ಸ್ವರವೊಂದಾಗಿ

ಸ್ವರವೊಂದಾಗಿ ಇರುವುದೆ ಇಲ್ಲ
ತೆರೆಯೊಂದಾಗಿ ಬರುವುದೆ ಇಲ್ಲ
ಸ್ವರಕೆ ಪ್ರತಿಸ್ವರ ಇದ್ದೇ ಇರುತದೆ
ತೆರೆಯ ಹಿಂದೆ ತೆರೆ ಬಂದೇ ಬರುತ್ತದೆ

ಇರುವೆಯೊಂದಾಗಿ ಇರುವುದೆ ಇಲ್ಲ
ಜೇನ್ನೊಣವೊಂದಾಗಿ ಹಾರುವುದಿಲ್ಲ
ಒಂದೊಂದಿರುವೆಗು ಸಾಲಿರುತದೆ
ಜೇನ್ನೊಣಕೊಂದು ಗೂಡಿರುತದೆ

ಮಳೆಗೊಂದೇ ಹನಿ ಎಂದೂ ಇಲ್ಲ
ಬೆಳಗೊಂದೇ ಸಹಿ ಸಾಧ್ಯವು ಇಲ್ಲ
ಮಳೆಯೆಂದರೆ ಅದು ಎಷ್ಟೋ ಬಿಂದು
ಬೆಳೆಯೆಂದರೆ ಸಸ್ಯ ಸಿಂಧು

ನಕ್ಷತ್ರವೊಂದಾಗಿ ಮೂಡುವುದಿಲ್ಲ
ಗ್ರಹವೊಂದಾಗಿ ತಿರುಗುವುದಿಲ್ಲ
ನಕ್ಷತ್ರಕೆ ನಕ್ಷತ್ರದ ಸಹವಾಸ
ಒಂದು ಗ್ರಹಗತಿಗಿನ್ನೊಂದರ ಧ್ಯಾಸ

ಪದವೊಂದಾಗಿ ಅರ್‍ಥವೆ ಇಲ್ಲ
ವಾಕ್ಯವೊಂದಾಗಿ ಮಾತೂ ಇಲ್ಲ
ಪದವೊಂದಕೆ ಇನ್ನೊಂದೇ ಪದ ಅರ್‍ಥ
ವಾಕ್ಯಕೆ ವಾಕ್ಯ ಮಾತಿನ ಲಾಸ್ಯ

ವಿಚಾರವೊಂದಾಗಿ ಹುಟ್ಟುವುದಿಲ್ಲ
ಅರಿವೊಂದಾಗಿ ಬೆಳೆಯುವುದಿಲ್ಲ
ವಿಚಾರವೆಂದರೆ ಲಹರಿಯ ರೂಪ
ಅರಿವೆಂದರೆ ಬೆಳಕು ಸ್ವರೂಪ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಮವಾಸ್ಯೆಯ ಕಥೆ
Next post ಆ ರಾತ್ರಿಯಲಿ

ಸಣ್ಣ ಕತೆ

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

cheap jordans|wholesale air max|wholesale jordans|wholesale jewelry|wholesale jerseys