Home / ಕವನ / ಕವಿತೆ / ದ್ರೌಪದಿಯ ಹಾಡು

ದ್ರೌಪದಿಯ ಹಾಡು

ಕರಿಯಪೂರ ನಗರದಲ್ಲಿ |
ಕಽವರವರು ಪಾಂಡವ್ರವರು |
ಧರಿಯ ಮ್ಯಾಲ ಲೆತ್ತನಿಟ್ಟು ಜೂಜನಾಡ್ಯಾರ ||೧||

ಪರಮಪಾಪಿ ಶಕುನಿ ತಾನು|
ಫಾಶಾದೊಳಗ ಫಕೀರನಾಗಿ|
ಧರ್ಮರಾಜ ಧರುಣಿ ದೌಽಪತಿನ ಸೋತರ ||೨||

ಸೋತನಂತ ದುರ್ಯೋಧನ|
ಸಂತೋಷದಿಂದ ಕೇಳಿದಾನ|
ದೂತನ್ಹಚ್ಚಿದಾರು ಮಾರು ಬದುಕ ತರಸ್ಯಾರ ||೩||

ನಿಂಬೆಣ್ಹಂತ ಕೊಂಬೆಣ್ಹಂತ|
ಆನಿಹಂತ ನಿನ್ನ ನಡಗಿ|
ಜಾಣಮುತ್ತಿನಂಥ ರಂಬಿ ಬಾರ ದ್ರೌಪತಿ ||೪||

ಹೆಚ್ಚು ಕುಂದ್ಯಾನಾಡದಿಽರು|
ಹೆರವರ್ಹೆಣ್ಣಾ ನೋಡದಿಽರು|
ಹಲ್ಲ ಕಿತ್ತ್ಯಾರೈವರವರು ಬ್ಯಾಡೋ ದುಸುವಾಸಾ ||೫||

ಹೆಣ್ಣ ಬಾಲಿ ಇಽವಳಿಗೆ|
ಹೆಮ್ಮಿಯಾದ ಮಾತನ್ಯಾಕ|
ಕಣ್ಣ ಚಿವುಟಿ ದುರ್ಯೋಧನ ಸೆದರಿಗೊಪ್ಪ್ಯಾನ ||೬||

ಹೀನ ದುಸುವಾಸ ನಿನ್ನ|
ರಗತಿನೊಳೆಗೆ ನಿಲಿಯ ಹಿಂಡಿ|
ಕರಳ ತೆಗೆದು ಮಾಲಿಮಾಡಿ ಧರಿಸೇನಂದಳ ||೭||

ಮುದ್ದೆ ಮುಖದೆ ಮಾನವರಿಗಿ|
ಮುಂದೆ ಮಾಡಿ ತಂಜದೆವೆಂದ|
ಇಂದ ನಿಮಗ ಬಿನ್ನವೆಂದು ಕೈಯ ಮುಗಿದರ ||೮||

ನೀರಬೊಬ್ಬಿ ಇಕ್ಕತಾರ|
ಲಡ್ಡನಾದರು ಕಡವುತಾರ|
ಆಗ ದ್ರೌಽಪತಿಯ ಸೀರಿ ನೆಳೆಯುತಿದರ ||೯||

ಆಗ ಮಾಽಡಿಽದ ಪಾಪ|
ಈಗ ಬಂದು ಒದಗಿತೇನ|
ಕೃಷ್ಣದೇವನ ಪಾದಕ್ಹೋಗಿ ಎರಗಲೇೆನ ||೧೦||

ಹರಿಯ ಹರಿಯ ಅನ್ನುತಾಳ|
ಹರಿಗೆ ಮೊರೆಯನಿಡುವುತಾಳ|
ಧರಿಯ ಮ್ಯಾಲ ಬಿದ್ದು ದ್ರೌಪತ್ಹ್ಯೊರಳತಿದ್ದಳ ||೧೧||

ಆಽಕಾಶ ಬಣ್ಣ ಸೀರಿ|
ಲೋಕದಾಗ ಇಲ್ಲ ಸೀರಿ|
ಸಾಕ್ಷ ಕೊಽಟ್ವಂತ ಸೀರಿ ಸಂವಿಯಲ್ದ್ಹೋದವ ||೧೨||

ಹಾದಿ ಇಂಜಾನ ಕಾಯೊ|
ಗಿಡದ ಮಂಜಾನ ಕಾಯೊ|
ಹಿಂಡ ದೈತ್ಯರುಳುವಂಥ ದೇವ ನೀ ಕುಯೊ ||೧೩||
*****

ಪಾಂಡವರು ಜೂಜಿನಲ್ಲಿ ದ್ರೌಪದಿಯನ್ನು ಸೋತಾಗ ಕೌರವರು ಅವಳ ಸೀರೆಯನ್ನು ಸೆಳೆದ ಕತೆಯಿದು. ಇದರಲ್ಲಿ ಎಂಟನೆಯ ನುಡಿಯೊಂದನ್ನು ಬಿಟ್ಟರೆ ಉಳಿದೆಲ್ಲ ಹಾಡಿನ ಭಾವವು ಸಹಜವಾಗಿ ಲಕ್ಷ್ಯಕ್ಕೆ ಬರುವಂತಿದೆ. ಆದರೆ ಎಂಟನೆಯ ನುಡಿಯಲ್ಲಿ ಭೀಷ್ಮಾದಿಗಳನ್ನು ಕುರಿತು ದ್ರೌಪದಿಯು ಆಡಿದ ಮಾತು ಹೇಳಲ್ಪಟ್ಟಿದೆಯೋ ಎನೋ. ಹಾಗೆ ತಿಳಿದುಕೊಂಡರೆ ಅರ್ಥವು ಸುಲಭವಾಗುವುದು.

ಛಂದಸ್ಸು :- ಭೋಗಷಟ್ಪದಿ.

ಶಬ್ದ ಪ್ರಯೋಗಗಳು :- ಕರಿಯಪೂರ=ಹಸ್ತಿನಾವತಿ. ಫಾಶ=ಪಗಡಿ ಆಟಡೊಳಗಿನ ಗಾಳುಗಳು. ಫಕೀರ=ಕಾಡುವ ಸನ್ಯಾಸಿ. ದಾರು ಮಾರು ಬದುಕು=ಸ್ಥಾವರಜಂಗಮ ಆಸ್ತಿ. ಕುಂದ್ಯಾನಾಡದಿರು=ಕುಂದಿಡಬೇಡ. ಸದರು=ಮುಖ್ಯ ಸ್ಥಳ. ರಗತ=ರಕ್ತ. ಲಡ್ಡ=ಚಬಕ. ಇಂಜಾನ=ಇಂಧನ. ಮಂಜಾನ=ಮಂಜು(ಮಬ್ಬು).

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...