ಸೂರ್ಯನೂ ಮಾಗಬಹುದಲ್ಲಾ?

ಬೇರಿಳಿಸಲು
ಕುಡಿಯೊಡೆಯಲು
ಹೂ ಅರಳಿಸಲು
ಸೂರ್ಯನೇನು ಒಂದು ಕಾಳೇ?

ಜೀವ ತುಂಬಲು
ಚೈತನ್ಯ ನೀಡಲು
ಬಿಡದಂತೆ ಹಿಡಿದಿಡಲು
ಆಗಸವೇನು ಮಣ್ಣೇ ?

ಅನಾದಿಯಿಂದ ಆಗಸಕ್ಕೆ ಅದೇ ದೂರು
ಸೂರ್ಯನ ಆತ್ಮಸಾಂಗತ್ಯವಿಲ್ಲದ ಬೇಜಾರು
ಸೂರ್ಯನಿಗೋ ಅವನದೇ ಹಾದಿ
ನಡೆದದ್ದೆಲ್ಲ ಬೀದಿ!

ಹೊತ್ತು ಹುಟ್ಟಿದರೆ ಉಷೆಯಾಗುವ
ಹೊತ್ತೇರಿದಂತೆ ರವಿಯಾಗುವ
ಯಾವುದೂ ಕಟ್ಟುಪಾಡಿಲ್ಲದ
ಯಾವುದೂ ಅಂಕೆಯಿಲ್ಲದ
ಸೂರ್ಯನಿಗೆ ಅವನದ್ದೇ ಆಟ!

ಬರಿದೇ ತುಂಟಾಟದ ಚಪಲ ಸೂರ್ಯನಿಗೆ
ಮನದಾಳಗಳಿಗಿಳಿಯುವ ಹುಚ್ಚು ಆಗಸಕ್ಕೆ!
ಆಗಸಕ್ಕೆ ಸೂರ್ಯನೇ ಎಲ್ಲ
ಸೂರ್ಯನಿಗೆ ಹಾಗೇನೂ ಇಲ್ಲ!

ಆದರೂ ಅವನ ಆತ್ಮ ಸಂಗಾತದ
ಹೊತ್ತಿಗಾಗಿ ಕಾಯುವ ಕಾಯಕ
ಆಗಸಕ್ಕೆ ತಪ್ಪಿಲ್ಲ
ಆಗಸದ್ದೂ ತಪ್ಪಿಲ್ಲ!

ಇಂದಲ್ಲ ನಾಳೆ ಉರಿವ
ಸೂರ್ಯನೂ ಮಾಗಬಹುದಲ್ಲ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಲ್ಲು ಮಣ್ಣು
Next post ಬಳ್ಳಾರಿ ರೆಡ್ಡಿ ಹೊಡೆತ ಕೋಲ್ಟು ಉಗಿತ ಕೆರಳಿದ ಗೋಡ್ರ ಕುಣಿತ

ಸಣ್ಣ ಕತೆ

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

  • ಹೃದಯ ವೀಣೆ ಮಿಡಿಯೆ….

    ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

cheap jordans|wholesale air max|wholesale jordans|wholesale jewelry|wholesale jerseys