ಕಾಲನ ಕರೆ

ಅತಿ ಜರೂರು ಕರೆ
ಓಗೊಟ್ಟು ನಡೆಯಲೇ ಬೇಕು
ದೂಡಲಾಗದು ಮುಂದೆ
ಹೇಳಲಾಗದು ನೂರು ನೆಪ

ಅವ ದೂರ್ತನೆಂದರೂ ಬದುಕಿಗೆ
ಬಾರದಿರೆ ಸಾಕೆಂದರೂ
ದುತ್ತೆಂದು ಹೆಗಲೇರಿ
ತಳ್ಳಿ ಬಿಡುವ ಕೂಪಕ್ಕೆ

ಮುಗ್ಧ ಎಸಳುಗಳ ಕೂಡ
ಕೊಚ್ಚಿ ಹಾಕುವ ಕ್ರೂರ
ಕಣ್ಣೀರ ಧಾರೆಗೂ
ಆರ್ತನಾದಕ್ಕೂ ಕಿವುಡನವ

ಚಿಗುರೆಲೆಗೆ ಶರದೃತುವಿನಂತೆ
ಕರುಣೆಯಿಲ್ಲದೆ ಕರಕಲಾಗಿಸುವ
ಬಯಕೆ ಹೊತ್ತವ

ಎಷ್ಟೊಂದು ಕನಸುಗಳಿವೆ
ಮುಸ್ಸಂಜೆಯ ಮಾತುಗಳು ಬಾಕಿಯಿವೆ
ನಕ್ಷತ್ರಗಳ ಹಾದಿಯಲಿ ಬಯಕೆಗಳ ಮೂಟೆ
ಮಾರಲಿದೆ, ಕೊಳ್ಳಲಿದೆ
ಮೈಮನಗಳ ಸುಳಿಯಲಿ ತೇಲುವುದಿದೆ

ಅದಕ್ಕೆ
ಕೆಂಡ ಮಾರುವವನ ಸಹವಾಸ ಬೇಕಿಲ್ಲ ಎಂದರೂ
ಸಾರಿ ಬರುವ ಸರದಾರನ
ಅಪ್ಪುಗೆಯ ತೆಕ್ಕೆಗೆ ಬಿದ್ದರೆ – ಬಲಿ


Previous post ಹೇಳಲೇಬೇಕಾದ ಮಾತುಗಳು
Next post ಕವಿತೆ: ಶಾಂತಿನಾಥ ದೇಸಾಯಿ ಅವರಿಗೆ

ಸಣ್ಣ ಕತೆ

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ತನ್ನೊಳಗಣ ಕಿಚ್ಚು

    ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ಬ್ರಿಟನ್ ದಂಪತಿಗಳ ಪ್ರೇಮ ದಾಖಲೆ

    ಫ್ರಾಂಕ್ ಆಗ ಇನ್ನು ಹದಿನಾಲ್ಕು ವರ್ಷದ ಹುಡುಗ ತೆಳ್ಳಗೆ ಬೆಳ್ಳಗೆ ಇದ್ದು, ಕರಿಯ ಬಣ್ಣದ ದಟ್ಟ ಕೂದಲಿನ ಬ್ರಿಟಿಷ್ ಬಾಲಕ. ಹೈಸ್ಕೂಲಿನಲ್ಲಿ ಓದುತ್ತಿದ್ದ ಫ್ರಾಂಕ್‌ಗೆ ಕಾಲ್ಚೆಂಡು ಆಟ… Read more…

cheap jordans|wholesale air max|wholesale jordans|wholesale jewelry|wholesale jerseys