Home / ಲೇಖನ / ಇತರೆ / ಅಮವಾಸ್ಯೆಯ ಕಥೆ

ಅಮವಾಸ್ಯೆಯ ಕಥೆ

ಅಮವಾಸ್ಯೆ ಎಂದರೆ… ಕತ್ತಲು ಕಗ್ಗತ್ತಲು, ಭಯಾನಕ, ಕೇಡು, ಭಯ ಎಂದೂ… ಇದು ಸರಿಯಲ್ಲ. ಎಲ್ಲ ಅಮವಾಸ್ಯೆಗಳ ಲೆಕ್ಕ ಒಂದಾದರೆ… ಭೀಮನ ಅಮವಾಸ್ಯೆಯ ಕತೆ ಬೇರೇನೇ ಇದೆ.

ಭೀಮ- ಮಹಾಭಾರತದಲ್ಲಿ ಬರುವ ಶೂರ ಧೀರ ವೀರ ಗದೆ ಹಿಡಿದ ಶಕ್ತಿಮಾನ್, ದ್ರೌಪದಿ ಒಮ್ಮೆ ನನಗೆ ಬಲವಾದ ಗಂಡ ದೊರೆಯುವಂತಾಗಲಿ ಎಂದು ವ್ರತ ಆಚರಿಸಿದಳು. ಅದರಂತೆ ರಾಹುಕೇತು ಪ್ರತ್ಯಕ್ಷರಾಗಿ “ತಥಾಸ್ತು” ಎಂದರು. ಅದರಂತೆ ಬಲಭೀಮನೇ ಗಂಡನಾಗಿ ದ್ರೌಪದಿಗೆ ಸಿಕ್ಕಿದನೆಂಬ ಕಥೆಯುಂಟು.

ದ್ರೌಪದಿಗೆ ಐವರು ಗಂಡಂದಿರಿದ್ದರೂ ಭೀಮನ ಮೇಲೆ ಅತೀವಾದ ಜೀವವಿತ್ತು ಎಂಬುದು ಮಹಾಭಾರತದ ಕಥೆಯಲ್ಲಿ ವ್ಯಕ್ತವಾಗಿದೆ. ಹೀಗಾಗಿ ದ್ರೌಪದಿ ಅಮವಾಸ್ಯೆಯ ದಿನ ಭೀಮನನ್ನು ಪೂಜಿಸಿ ನೆನೆದು ತನ್ನ ಕಷ್ಟ ಅವಮಾನವನ್ನು ಹೇಳಿಕೊಳ್ಳುತ್ತಿದ್ದಳು! ಹೀಗಾಗಿ ಇದು “ಭೀಮನ ಅಮವಾಸ್ಯೆಯಾಯಿತು” ಎಂದು ಪುರಾಣಗಳಲ್ಲಿ ಉಲ್ಲೇಖವಿದೆ.

ಈ ಭೀಮನ ಅಮಾವಾಸ್ಯೆ ಬರುವುದು ಪ್ರತಿವರ್ಷ ಆಷಾಢದ ಅಂತಿಮದ ಕಾಲಘಟ್ಟದ ದಿನದಂದು. ಅಮವಾಸ್ಯೆ ಆಷಾಢವನ್ನು ಕಳಿಸಿದ ಶುಭ ದಿನವನ್ನು ಅದು ನೆನಪಿಸುವುದು.

ಹಿಂದೆ-ಬಲು ಹಿಂದೆ ನಮ್ಮ ಜನಪದರು “ಗಂಡನ ಪಾದ ಪೂಜೆಯ ಮಾಡಬೇಕಮ್ಮಾ… ಗಂಡನ ಮನಸು ಒಳಿತಾಗಿದ್ದರೆ ನೀನಾಗುವೆ ಮುತ್ತೈದೆಯಮ್ಮ ನಿನ್ನಯ ಹರಕೆ ಹಾರೈಕೆ ಆತನಿಗೆ ಭೀಮಬಲವಮ್ಮಽ… ನೀ ತಿಳಿ ತಂಗಿವ್ವ… ಗಂಡನ ಗೆದ್ದವಳು ಕೈಲಾಸ ಗೆದ್ದವಳು ಮೂಜಗವ ಗೆದ್ದವಳು… ಗಂಡನ ತೇಜಸ್ಸು ನಿನ್ನಯ ಶ್ರೇಯಸ್ಸು ಪೂಜೆಯ ಫಲವಮ್ಮ…” ಎಂದು ಹಾಡುತ್ತಿದ್ದುದ್ದನ್ನು ಗಂಡನ ಪೂಜಿಸಿ ಆಶೀರ್ವಾದ ಪಡೆಯುತ್ತಿದ್ದುದ್ದನ್ನು ನಾನು ಸುಮಾರು ಐದಾರು ದಶಕಗಳಿಂದ ಕಂಡುಂಡವನಾಗಿದ್ದೇನೆ.

ಇಲ್ಲಿ ನಂಬಿಕೆಯೇ ವ್ರತ-ಪೂಜೆ-ಆಚರಣೆ-ಸಂಪ್ರದಾಯ-ಒಳಿತು-ಬಾಳ್ವೆ- ದಾಂಪತ್ಯ-ಪ್ರೀತಿ-ಪ್ರೇಮ-ನೆಮ್ಮದಿ-ತೃಪ್ತಿ-ಆನಂದ-ಬಿಡುಗಡೆ ಎಂದು ನಂಬಿ ನಚ್ಚಿ ನಡೆಸುವ ಎಷ್ಟೋ ಹಳ್ಳಿ ಪಟ್ಟಣ ನಗರ ದೇಶಗಳಿವೆ.

ಆಷಾಢದಲ್ಲಿ ಹೆಂಡತಿ ಕಡ್ಡಾಯವಾಗಿ ನಾಲ್ಕೈದು ವಾರ ತವರು ಮನೆ ಸೇರಬೇಕೆಂಬ ನಿಯಮವಿದೆ.

“ಆಷಾಢವೆಂದು ಕಳೆವುದು ಅಮ್ಮಯ್ಯ ಗಂಜಿಯ ಕುಡಿದರೂ ಗಂಡನೂ ಇರಬೇಕು. ಗಂಡನ ಆಗಲಿಕೆ ಬೇಸರಿಕೆ ತಂದಿರಲು ಆಷಾಢದ ಗುಮ್ಮವೇಕೆ ಹಡೆದವ್ವಽಽ….” ಎಂದು ಗರತಿಯೊಬ್ಬಳು ಹಾಡಿ ಕಣ್ಣೀರ ಕೋಡಿ ಹರಸುವುದಿದೆ.

“ಆಷಾಢ ಕಳೆದು ದಿನವಾಗಿಲ್ಲ ಗಂಡನಾಗಲೆ ಅತ್ತೆಯ ಹೊಸ್ತಿಲಲ್ಲಿ… ಅಳಿಯ ಬಂದಿಹನು ಆಷಾಢ ಕಳೆದಿಹದ ಪೂಜೆಗೆ ಬನ್ನಿರಿ ನೀವೆಲ್ಲ… ಆರತಿ ಎತ್ತಿರಿ ದಿನವೆಲ್ಲ….” ಎಂದು ಅತ್ತೆಯು ಸಡಗರದಿ ಹಾಡುವ ಪರಿಯು ಕತೆಯಾಗಿ ಹರಿಯುವುದು.

ಎಲ್ಲ ಅಮವಾಸ್ಯೆಗಳಂತಲ್ಲ ಇದು ಭೀಮನ ಅಮವಾಸ್ಯೆ ಒಳಿತಿನ ಲೆಕ್ಕ. ಮಂಗಳಪ್ರದಾಯಕವೆಂದೇ ಇದು ಸಿದ್ಧಿ ಪ್ರಸಿದ್ಧ ವರಸಿದ್ಧಿ ಅಮವಾಸ್ಯೆಯಾಗಿದೆ.
*****

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...