ಕುದುರೆ ಮತ್ತು ಮುತ್ತುಗಳು

ಮುತ್ತಿನಂತಹ ಅಕ್ಕಂದಿರಿಬ್ಬರನ್ನು
ಕುದುರೆಯೊಂದು ಕೆಡವಿ
ಕಂಗೆಡಿಸಿದ ಸುದ್ದಿ
ನಿಮಗೂ ತಲುಪಿರಬಹುದು

ಅಕ್ಕಂದಿರೇ ಹುಚ್ಚುತನದಿಂದ
ಕುದುರೆಯನ್ನು ಕೆಣಕಿ ಕಂಗೆಟ್ಟರೆಂದು
ಹಬ್ಬಿಸಿದ ಸುದ್ದಿಯನ್ನು
ನೀವು ನಂಬಿರಲೂಬಹುದು.

ಬಯಲೊಳಗೆ
ಬಯಲಾದರಂತೆ ಅಕ್ಕಂದಿರು
ಧೂಳೊಳಗೆ ಮೈ ಮುಚ್ಚಿಕೊಂಡವರನ್ನು
ಮೆರವಣಿಗೆಯಲ್ಲಿ ಕುಣಿಸಿದರಂತೆ
ಮಾನವಂತರು.

ಎಚ್ಚರವಾಗಿರುವ ರಸ್ತೆಗಳೆ
ನೀವು ಕಂಡಿರೆ… ನೀವು ಕಂಡಿರೆ….
ಸುಡುವ ಸೂರ್ಯಗಳೆ
ನೀವು ಕಂಡಿರೆ… ನೀವು ಕಂಡಿರೆ….
ಮೈ ತುಂಬ ಎಲೆರೆಪ್ಪೆಗಳನ್ನು
ಅಂಟಿಸಿಕೊಂಡಿರುವ ಮರಗಳೆ
ನೀವು ಕಂಡಿರೆ… ನೀವು ಕಂಡಿರೆ…

ನನ್ನಕ್ಕಂದಿರನ್ನು ಹಣ್ಣು ಮಾಡಿದ
ಹುಣ್ಣುಗಳಾರು ನೀವು ಹೇಳಿರೆ…
ನನ್ನಕ್ಕಂದಿರ ಹೃದಯ ಗೋರಿಗೊಳಿಸಿ
ವಿಜಯಪತಾಕೆ ಹಾರಿಸಿದ
ಶೂರರಾರು ನೀವು ಹೇಳಿರೆ…
ಎಂದು ಪ್ರಲಾಪಿಸುವುದು ವ್ಯಥ.

ಎಲ್ಲರ ಒಳಹೊಕ್ಕು ಶೋಧಿಸುವ
ಗಾಳಿಗೆ ಮಾತು ಬರುವಂತಿದ್ದರೆ?!
ಮಾತಿರಲಿ-
ಮೌನವನ್ನು ಮಣಿಸಬಲ್ಲ
ಮಹಾಶಯರಿರುವ ಈ ನಾಡಿನಲ್ಲಿ
ಕುದುರೆಯ ಕೆನೆತವಷ್ಟೆ ಸತ್ಯ.
ಉಳಿದದ್ದೆಲ್ಲ ಮಿಥ್ಯ.


Previous post ಬದುಕು
Next post ವಿಧಿ ಬರಹ

ಸಣ್ಣ ಕತೆ

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

  • ವ್ಯವಸ್ಥೆ

    ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

cheap jordans|wholesale air max|wholesale jordans|wholesale jewelry|wholesale jerseys