Home / ಲೇಖನ / ಇತರೆ / ಸತ್ತು ಬದುಕಿರುವರು

ಸತ್ತು ಬದುಕಿರುವರು

ಇಲ್ಲಿ ಈ ನೆಲದಲ್ಲಿ ಕೆಲವರು ಬದುಕಿದ್ದಾಗಲೇ ಸತ್ತಂತಿರುವರು. ಇನ್ನು ಕೆಲವರು ಸತ್ತರೂ ಇನ್ನೂ ಬದುಕಿರುವರು.

ನಾನು ೧೯೯೧ರಿಂದಲೂ ತಿರುಪತಿ ತಿಮ್ಮಪ್ಪನ ಬಳಿ ಹೋಗಿ ಬರುತ್ತಲೇ ಇದ್ದೇನೆ. ಪ್ರತಿ ಬಾರಿ. ಅಲ್ಲಿ ನನಗೆ ತೀರಾ ಆಕರ್‍ಷಣೆಯೆಂದರೆ…. ತಿರುಮಲ ಮಂದಿರದ ಪ್ರವೇಶ ಬಾಗಿಲಲ್ಲೇ ಶ್ರೀಕೃಷ್ಣ ದೇವರಾಯ ಭಯಭಕ್ತಿಲಿ ಕರ ಮುಗಿದು ಶೋಭಾಯನಮಾನವಾಗಿ ನಿಂತು ನಮ್ಮನ್ನೆಲ್ಲ ಸ್ವಾಗತಿಸುತ್ತಿರುವ ಪರಿಗೆ ತನ್ನ ಎಡ ಮತ್ತು ಬಲಭಾಗದಲ್ಲಿ ಧರ್‍ಮಪತ್ನಿಯರೂ ಕೂಡಾ ಕರ ಮುಗಿದು ಪ್ರಸನ್ನವದನರಾಗಿ ನಿಂತಿರುವ ಭಂಗಿಗೆ ಬೆರಗಾದೆ.

ವಿಜಯನಗರ ನಿರ್‍ಮಾಣ ತೇಜ ಕನ್ನಡ ರಾಜ್ಯ ರಮಾರಮಣನೆಂದೇ ಖ್ಯಾತಿ ಪ್ರಖ್ಯಾತಿ ಪಡೆದಿದ್ದ ಶ್ರೀಕೃಷ್ಣದೇವರಾಯನ ಕಾಲದಲ್ಲಿ ಮುತ್ತುರತ್ನ ವಜ್ರವೈಡೂರ್‍ಯಗಳನ್ನು ರಾಶಿರಾಶಿ ಹಾದಿಬೀದಿಯಲ್ಲಿ ಬಳ್ಳದಿಂದ ಅಳೆದು ಮಾರಿದ ಕಾಲದಲ್ಲಿದ್ದನೆಂಬುದಕ್ಕಿಂತ ಈಗ ಹೇಗೆ ಅಲ್ಲಿ ನಿಂತಿದ್ದಾನೆ. ಅಲ್ಲಿಯು ಸಲ್ಲಿದವ ಇಲ್ಲಿಯೂ ಹೇಗೆ ಸಲ್ಲುತ್ತಿರುವವನೆಂಬುದಿಲ್ಲಿ ಬಹಳ ಮುಖ್ಯವಾಗುವುದು!

ಶ್ರೀಕೃಷ್ಣದೇವರಾಯನಿಲ್ಲಿ ಜೀವಂತವಿದ್ದಾನೆ ಅನಿಸುವುದು, ಬಾಳಿ ಬದುಕಿ ಸತ್ತಿಲ್ಲ. ಸತ್ತು ಇಲ್ಲಿ ಬದುಕಿದ್ದಾನೆ ಎಂದು ನಮ್ಮ ಕಣ್ಣಿದುರಿಗೆ ಮೆರವಣಿಗೆ ಹೊರಡುವನು. ಇದಕ್ಕಿಂತ ಭಾಗ್ಯ ಇನ್ನಿಲ್ಲವೆನಿಸುವುದು.

ಶ್ರೀಕೃಷ್ಣದೇವರಾಯ ತಿರುಪತಿ ತಿಮ್ಮಪ್ಪನ ಪರಮ ಆರಾಧಕನಾಗಿದ್ದನಲ್ಲದೆ, ಇಬ್ಬರು ಸತಿಯರೊಂದಿಗೆ ಪ್ರತಿ ತಿಂಗಳಿಗೊಮ್ಮೆ ಬಂದು ಅಮೂಲ್ಯವಾದ ಪಚ್ಚೆ ಮುತ್ತು ರತ್ನ, ವಜ್ರ, ವೈಡೂರ್‍ಯ, ಚಿನ್ನವನ್ನರ್‍ಪಿಸಿ ತೆರಳಿದ್ದಕ್ಕೆ ಇಲ್ಲಿ ದಾಖಲೆಗಳಿವೆ! ಬರೀ ಚಿನ್ನದಿಂದ ನಿರ್‍ಮಿಸಿಕೊಟ್ಟ ಆನಂದ ನಿಲಯಂ ಕೂಡಾ ಇವರ ಕೊಡುಗೆಯಾಗಿದೆ.

– ಹೀಗೆ ಶ್ರೀಕೃಷ್ಣದೇವರಾಯ ಹಾಗೂ ಇಬ್ಬರು ಧರ್‍ಮಪತ್ನಿಯರೂ ತಿರುಪತಿ ತಿರುಮಲ ದೇವಸ್ಥಾನದಲ್ಲಿ ಇಂದಿಗೂ ಜೀವಂತಿರುವರು. ಎಲ್ಲರ ಮನೆ ಮನಗಳಲ್ಲಿ ನೆಲೆ ನಿಂತಿರುವರು, ಜೀವನವೆಂದರೆ… ಇದಕ್ಕಿಂತ ಹೆಚ್ಚಿನದು ಇರುವುದಿಲ್ಲವಲ್ಲವೇ??
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...