ದ್ರೌಪದಿಯ ಹಾಡು

ಕರಿಯಪೂರ ನಗರದಲ್ಲಿ |
ಕಽವರವರು ಪಾಂಡವ್ರವರು |
ಧರಿಯ ಮ್ಯಾಲ ಲೆತ್ತನಿಟ್ಟು ಜೂಜನಾಡ್ಯಾರ ||೧||

ಪರಮಪಾಪಿ ಶಕುನಿ ತಾನು|
ಫಾಶಾದೊಳಗ ಫಕೀರನಾಗಿ|
ಧರ್ಮರಾಜ ಧರುಣಿ ದೌಽಪತಿನ ಸೋತರ ||೨||

ಸೋತನಂತ ದುರ್ಯೋಧನ|
ಸಂತೋಷದಿಂದ ಕೇಳಿದಾನ|
ದೂತನ್ಹಚ್ಚಿದಾರು ಮಾರು ಬದುಕ ತರಸ್ಯಾರ ||೩||

ನಿಂಬೆಣ್ಹಂತ ಕೊಂಬೆಣ್ಹಂತ|
ಆನಿಹಂತ ನಿನ್ನ ನಡಗಿ|
ಜಾಣಮುತ್ತಿನಂಥ ರಂಬಿ ಬಾರ ದ್ರೌಪತಿ ||೪||

ಹೆಚ್ಚು ಕುಂದ್ಯಾನಾಡದಿಽರು|
ಹೆರವರ್ಹೆಣ್ಣಾ ನೋಡದಿಽರು|
ಹಲ್ಲ ಕಿತ್ತ್ಯಾರೈವರವರು ಬ್ಯಾಡೋ ದುಸುವಾಸಾ ||೫||

ಹೆಣ್ಣ ಬಾಲಿ ಇಽವಳಿಗೆ|
ಹೆಮ್ಮಿಯಾದ ಮಾತನ್ಯಾಕ|
ಕಣ್ಣ ಚಿವುಟಿ ದುರ್ಯೋಧನ ಸೆದರಿಗೊಪ್ಪ್ಯಾನ ||೬||

ಹೀನ ದುಸುವಾಸ ನಿನ್ನ|
ರಗತಿನೊಳೆಗೆ ನಿಲಿಯ ಹಿಂಡಿ|
ಕರಳ ತೆಗೆದು ಮಾಲಿಮಾಡಿ ಧರಿಸೇನಂದಳ ||೭||

ಮುದ್ದೆ ಮುಖದೆ ಮಾನವರಿಗಿ|
ಮುಂದೆ ಮಾಡಿ ತಂಜದೆವೆಂದ|
ಇಂದ ನಿಮಗ ಬಿನ್ನವೆಂದು ಕೈಯ ಮುಗಿದರ ||೮||

ನೀರಬೊಬ್ಬಿ ಇಕ್ಕತಾರ|
ಲಡ್ಡನಾದರು ಕಡವುತಾರ|
ಆಗ ದ್ರೌಽಪತಿಯ ಸೀರಿ ನೆಳೆಯುತಿದರ ||೯||

ಆಗ ಮಾಽಡಿಽದ ಪಾಪ|
ಈಗ ಬಂದು ಒದಗಿತೇನ|
ಕೃಷ್ಣದೇವನ ಪಾದಕ್ಹೋಗಿ ಎರಗಲೇೆನ ||೧೦||

ಹರಿಯ ಹರಿಯ ಅನ್ನುತಾಳ|
ಹರಿಗೆ ಮೊರೆಯನಿಡುವುತಾಳ|
ಧರಿಯ ಮ್ಯಾಲ ಬಿದ್ದು ದ್ರೌಪತ್ಹ್ಯೊರಳತಿದ್ದಳ ||೧೧||

ಆಽಕಾಶ ಬಣ್ಣ ಸೀರಿ|
ಲೋಕದಾಗ ಇಲ್ಲ ಸೀರಿ|
ಸಾಕ್ಷ ಕೊಽಟ್ವಂತ ಸೀರಿ ಸಂವಿಯಲ್ದ್ಹೋದವ ||೧೨||

ಹಾದಿ ಇಂಜಾನ ಕಾಯೊ|
ಗಿಡದ ಮಂಜಾನ ಕಾಯೊ|
ಹಿಂಡ ದೈತ್ಯರುಳುವಂಥ ದೇವ ನೀ ಕುಯೊ ||೧೩||
*****

ಪಾಂಡವರು ಜೂಜಿನಲ್ಲಿ ದ್ರೌಪದಿಯನ್ನು ಸೋತಾಗ ಕೌರವರು ಅವಳ ಸೀರೆಯನ್ನು ಸೆಳೆದ ಕತೆಯಿದು. ಇದರಲ್ಲಿ ಎಂಟನೆಯ ನುಡಿಯೊಂದನ್ನು ಬಿಟ್ಟರೆ ಉಳಿದೆಲ್ಲ ಹಾಡಿನ ಭಾವವು ಸಹಜವಾಗಿ ಲಕ್ಷ್ಯಕ್ಕೆ ಬರುವಂತಿದೆ. ಆದರೆ ಎಂಟನೆಯ ನುಡಿಯಲ್ಲಿ ಭೀಷ್ಮಾದಿಗಳನ್ನು ಕುರಿತು ದ್ರೌಪದಿಯು ಆಡಿದ ಮಾತು ಹೇಳಲ್ಪಟ್ಟಿದೆಯೋ ಎನೋ. ಹಾಗೆ ತಿಳಿದುಕೊಂಡರೆ ಅರ್ಥವು ಸುಲಭವಾಗುವುದು.

ಛಂದಸ್ಸು :- ಭೋಗಷಟ್ಪದಿ.

ಶಬ್ದ ಪ್ರಯೋಗಗಳು :- ಕರಿಯಪೂರ=ಹಸ್ತಿನಾವತಿ. ಫಾಶ=ಪಗಡಿ ಆಟಡೊಳಗಿನ ಗಾಳುಗಳು. ಫಕೀರ=ಕಾಡುವ ಸನ್ಯಾಸಿ. ದಾರು ಮಾರು ಬದುಕು=ಸ್ಥಾವರಜಂಗಮ ಆಸ್ತಿ. ಕುಂದ್ಯಾನಾಡದಿರು=ಕುಂದಿಡಬೇಡ. ಸದರು=ಮುಖ್ಯ ಸ್ಥಳ. ರಗತ=ರಕ್ತ. ಲಡ್ಡ=ಚಬಕ. ಇಂಜಾನ=ಇಂಧನ. ಮಂಜಾನ=ಮಂಜು(ಮಬ್ಬು).

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ತುಂಬಿ ಬಂದ ಕಡಲಿನಲಿ
Next post ಅಮವಾಸ್ಯೆಯ ಕಥೆ

ಸಣ್ಣ ಕತೆ

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

cheap jordans|wholesale air max|wholesale jordans|wholesale jewelry|wholesale jerseys