ವಚನ ವಿಚಾರ – ಕೈಲಾಸ

ವಚನ ವಿಚಾರ – ಕೈಲಾಸ

ಕಾಯಕದಲ್ಲಿ ನಿರತನಾದಡೆ
ಗುರುದರ್ಶನವಾದಡೂ ಮರೆಯಬೇಕು
ಲಿಂಗಪೂಜೆಯಾದಡೂ ಮರೆಯಬೇಕು
ಜಂಗಮ ಮುಂದೆ ನಿಂದಿದ್ದಡೂ ಹಂಗ ಹರಿಯಬೇಕು
ಕಾಯಕವೆ ಕೈಲಾಸವಾದ ಕಾರಣ
ಅಮರೇಶ್ವರಲಿಂಗವಾಯಿತ್ತಾದಡೂ ಕಾಯಕದೊಳಗು

ಆಯ್ದಕ್ಕಿ ಮಾರಯ್ಯನ ವಚನ. ಕಾಯಕವೆ ಕೈಲಾಸ ಅನ್ನುವ ಮಾತನ್ನು ಹೇಳಿದವ ಆಯ್ದಕ್ಕಿ ಮಾರಯ್ಯ. ಈತ ಕಲ್ಯಾಣದಲ್ಲಿ ನೆಲದ ಮೇಲೆ ಚೆಲ್ಲಿದ ಅಕ್ಕಿಯನ್ನು ಆಯ್ದು ಹೊಟ್ಟೆ ಹೊರೆದುಕೊಳ್ಳುವ ಕಾಯಕ ಮಾಡುತ್ತಿದ್ದನಂತೆ.

ಕಾಯಕವೆಂದರೆ ದೇಹ ಶ್ರಮದ ಕೆಲಸ. ಅದರಿಂದ ಹೊಟ್ಟೆಯ ಪಾಡು ನೋಡಿಕೊಳ್ಳಬೇಕು ಅನ್ನುವ ನಂಬಿಕೆ. ಕಾಯಕ ಎಷ್ಟು ಮುಖ್ಯವೆಂದರೆ ವೀರಶೈವರು ಬಹಳ ಮುಖ್ಯವೆನ್ನುವ ಗುರು ಲಿಂಗ ಜಂಗಮ ಎಲ್ಲವನ್ನೂ ಮರೆಯುವಷ್ಟು ಕಾಯಕದಲ್ಲಿ ಮಗ್ನನಾಗಬೇಕು ಅನ್ನುತ್ತಾನೆ. ದೇವರಿದ್ದರೆ ಅವನೂ ಕಾಯಕದಲ್ಲಿಯೇ ಇರುತ್ತಾನೆ. ಕಾಯಕಕ್ಕಿಂತ ದೊಡ್ಡವನಲ್ಲ.

ದೇಹಶ್ರಮವನ್ನೂ ಆಧ್ಯಾತ್ಮವನ್ನೂ ಸಮೀಕರಿಸುವುದಲ್ಲ, ದಿನನಿತ್ಯದ ಬದುಕಿಗೆ ಅಗತ್ಯವಾಗಿ ಮಾಡಲೇಬೇಕಾದ ಕೆಲಸಕ್ಕಿಂತ ಮಿಗಿಲಾಗದ ಆಧ್ಯಾತ್ಮ ಇಲ್ಲ ಅನ್ನುವ ನಿಲುವು ಇದು.

ಕಾಯಕವೆ ಕೈಲಾಸ ಅನ್ನುವ ಮಾತು `ಕಾಯ ವಿಡಿದಿಹನ್ನಬರ’ ಎಂದು ಆರಂಭವಾಗುವ ಮನಸಂದ ಮಾರಿತಂದೆಯ ವಚನದಲ್ಲೂ ಬರುತ್ತದೆ. ಆಯ್ದಕ್ಕಿ ಮಾರಯ್ಯನ ವಚನವೇ ಸ್ವಲ್ಪ ಬದಲಾವಣೆಯೊಂದಿಗೆ ನಂಜುಂಡ ಶಿವನಲ್ಲೂ ಕಾಣುತ್ತದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅರಗಿನಮನೆಯಲ್ಲಿ ಪಾಂಡವರು
Next post ಮಧುರಗಾನ

ಸಣ್ಣ ಕತೆ

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…

cheap jordans|wholesale air max|wholesale jordans|wholesale jewelry|wholesale jerseys