ಅಮವಾಸ್ಯೆಯ ಕಥೆ

ಅಮವಾಸ್ಯೆಯ ಕಥೆ

ಅಮವಾಸ್ಯೆ ಎಂದರೆ… ಕತ್ತಲು ಕಗ್ಗತ್ತಲು, ಭಯಾನಕ, ಕೇಡು, ಭಯ ಎಂದೂ… ಇದು ಸರಿಯಲ್ಲ. ಎಲ್ಲ ಅಮವಾಸ್ಯೆಗಳ ಲೆಕ್ಕ ಒಂದಾದರೆ… ಭೀಮನ ಅಮವಾಸ್ಯೆಯ ಕತೆ ಬೇರೇನೇ ಇದೆ.

ಭೀಮ- ಮಹಾಭಾರತದಲ್ಲಿ ಬರುವ ಶೂರ ಧೀರ ವೀರ ಗದೆ ಹಿಡಿದ ಶಕ್ತಿಮಾನ್, ದ್ರೌಪದಿ ಒಮ್ಮೆ ನನಗೆ ಬಲವಾದ ಗಂಡ ದೊರೆಯುವಂತಾಗಲಿ ಎಂದು ವ್ರತ ಆಚರಿಸಿದಳು. ಅದರಂತೆ ರಾಹುಕೇತು ಪ್ರತ್ಯಕ್ಷರಾಗಿ “ತಥಾಸ್ತು” ಎಂದರು. ಅದರಂತೆ ಬಲಭೀಮನೇ ಗಂಡನಾಗಿ ದ್ರೌಪದಿಗೆ ಸಿಕ್ಕಿದನೆಂಬ ಕಥೆಯುಂಟು.

ದ್ರೌಪದಿಗೆ ಐವರು ಗಂಡಂದಿರಿದ್ದರೂ ಭೀಮನ ಮೇಲೆ ಅತೀವಾದ ಜೀವವಿತ್ತು ಎಂಬುದು ಮಹಾಭಾರತದ ಕಥೆಯಲ್ಲಿ ವ್ಯಕ್ತವಾಗಿದೆ. ಹೀಗಾಗಿ ದ್ರೌಪದಿ ಅಮವಾಸ್ಯೆಯ ದಿನ ಭೀಮನನ್ನು ಪೂಜಿಸಿ ನೆನೆದು ತನ್ನ ಕಷ್ಟ ಅವಮಾನವನ್ನು ಹೇಳಿಕೊಳ್ಳುತ್ತಿದ್ದಳು! ಹೀಗಾಗಿ ಇದು “ಭೀಮನ ಅಮವಾಸ್ಯೆಯಾಯಿತು” ಎಂದು ಪುರಾಣಗಳಲ್ಲಿ ಉಲ್ಲೇಖವಿದೆ.

ಈ ಭೀಮನ ಅಮಾವಾಸ್ಯೆ ಬರುವುದು ಪ್ರತಿವರ್ಷ ಆಷಾಢದ ಅಂತಿಮದ ಕಾಲಘಟ್ಟದ ದಿನದಂದು. ಅಮವಾಸ್ಯೆ ಆಷಾಢವನ್ನು ಕಳಿಸಿದ ಶುಭ ದಿನವನ್ನು ಅದು ನೆನಪಿಸುವುದು.

ಹಿಂದೆ-ಬಲು ಹಿಂದೆ ನಮ್ಮ ಜನಪದರು “ಗಂಡನ ಪಾದ ಪೂಜೆಯ ಮಾಡಬೇಕಮ್ಮಾ… ಗಂಡನ ಮನಸು ಒಳಿತಾಗಿದ್ದರೆ ನೀನಾಗುವೆ ಮುತ್ತೈದೆಯಮ್ಮ ನಿನ್ನಯ ಹರಕೆ ಹಾರೈಕೆ ಆತನಿಗೆ ಭೀಮಬಲವಮ್ಮಽ… ನೀ ತಿಳಿ ತಂಗಿವ್ವ… ಗಂಡನ ಗೆದ್ದವಳು ಕೈಲಾಸ ಗೆದ್ದವಳು ಮೂಜಗವ ಗೆದ್ದವಳು… ಗಂಡನ ತೇಜಸ್ಸು ನಿನ್ನಯ ಶ್ರೇಯಸ್ಸು ಪೂಜೆಯ ಫಲವಮ್ಮ…” ಎಂದು ಹಾಡುತ್ತಿದ್ದುದ್ದನ್ನು ಗಂಡನ ಪೂಜಿಸಿ ಆಶೀರ್ವಾದ ಪಡೆಯುತ್ತಿದ್ದುದ್ದನ್ನು ನಾನು ಸುಮಾರು ಐದಾರು ದಶಕಗಳಿಂದ ಕಂಡುಂಡವನಾಗಿದ್ದೇನೆ.

ಇಲ್ಲಿ ನಂಬಿಕೆಯೇ ವ್ರತ-ಪೂಜೆ-ಆಚರಣೆ-ಸಂಪ್ರದಾಯ-ಒಳಿತು-ಬಾಳ್ವೆ- ದಾಂಪತ್ಯ-ಪ್ರೀತಿ-ಪ್ರೇಮ-ನೆಮ್ಮದಿ-ತೃಪ್ತಿ-ಆನಂದ-ಬಿಡುಗಡೆ ಎಂದು ನಂಬಿ ನಚ್ಚಿ ನಡೆಸುವ ಎಷ್ಟೋ ಹಳ್ಳಿ ಪಟ್ಟಣ ನಗರ ದೇಶಗಳಿವೆ.

ಆಷಾಢದಲ್ಲಿ ಹೆಂಡತಿ ಕಡ್ಡಾಯವಾಗಿ ನಾಲ್ಕೈದು ವಾರ ತವರು ಮನೆ ಸೇರಬೇಕೆಂಬ ನಿಯಮವಿದೆ.

“ಆಷಾಢವೆಂದು ಕಳೆವುದು ಅಮ್ಮಯ್ಯ ಗಂಜಿಯ ಕುಡಿದರೂ ಗಂಡನೂ ಇರಬೇಕು. ಗಂಡನ ಆಗಲಿಕೆ ಬೇಸರಿಕೆ ತಂದಿರಲು ಆಷಾಢದ ಗುಮ್ಮವೇಕೆ ಹಡೆದವ್ವಽಽ….” ಎಂದು ಗರತಿಯೊಬ್ಬಳು ಹಾಡಿ ಕಣ್ಣೀರ ಕೋಡಿ ಹರಸುವುದಿದೆ.

“ಆಷಾಢ ಕಳೆದು ದಿನವಾಗಿಲ್ಲ ಗಂಡನಾಗಲೆ ಅತ್ತೆಯ ಹೊಸ್ತಿಲಲ್ಲಿ… ಅಳಿಯ ಬಂದಿಹನು ಆಷಾಢ ಕಳೆದಿಹದ ಪೂಜೆಗೆ ಬನ್ನಿರಿ ನೀವೆಲ್ಲ… ಆರತಿ ಎತ್ತಿರಿ ದಿನವೆಲ್ಲ….” ಎಂದು ಅತ್ತೆಯು ಸಡಗರದಿ ಹಾಡುವ ಪರಿಯು ಕತೆಯಾಗಿ ಹರಿಯುವುದು.

ಎಲ್ಲ ಅಮವಾಸ್ಯೆಗಳಂತಲ್ಲ ಇದು ಭೀಮನ ಅಮವಾಸ್ಯೆ ಒಳಿತಿನ ಲೆಕ್ಕ. ಮಂಗಳಪ್ರದಾಯಕವೆಂದೇ ಇದು ಸಿದ್ಧಿ ಪ್ರಸಿದ್ಧ ವರಸಿದ್ಧಿ ಅಮವಾಸ್ಯೆಯಾಗಿದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ದ್ರೌಪದಿಯ ಹಾಡು
Next post ಸ್ವರವೊಂದಾಗಿ

ಸಣ್ಣ ಕತೆ

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…

  • ಬ್ರಿಟನ್ ದಂಪತಿಗಳ ಪ್ರೇಮ ದಾಖಲೆ

    ಫ್ರಾಂಕ್ ಆಗ ಇನ್ನು ಹದಿನಾಲ್ಕು ವರ್ಷದ ಹುಡುಗ ತೆಳ್ಳಗೆ ಬೆಳ್ಳಗೆ ಇದ್ದು, ಕರಿಯ ಬಣ್ಣದ ದಟ್ಟ ಕೂದಲಿನ ಬ್ರಿಟಿಷ್ ಬಾಲಕ. ಹೈಸ್ಕೂಲಿನಲ್ಲಿ ಓದುತ್ತಿದ್ದ ಫ್ರಾಂಕ್‌ಗೆ ಕಾಲ್ಚೆಂಡು ಆಟ… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ಮಿಂಚಿನ ದೀಪ

    ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…