ್ತಾರೆ! ಎಂಥ ಸಮಾಜ!

ನನಗೆ ಹೇಳುವುದಕ್ಕೆ ಬಹಳಷ್ಟಿದೆ-ಆದರೆ
ನೀವು ನಿಮ್ಮ ನಿಮ್ಮ ಮನೆಗಳಿಗೆ ಹೋಗಲು
ಆತುರದಿಂದಿದ್ದೀರಿ. ಸದ್ಯ ನಿಲ್ಲಿಸುವೆ. ನಾಳೆ
ಇಲ್ಲೇ ನಮ್ಮ ಭೇಟಿ. ಆದರೆ ಜಾಗ್ರತೆ!
ನಿಮ್ಮ ಕಾರಿನ ಬಾಗಿಲು ತೆಗೆಯುವ ಮೊದಲು
ಎರಡೆರಡು ಬಾರಿ ನೋಡಿಕೊಳ್ಳಿ!
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...