Home / ಲೇಖನ / ವಿಜ್ಞಾನ / ಒಂದು ಮನೋವೈಜ್ಞಾನಿಕ ವಿಶ್ಲೇಷಣೆ : ಹಿಂಸಾತ್ಮಕ ಕ್ರಿಯೆಗೆ ಸಿರೋಟೋನಿನ್ ಅಭಾವವೇ ಕಾರಣ

ಒಂದು ಮನೋವೈಜ್ಞಾನಿಕ ವಿಶ್ಲೇಷಣೆ : ಹಿಂಸಾತ್ಮಕ ಕ್ರಿಯೆಗೆ ಸಿರೋಟೋನಿನ್ ಅಭಾವವೇ ಕಾರಣ

ಜಗತ್ತಿನಲ್ಲಿ ದಿನನಿತ್ಯ ಹಿಂಸಾತ್ಮಕ ಕ್ರಿಯೆಗಳು ನಡೆಯುತ್ತಲೇ ಇರುತ್ತವೆ. ಒಬ್ಬ ವ್ಯಕ್ತಿ ನಿರ್ಧಯಿಯಾಗಿ ಅನೇಕ ವ್ಯಕ್ತಿಗಳನ್ನು ಕೊಲೆಗೈದು, ಅತ್ಯಾಚಾರವೆಸಗಿ, ರಕ್ತ ಪಿಪಾಸಿಯಾಗಿ ನಿರಂತರವಾಗಿ ನಡೆದುಕೊಳ್ಳುತ್ತಲೇ ಇರುತ್ತಾನೆ. ಇವನಲ್ಲಿ ಕರುಣೆ, ವಾತ್ಸಲ್ಯ, ಮಾನವತಾವಾದಗಳೆಲ್ಲ ಬತ್ತಿ ಕೇವಲ ಕ್ರೌರ್ಯ, ಹಿಂಸೆ, ನಿಷ್ಕರುಣೆಗಳು ಮಡುಗಟ್ಟಿರುತ್ತವೆ. ಏಕೆ ಹೀಗೆ ಈ ವ್ಯಕ್ತಿಗಳು ಮೆದುಳಿನ ಸಂದೇಶಗಳಲ್ಲಿ ಏನಾದರೂ ತಪ್ಪಾಗಿ ಹೀಗೆ ವರ್ತಿಸುತ್ತಿರಬಹುದೇ? ಎಂದು ಸಂಶೋಧನೆಗಳು ನಡೆದವು.

ಹಿಂಸಾತ್ಮಕ ಅಪರಾಧಗಳನ್ನು ಮಾಡುವವರ ಮೆದುಳಿನಲ್ಲಿ ಕೆಲವೊಂದು ಅಪಾಯಕಾರಿ ಲೋಹಗಳಿರುವುದನ್ನು ಇಬ್ಬರು ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ. ಲೋಹಮಾಲಿನ್ಯವುಳ್ಳ ರಾಷ್ಟ್ರಗಳಲ್ಲಿ ಹೆಚ್ಚಿನ ಪ್ರಮಾಣದ ಹಿಂಸಾಚಾರಗಳು ನಡೆದಿರುವ ನಿದರ್ಶನಗಳಿವೆ. ಕ್ಯಾಲಿಪೋರ್ನಿಯಾದಲ್ಲಿ ಜೇಮ್ಸ್ ಆಲಿವರ್ ಹಬರ್ಟ್ ಎಂಬಾತ ೧೯೮೪ ರಲ್ಲಿ ೨೧ ಜನರ ಸಮೂಹವನ್ನು ಕೊಲೆಮಾಡಿದ. ಆತನ ಕೂದಲಿನ ರಾಸಾಯನಿಕ ರಚನೆಯನ್ನು ಪರೀಕ್ಷಿಸಿದಾಗ ಅದರಲ್ಲಿ ಹೆಚ್ಚಿನ ಪ್ರಮಾಣದ ‘ಕ್ಯಾಡ್ಮಿಯಂ’ ಇದ್ದದ್ದು ಕಂಡು ಬಂದಿತು. ಕ್ಯಾಡ್ಮಿಯಂ ಲೋಹವು ಮೂತ್ರ ಜನಕಾಂಗವನ್ನು ನಾಶಮಾಡುತ್ತದೆ. ಹಬರ್ಟಿಯ ಮೂತ್ರ ಜನಕಾಂಗವನ್ನು ಪರೀಕ್ಷಿಸಿದಾಗ ಅದು ಮೊದಲೇ ಸಾಕಷ್ಟು ನಾಶವಾಗಿದ್ದುದು ಕಂಡು ಬಂದಿತು. ಇಲನೋಯಿಸ್‌ನ ಪಿಫೀಫರ್ ಚಿಕಿತ್ಸಾ ಕೇಂದ್ರ ಅಧ್ಯಕ್ಷರಾದ ವಿಲಿಯಂ.ಜೆ. ವಾಲ್ಫ್ ಅವರು ಇಂಥಹ ಅನೇಕ ನಿದರ್ಶನಗಳನ್ನು ಕಂಡಿದ್ದಾರೆ. ಶರೀರವು ಕೆಲವೊಂದು ಅಪಾಯಕಾರಿ ಲೋಹಗಳನ್ನು ನಿಭಾಯಿಸಲು ಸಾಧ್ಯವಾಗದೇ ಇದ್ದಾಗ ಮನುಷ್ಯನಿಗೆ ಸರಿ, ತಪ್ಪುಗಳ ಪರಿಕಲ್ಪನೆ ಇಲ್ಲದಂತಾಗುತ್ತದೆ ಎಂದು ಅವರು ಹೇಳುತ್ತಾರೆ. ೧೯೮೯ ರಲ್ಲಿ ಪಿಫೀಫರ್‌ನಲ್ಲಿ ಅನೇಕ ಹಿಂಸಾಚಾರಿ ಮಕ್ಕಳನ್ನು ಗಮನಿಸಲಾಯಿತು. ಇವರೆಲ್ಲ ತಮ್ಮ ೨ ವರ್ಷದ ವಯಸ್ಸಿನಿಂದಲೇ ಬೆಕ್ಕುಗಳಿಗೆ ಅತೀವ ಹಿಂಸೆ ಕೊಡುತ್ತಿದ್ದುದನ್ನು ಗಮನಿಸಿ ಅವರಿಗೆ ಕೊಡುತ್ತಿದ್ದ ಆಹಾರವನ್ನು ನಿಯಂತ್ರಿಸಿ ಅವರ ವರ್ತನೆಗಳನ್ನು ಹಿಡಿತಗೊಳಿಸಲಾಯಿತು.

ಡಾರ್ಟ್‌ಮೌಲ್ ಕಾಲೇಜಿನ ಪ್ರಾಧ್ಯಾಪಕರಾದ ರೆವೀಗರ್ ಡಿ- ಮಾಸ್ಟರ್‍ಸ್ ಎಂಬುವವರು ಇದೇ ರೀತಿಯಾದ ಸಂಶೋಧನೆಗಳನ್ನು ಮಾಡಿ ದೃಡೀಕರಿಸಿದ್ದಾರೆ. ಸೀಸ ಮತ್ತು ಮ್ಯಾಂಗನೀಸ್‌ಗಳು ಸಹ ಮೆದುಳಿನ ರಾಸಾಯನಿಕ ರಚನೆಯಲ್ಲಿ ಬದಲಾವಣೆಗಳನ್ನು ಮಾಡಿ ಕಲಿಕೆಯ ಸಮಸ್ಯೆಗಳು, ವರಟು ವರ್ತನೆ, ಹಿಂಸೆ ಇತ್ಯಾದಿಗಳಿಗೆ ಕಾರಣವಾಗುವವು ಎಂದು ಕಂಡು ಹಿಡಿಯಲಾಯಿತು. ಕೆಲವೊಂದು ಗ್ರಾಮೀಣ ಬಾಲಕರಲ್ಲಿ ಬುದ್ಧಮಾಂದ್ಯತೆಗೂ ಇದು ಕಾರಣವಾಗಿದೆ, ಎಂದು ತಿಳಿದು ಬರುತ್ತದೆ. ಮ್ಯಾಂಗನೀಜ್‌ನಿಂದ ಮಾನಸಿಕ ಪ್ರತಿಕ್ರಿಯೆಗಳ ನಿಯಂತ್ರಣವು ಕ್ಷೀಣಿಸಿ ಹಿಂಸಾತ್ಮಕ ವರ್ತನೆ ತೋರುವುದೆಂದು ತಿಳಿದು ಬಂದಿದೆ. ಸೀಸ ಮತ್ತು ಮ್ಯಾಂಗನೀಸ್‌ಗಳು ಎಲ್ಲ ಕಡೆ ಹರಡುತ್ತಲಿವೆ. ನರವಿಜ್ಞಾನಿಗಳ ಪ್ರಕಾರ ಮ್ಯಾಂಗನೀಸ್ ವಸ್ತುವು ಮೆದುಳಿನಲ್ಲಿರುವ ‘ಸಿರೋಟೋನಿನ್’ ಎಂಬ ಪದಾರ್ಥದ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಇದೊಂದು ನರಪ್ರಸರಣ ದ್ರವ (Neurotransmitter) ಮೆದುಳಿನ ಸಂದೇಶಗಳು ಪ್ರಸಾರವಾಗಲು ಈ ದ್ರವವೇ ಕಾರಣವಾಗುತ್ತದೆ. ಮಾಸ್ಟರ್ಸ್ ಅವರ ಪ್ರಕಾರ ಎಲ್ಲ ಹಿಂಸಾತ್ಮಕ (ಒರಟುತನ, ಅಪತ್ಕಾರಿತನ) ಮತ್ತು ಇತರ ಮನೋವೈಜ್ಞಾನಿಕ ತೊಂದರೆಗಳಿಗೆ ಸಿರೋಟೋನಿನ್‌ನ ಕೊರತೆಯೇ ಕಾರಣವಾಗಿದೆ. ಸರಿಯಾದ ವಿಟಾಮಿನ್‌ಗಳ ಪೂರೈಕೆಗಳಿಂದ ಈ ವೈಪರೀತ್ಯವನ್ನು ಸರಿಪಡಿಸಿಬಹುದೆಂದು ಅವರು ಹೇಳುತ್ತಾರೆ.
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...