ಹೈಡ್ ಪಾರ್ಕಿನಲ್ಲಿ ಭಯೋತ್ಪಾದಕರ ವಿರುದ್ಧ

ಬಸ್ಸು ಸುರಂಗಮಾರ್ಗ ಬಾರು ಕೆಫೆಟೇರಿಯಾ
ವಿಂಬಲ್ಡನ್ ಪಂದ್ಯ ಸೂಪರ್ ಬಜಾರುಗಳಲ್ಲಿ
ನಿಮ್ಮ ಅಕ್ಕಪಕ್ಕ ನಿಂತವರನ್ನೇ ಸಂದೇಹಿಸುವ ಕಾಲ!
ಮುಂದೆ ನೋಡುವಿರ ಹಿಂದೆ ನೋಡುವಿರ
ಮನುಷ್ಯನಿಗಿರುವುದು ಎರಡೇ ಕಣ್ಣುಗಳು
ಕಛೇರಿಗೆ ಹೋದವರು ಹಿಂದೆ ಬರುತ್ತಾರೆಯೆ
ಬಂದರೂ ಅವರ ಕೈಕಾಲುಗಳು ಹಾಗೆಯೇ ಇರುತ್ತವೆಯೇ ?

ಉತ್ತರ ಅಯರ್ಲೆಂಡಿನಲ್ಲಿ ಏನಾಗುತ್ತಿದೆ?
ಆರ್ಜೆಂಟೇನಾದಲ್ಲಿ ನಿಕರಾಗುವಾದಲ್ಲಿ
ಇಲ್ಲಿ ಲಂಡನ್ನಲ್ಲಿ! ಜನ ಬದುಕಬೇಕೆ ಬೇಡವೆ?
ಕ್ರಾಂತಿಯನ್ನುವುದೀಗ ಅಂಗಡಿಯಲ್ಲಿ ಸಿಗುವ
ವಸ್ತುವಾಗಿಬಿಟ್ಟಿದೆ! ಸೆಲೋಫೇನ್ ಚೀಲಗಳಲ್ಲಿ
ಯಾರು ಬೇಕಾದರೂ ಕೊಳ್ಳಬಹುದು ಹತ್ತು,
ಪೌಂಡುಗಳಿಗೆ! “ಖಾಲಿ ಚೀಲಗಳನ್ನು ಮಾತ್ರ
ನಾಶಪಡಿಸಿರಿ, ಮಕ್ಕಳ ಕೈಗೆ ದೊರಕುವ ಕಡೆ
ಒಗೆಯಬೇಡಿರಿ!”- ಎನ್ನುತ್ತದೆ ಅದರ ಮೇಲಿನ
ಪ್ರಕಟಣೆ. ಆದರೆ ಚೀಲದೂಳಗಿನ ವಸ್ತು?
ಅದಕ್ಕೆ ಯಾರ ಲಂಗು ಲಗಾಮು ಸ್ವಾಮಿ? ಯಾವ
ಸರಕಾರೀ ನಿಯಂತ್ರಣ? ಅದು ಆಫ್ರಿಕೆಗೂ ಸಿದ್ಧ
ಲ್ಯಾಟಿನ್ ಅಮೇರಿಕೆಗೂ ಸಿದ್ಧ! ಮತ್ತೆ ಹೊಸ
ರೋಗಗಳ ಸೋಂಕು ತಗಲಿಸುತ್ತದೆ ನಮ್ಮ
ನಿಲಯದ ಬುದ್ದಿ ಜೀವಿಗಳಿಗೆ!

ಅವರೋ! ಹಾ! ಅವರ ಬಗ್ಗೆ ಎಷ್ಟು ಹೇಳಿದರೂ
ಕಡಿಮೆಯೆ! ಅವರು ಸಿಗರೇಟಿನ ಬೆಲೆಯಿಂದ
ಹಿಡಿದು ಅಣ್ವಸ್ತ್ರಗಳ ಬೆಲೆಯ ತನಕ ಎಲ್ಲವನ್ನೂ
ತಿಳಿದವರಂತೆ ಮಾತಾಡುತ್ತಾರೆ. ತಮ್ಮ ಪಕ್ಕದಲ್ಲೇ
ಬಾಂಬು ಸಿಡಿದರೂ ಕೇಳಿಸದಂತೆ ಸಾಕ್ರಟೀಸನ
ಶೈಲಿಯಲ್ಲಿ ಚರ್ಚಿಸುತ್ತಾರೆ! ಎಂಥ ಸಮಾಜ!

ನನಗೆ ಹೇಳುವುದಕ್ಕೆ ಬಹಳಷ್ಟಿದೆ-ಆದರೆ
ನೀವು ನಿಮ್ಮ ನಿಮ್ಮ ಮನೆಗಳಿಗೆ ಹೋಗಲು
ಆತುರದಿಂದಿದ್ದೀರಿ. ಸದ್ಯ ನಿಲ್ಲಿಸುವೆ. ನಾಳೆ
ಇಲ್ಲೇ ನಮ್ಮ ಭೇಟಿ. ಆದರೆ ಜಾಗ್ರತೆ!
ನಿಮ್ಮ ಕಾರಿನ ಬಾಗಿಲು ತೆಗೆಯುವ ಮೊದಲು
ಎರಡೆರಡು ಬಾರಿ ನೋಡಿಕೊಳ್ಳಿ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಾಸಲು ಸೀರೆ
Next post ಚಿಂತೆ – ನಿಶ್ಚಿಂತೆ

ಸಣ್ಣ ಕತೆ

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

cheap jordans|wholesale air max|wholesale jordans|wholesale jewelry|wholesale jerseys