ವಿಧಿ ಬರಹ

ಸದ್ದು ಗದ್ದಲದ ಒಳಗೆ
ಕದ್ದು ಕುಳಿತಂತೆ
ನೆನೆನೆನೆದು ಹೊಸಬಾಳ
ಕನಸ ಹೆಣೆದಳು ಆಕೆ

ನೆಚ್ಚು ನೂಪುರದಲ್ಲಿ
ಕೆಚ್ಚು ಕಾಮನೆಯಲ್ಲಿ
ತೊಳೆದ ಮುತ್ತಿನ ಹಾಗೆ ಹೊಳೆದಳಾಕೆ

ನಾಳೆ ನಾಳೆಯ ನೆನೆದು
ಕಲ್ಪನಾ ವಿಲಾಸ ಮೆರೆದು
ಹುಚ್ಚುಗುದುರೆಯ ಹತ್ತಿ ಹೊರಟಳಾಕೆ

ಮಾತು ಮಾತಿಗೂ ಲಜ್ಜೆ
ಕಣ್ಣ ನೋಟವು ಕದ್ದೆ
ಒನಪು ವಯ್ಯಾರ ಮೆರೆದಳಾಕೆ

ನಾಳೆಯೇ ಹೊಸಮನೆಗೆ
ಮರುದಿನವೇ ಶೋಬಾನ
ಎಲ್ಲ ಸಗ್ಗದ ಸುಖವು
ಮತ್ತಿನಲಿ ಮೆರೆದಳಾಕೆ

ವಿಧಿ ಅವನು ಕಟುಕ
ನಡೆಸಿ ತನ್ನ ಕುಹಕ
ಕಳಸಿದ್ದ ಹೊಸ ಹುರುಪ
ಮಸಣದೆಡೆಗೆ

*****

Previous post ಕುದುರೆ ಮತ್ತು ಮುತ್ತುಗಳು
Next post ಸೊರಾದ ಕೋಳಿಗಳು

ಸಣ್ಣ ಕತೆ

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…