ಕ್ರಾಂತಿ ಮಂತ್ರದ ಹರಿಕಾರ
ನಿಷ್ಕಪಟ ಮನದ ನೇತಾರ
ಉಕ್ಕಿಸಿದ್ದ ಯುವಮನದಿ
ಸ್ಪೂರ್ತಿ ಸಹಕಾರ
ಜೈ ಹಿಂದ ಜೈಕಾರ
ಜನಸಾಗರದಿ ಝೇಂಕಾರ
ಜನಮನದಿ ಅಳಿಯದೇ
ಜನಜನಿತ ನಿರಂತರ
ಸ್ವರಾಜ್ ಪಕ್ಷದ ಉದಯ
ನಿನ್ನ ತತ್ವದ ವಲಯ
ಬೆಳೆಸಿತ್ತು ಜನರಲ್ಲಿ
ಸ್ವಾತಂತ್ರ್ಯ ವೆಂಬ ಮತ್ತು ಬಲೆಯ
ಭುಗಿಲೆದ್ದ ಬೆಂಕಿಯದು
ಅಜಾದ ಹಿಂದ ಫೌಜ್
ಹೊರನಾಡ ನೆಲೆಯಲ್ಲಿ
ನಿನ್ನ ಜಯದ ಬೇಟೆಯಲಿ
ಕಂಚಿನ ಕಂಠಕ್ಕೆ ಮರುಳಾಗಿ
ಯುವ ಹೃದಯ ಮನದಿಂದ
ಮೊಳಗಿತ್ತು ಕರೆದು ‘ನೇತಾಜಿ’
ಅನ್ವರ್ಥಕದ ಬಿರುದು
ಉಗ್ರಾಗಾಮಿಯ ಗತ್ತು
ಪರಮವೈರಿಗೆ ಕುತ್ತು
ನಡೆದಿತ್ತು ತೆರೆಮರೆಯ
ಮರಣ ಮಸಲತ್ತು
ವಾಯುಯಾನದ ವೇಳೆ
ಪ್ರಾಣ ವಾಯುವ ಕೇಳೆ
ಮರಣ ದೈತ್ಯ
ಆದರೂ ಅದು ನಿಗೂಢ ಸತ್ಯ
*****
ಆಂಗ್ಲಭಾಷಾ ಉಪನ್ಯಾಸಕಿ
ಪ್ರಕಟಿತ ಕೃತಿಗಳು: ಏಣಿ ಮತ್ತು ಪದಗಳೊಂದಿಗೆ ನಾನು[ ಕವನ ಸಂಕಲನಗಳು,] ಪಾಶ್ಚಿಮಾತ್ಯ ಸಾಹಿತ್ಯ ಲೋಕ [ಅಂಕಣಬರಹ ಕೃತಿ]
ಪ್ರಶಸ್ತಿಗಳು: ಏಣಿ ಕವನ ಸಂಕಲನಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಮತಿ ಶಾರದಾ ರಾಮಲಿಂಗಪ್ಪ ದತ್ತಿ ಪ್ರಶಸ್ತಿ,
ಸಂಕ್ರಮಣ ಕಾವ್ಯ ಪ್ರಶಸ್ತಿ ೨೦೧೬, ರವಿಕಿರಣ ಸಾಹಿತ್ಯ ಪ್ರತಿಷ್ಠಾನ ಬೆಂಗಳೂರು ಪ್ರಥಮ ಕಥಾ ಬಹುಮಾನ ೨೦೧೮ , ತುಷಾರ ಮಾಸ ಪತ್ರಿಕೆಯ ಕ್ಯಾಲಿಫೋನರ್ಿಯಾ ಕಾವ್ಯಾಂಜಲಿ ತೃತೀಯ ಕಥಾ ಬಹುಮಾನ ೨೦೧೮ ಇತ್ಯಾದಿ ಬಹುಮಾನ ಬಂದಿದೆ.ಮೊಗವೀರ ಮಾಸಪತ್ರಿಕೆ ಮುಂಬಯಿ ೨೦೧೭ರ ಸಮಾಧಾನಕರ ಕಥಾ ಬಹುಮಾನ, ಕರಾವಳಿ ಮುಂಜಾವು ದಿನಪತ್ರಿಕೆಯ ದೀಪಾವಳಿ ಕಥಾ ಸ್ಪಧರ್ೆಗಳಲ್ಲಿ ಬಹುಮಾನ ಇತ್ಯಾದಿ ಬಂದಿರುತ್ತವೆ.