Home / ಕವನ / ಕವಿತೆ / ಹೈಡ್ ಪಾರ್ಕಿನಲ್ಲಿ ಭಯೋತ್ಪಾದಕರ ವಿರುದ್ಧ

ಹೈಡ್ ಪಾರ್ಕಿನಲ್ಲಿ ಭಯೋತ್ಪಾದಕರ ವಿರುದ್ಧ

ಬಸ್ಸು ಸುರಂಗಮಾರ್ಗ ಬಾರು ಕೆಫೆಟೇರಿಯಾ
ವಿಂಬಲ್ಡನ್ ಪಂದ್ಯ ಸೂಪರ್ ಬಜಾರುಗಳಲ್ಲಿ
ನಿಮ್ಮ ಅಕ್ಕಪಕ್ಕ ನಿಂತವರನ್ನೇ ಸಂದೇಹಿಸುವ ಕಾಲ!
ಮುಂದೆ ನೋಡುವಿರ ಹಿಂದೆ ನೋಡುವಿರ
ಮನುಷ್ಯನಿಗಿರುವುದು ಎರಡೇ ಕಣ್ಣುಗಳು
ಕಛೇರಿಗೆ ಹೋದವರು ಹಿಂದೆ ಬರುತ್ತಾರೆಯೆ
ಬಂದರೂ ಅವರ ಕೈಕಾಲುಗಳು ಹಾಗೆಯೇ ಇರುತ್ತವೆಯೇ ?

ಉತ್ತರ ಅಯರ್ಲೆಂಡಿನಲ್ಲಿ ಏನಾಗುತ್ತಿದೆ?
ಆರ್ಜೆಂಟೇನಾದಲ್ಲಿ ನಿಕರಾಗುವಾದಲ್ಲಿ
ಇಲ್ಲಿ ಲಂಡನ್ನಲ್ಲಿ! ಜನ ಬದುಕಬೇಕೆ ಬೇಡವೆ?
ಕ್ರಾಂತಿಯನ್ನುವುದೀಗ ಅಂಗಡಿಯಲ್ಲಿ ಸಿಗುವ
ವಸ್ತುವಾಗಿಬಿಟ್ಟಿದೆ! ಸೆಲೋಫೇನ್ ಚೀಲಗಳಲ್ಲಿ
ಯಾರು ಬೇಕಾದರೂ ಕೊಳ್ಳಬಹುದು ಹತ್ತು,
ಪೌಂಡುಗಳಿಗೆ! “ಖಾಲಿ ಚೀಲಗಳನ್ನು ಮಾತ್ರ
ನಾಶಪಡಿಸಿರಿ, ಮಕ್ಕಳ ಕೈಗೆ ದೊರಕುವ ಕಡೆ
ಒಗೆಯಬೇಡಿರಿ!”- ಎನ್ನುತ್ತದೆ ಅದರ ಮೇಲಿನ
ಪ್ರಕಟಣೆ. ಆದರೆ ಚೀಲದೂಳಗಿನ ವಸ್ತು?
ಅದಕ್ಕೆ ಯಾರ ಲಂಗು ಲಗಾಮು ಸ್ವಾಮಿ? ಯಾವ
ಸರಕಾರೀ ನಿಯಂತ್ರಣ? ಅದು ಆಫ್ರಿಕೆಗೂ ಸಿದ್ಧ
ಲ್ಯಾಟಿನ್ ಅಮೇರಿಕೆಗೂ ಸಿದ್ಧ! ಮತ್ತೆ ಹೊಸ
ರೋಗಗಳ ಸೋಂಕು ತಗಲಿಸುತ್ತದೆ ನಮ್ಮ
ನಿಲಯದ ಬುದ್ದಿ ಜೀವಿಗಳಿಗೆ!

ಅವರೋ! ಹಾ! ಅವರ ಬಗ್ಗೆ ಎಷ್ಟು ಹೇಳಿದರೂ
ಕಡಿಮೆಯೆ! ಅವರು ಸಿಗರೇಟಿನ ಬೆಲೆಯಿಂದ
ಹಿಡಿದು ಅಣ್ವಸ್ತ್ರಗಳ ಬೆಲೆಯ ತನಕ ಎಲ್ಲವನ್ನೂ
ತಿಳಿದವರಂತೆ ಮಾತಾಡುತ್ತಾರೆ. ತಮ್ಮ ಪಕ್ಕದಲ್ಲೇ
ಬಾಂಬು ಸಿಡಿದರೂ ಕೇಳಿಸದಂತೆ ಸಾಕ್ರಟೀಸನ
ಶೈಲಿಯಲ್ಲಿ ಚರ್ಚಿಸುತ್ತಾರೆ! ಎಂಥ ಸಮಾಜ!

ನನಗೆ ಹೇಳುವುದಕ್ಕೆ ಬಹಳಷ್ಟಿದೆ-ಆದರೆ
ನೀವು ನಿಮ್ಮ ನಿಮ್ಮ ಮನೆಗಳಿಗೆ ಹೋಗಲು
ಆತುರದಿಂದಿದ್ದೀರಿ. ಸದ್ಯ ನಿಲ್ಲಿಸುವೆ. ನಾಳೆ
ಇಲ್ಲೇ ನಮ್ಮ ಭೇಟಿ. ಆದರೆ ಜಾಗ್ರತೆ!
ನಿಮ್ಮ ಕಾರಿನ ಬಾಗಿಲು ತೆಗೆಯುವ ಮೊದಲು
ಎರಡೆರಡು ಬಾರಿ ನೋಡಿಕೊಳ್ಳಿ!
*****

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಎಂ ಎನ್ ಎಸ್ ರಾವ್