ಕವಿತೆ: ಶಾಂತಿನಾಥ ದೇಸಾಯಿ ಅವರಿಗೆ

ನೆನಪಿಸಿಕೊಳ್ಳಿ ರೆಡಿಂಗ್‌ನಿಂದ ಬ್ರೌಟನ್‌ವರೆಗಿನ
ನಮ್ಮ ಯಾತ್ರೆಯನ್ನು. ಇಂಗ್ಲೆಂಡ್ ಮುಗಿದು
ವೇಲ್ಸ್ ಮೊದಲಾಗುತ್ತಲೆ ಬದಲಾದ ಹವೆಯನ್ನು.

ಬ್ರೌಟನ್ ಪಬ್ಬಿನಲ್ಲಿ ಸಂಜೆ ಕೈಗೊಂಡ
ಮದ್ಯಪಾನ–ತಟಕ್ಕನೆ ಆರಂಭವಾದ
ಬ್ಯಾಂಡಿಗೆ ತಾಳ ಹಾಕುತ್ತ ನೀವು ಕಳೆದ

ಪ್ರಣಯಗಳ ಬಗ್ಗೆ ಮಾತಾಡುತ್ತ ಕರಗಿದ್ದನ್ನು.
ಆಚೆಗೆ ಕುಳಿತಿದ್ದಾಕೆ ಇನ್ನೊಂದು ಬದಿಯಿಂದ
ಹೇಗೆ ಕಾಣಿಸುತ್ತಿದ್ದಾಳೆಂದು ನೋಡಲು

ಬೇಕೆಂದೆ ಮತ್ತೆ ಮತ್ತೆ ನಾನು
ಬೀಯರ್ ಕೊಳ್ಳಲು ಎದ್ದು ಹೋದುದನ್ನು.
ನೆನಪಿಸಿಕೊಳ್ಳಿ ಮತ್ತೆ ನಮ್ಮ ಚೆಸ್ಟರ್ ಸಂಚಾರ-

ಡೀ ನದಿಯ ಮೇಲೆ ವಿಹಾರ-ಬೋಟಿನ ತುಂಬ ಜನ
ಹೆಂಗಸರು ಗಂಡಸರು ಅನೇಕ ಮೂಡುಗಳಲ್ಲಿ
ಬೇಸಿಗೆಯ ಕನಿಷ್ಟ ಉಡುಪುಗಳಲ್ಲಿ

ಅಂಥ ಯಾವಳೋ ಹೆಂಗಸಿನ ದೃಶ್ಯಗಳನ್ನು
ಕ್ಯಾಮರಾದಲ್ಲಿ ನೀವು ಹಿಡಿಯಲು ಯತ್ನಿಸಿ
ಸೋತುದನ್ನು-ಅದರೆ ಕಣ್ಣಿನಲ್ಲಿ ಖಂಡಿತ ಅಲ್ಲ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಾಲನ ಕರೆ
Next post ವಕ್ರದೃಷ್ಟಿ

ಸಣ್ಣ ಕತೆ

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…