ಕಾಲನ ಕರೆ

ಅತಿ ಜರೂರು ಕರೆ
ಓಗೊಟ್ಟು ನಡೆಯಲೇ ಬೇಕು
ದೂಡಲಾಗದು ಮುಂದೆ
ಹೇಳಲಾಗದು ನೂರು ನೆಪ

ಅವ ದೂರ್ತನೆಂದರೂ ಬದುಕಿಗೆ
ಬಾರದಿರೆ ಸಾಕೆಂದರೂ
ದುತ್ತೆಂದು ಹೆಗಲೇರಿ
ತಳ್ಳಿ ಬಿಡುವ ಕೂಪಕ್ಕೆ

ಮುಗ್ಧ ಎಸಳುಗಳ ಕೂಡ
ಕೊಚ್ಚಿ ಹಾಕುವ ಕ್ರೂರ
ಕಣ್ಣೀರ ಧಾರೆಗೂ
ಆರ್ತನಾದಕ್ಕೂ ಕಿವುಡನವ

ಚಿಗುರೆಲೆಗೆ ಶರದೃತುವಿನಂತೆ
ಕರುಣೆಯಿಲ್ಲದೆ ಕರಕಲಾಗಿಸುವ
ಬಯಕೆ ಹೊತ್ತವ

ಎಷ್ಟೊಂದು ಕನಸುಗಳಿವೆ
ಮುಸ್ಸಂಜೆಯ ಮಾತುಗಳು ಬಾಕಿಯಿವೆ
ನಕ್ಷತ್ರಗಳ ಹಾದಿಯಲಿ ಬಯಕೆಗಳ ಮೂಟೆ
ಮಾರಲಿದೆ, ಕೊಳ್ಳಲಿದೆ
ಮೈಮನಗಳ ಸುಳಿಯಲಿ ತೇಲುವುದಿದೆ

ಅದಕ್ಕೆ
ಕೆಂಡ ಮಾರುವವನ ಸಹವಾಸ ಬೇಕಿಲ್ಲ ಎಂದರೂ
ಸಾರಿ ಬರುವ ಸರದಾರನ
ಅಪ್ಪುಗೆಯ ತೆಕ್ಕೆಗೆ ಬಿದ್ದರೆ – ಬಲಿ


Previous post ಹೇಳಲೇಬೇಕಾದ ಮಾತುಗಳು
Next post ಕವಿತೆ: ಶಾಂತಿನಾಥ ದೇಸಾಯಿ ಅವರಿಗೆ

ಸಣ್ಣ ಕತೆ

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ಇನ್ನೊಬ್ಬ

    ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…