Home / ಲೇಖನ / ಇತರೆ / ಸತ್ತು ಬದುಕಿರುವರು

ಸತ್ತು ಬದುಕಿರುವರು

ಇಲ್ಲಿ ಈ ನೆಲದಲ್ಲಿ ಕೆಲವರು ಬದುಕಿದ್ದಾಗಲೇ ಸತ್ತಂತಿರುವರು. ಇನ್ನು ಕೆಲವರು ಸತ್ತರೂ ಇನ್ನೂ ಬದುಕಿರುವರು.

ನಾನು ೧೯೯೧ರಿಂದಲೂ ತಿರುಪತಿ ತಿಮ್ಮಪ್ಪನ ಬಳಿ ಹೋಗಿ ಬರುತ್ತಲೇ ಇದ್ದೇನೆ. ಪ್ರತಿ ಬಾರಿ. ಅಲ್ಲಿ ನನಗೆ ತೀರಾ ಆಕರ್‍ಷಣೆಯೆಂದರೆ…. ತಿರುಮಲ ಮಂದಿರದ ಪ್ರವೇಶ ಬಾಗಿಲಲ್ಲೇ ಶ್ರೀಕೃಷ್ಣ ದೇವರಾಯ ಭಯಭಕ್ತಿಲಿ ಕರ ಮುಗಿದು ಶೋಭಾಯನಮಾನವಾಗಿ ನಿಂತು ನಮ್ಮನ್ನೆಲ್ಲ ಸ್ವಾಗತಿಸುತ್ತಿರುವ ಪರಿಗೆ ತನ್ನ ಎಡ ಮತ್ತು ಬಲಭಾಗದಲ್ಲಿ ಧರ್‍ಮಪತ್ನಿಯರೂ ಕೂಡಾ ಕರ ಮುಗಿದು ಪ್ರಸನ್ನವದನರಾಗಿ ನಿಂತಿರುವ ಭಂಗಿಗೆ ಬೆರಗಾದೆ.

ವಿಜಯನಗರ ನಿರ್‍ಮಾಣ ತೇಜ ಕನ್ನಡ ರಾಜ್ಯ ರಮಾರಮಣನೆಂದೇ ಖ್ಯಾತಿ ಪ್ರಖ್ಯಾತಿ ಪಡೆದಿದ್ದ ಶ್ರೀಕೃಷ್ಣದೇವರಾಯನ ಕಾಲದಲ್ಲಿ ಮುತ್ತುರತ್ನ ವಜ್ರವೈಡೂರ್‍ಯಗಳನ್ನು ರಾಶಿರಾಶಿ ಹಾದಿಬೀದಿಯಲ್ಲಿ ಬಳ್ಳದಿಂದ ಅಳೆದು ಮಾರಿದ ಕಾಲದಲ್ಲಿದ್ದನೆಂಬುದಕ್ಕಿಂತ ಈಗ ಹೇಗೆ ಅಲ್ಲಿ ನಿಂತಿದ್ದಾನೆ. ಅಲ್ಲಿಯು ಸಲ್ಲಿದವ ಇಲ್ಲಿಯೂ ಹೇಗೆ ಸಲ್ಲುತ್ತಿರುವವನೆಂಬುದಿಲ್ಲಿ ಬಹಳ ಮುಖ್ಯವಾಗುವುದು!

ಶ್ರೀಕೃಷ್ಣದೇವರಾಯನಿಲ್ಲಿ ಜೀವಂತವಿದ್ದಾನೆ ಅನಿಸುವುದು, ಬಾಳಿ ಬದುಕಿ ಸತ್ತಿಲ್ಲ. ಸತ್ತು ಇಲ್ಲಿ ಬದುಕಿದ್ದಾನೆ ಎಂದು ನಮ್ಮ ಕಣ್ಣಿದುರಿಗೆ ಮೆರವಣಿಗೆ ಹೊರಡುವನು. ಇದಕ್ಕಿಂತ ಭಾಗ್ಯ ಇನ್ನಿಲ್ಲವೆನಿಸುವುದು.

ಶ್ರೀಕೃಷ್ಣದೇವರಾಯ ತಿರುಪತಿ ತಿಮ್ಮಪ್ಪನ ಪರಮ ಆರಾಧಕನಾಗಿದ್ದನಲ್ಲದೆ, ಇಬ್ಬರು ಸತಿಯರೊಂದಿಗೆ ಪ್ರತಿ ತಿಂಗಳಿಗೊಮ್ಮೆ ಬಂದು ಅಮೂಲ್ಯವಾದ ಪಚ್ಚೆ ಮುತ್ತು ರತ್ನ, ವಜ್ರ, ವೈಡೂರ್‍ಯ, ಚಿನ್ನವನ್ನರ್‍ಪಿಸಿ ತೆರಳಿದ್ದಕ್ಕೆ ಇಲ್ಲಿ ದಾಖಲೆಗಳಿವೆ! ಬರೀ ಚಿನ್ನದಿಂದ ನಿರ್‍ಮಿಸಿಕೊಟ್ಟ ಆನಂದ ನಿಲಯಂ ಕೂಡಾ ಇವರ ಕೊಡುಗೆಯಾಗಿದೆ.

– ಹೀಗೆ ಶ್ರೀಕೃಷ್ಣದೇವರಾಯ ಹಾಗೂ ಇಬ್ಬರು ಧರ್‍ಮಪತ್ನಿಯರೂ ತಿರುಪತಿ ತಿರುಮಲ ದೇವಸ್ಥಾನದಲ್ಲಿ ಇಂದಿಗೂ ಜೀವಂತಿರುವರು. ಎಲ್ಲರ ಮನೆ ಮನಗಳಲ್ಲಿ ನೆಲೆ ನಿಂತಿರುವರು, ಜೀವನವೆಂದರೆ… ಇದಕ್ಕಿಂತ ಹೆಚ್ಚಿನದು ಇರುವುದಿಲ್ಲವಲ್ಲವೇ??
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...