ಕ್ರಾಂತಿ ಹರಿಕಾರ ಸುಭಾಷ ಚಂದ್ರ

ಕ್ರಾಂತಿ ಮಂತ್ರದ ಹರಿಕಾರ
ನಿಷ್ಕಪಟ ಮನದ ನೇತಾರ
ಉಕ್ಕಿಸಿದ್ದ ಯುವಮನದಿ
ಸ್ಪೂರ್ತಿ ಸಹಕಾರ

ಜೈ ಹಿಂದ ಜೈಕಾರ
ಜನಸಾಗರದಿ ಝೇಂಕಾರ
ಜನಮನದಿ ಅಳಿಯದೇ
ಜನಜನಿತ ನಿರಂತರ

ಸ್ವರಾಜ್ ಪಕ್ಷದ ಉದಯ
ನಿನ್ನ ತತ್ವದ ವಲಯ
ಬೆಳೆಸಿತ್ತು ಜನರಲ್ಲಿ
ಸ್ವಾತಂತ್ರ್‍ಯ ವೆಂಬ ಮತ್ತು ಬಲೆಯ
ಭುಗಿಲೆದ್ದ ಬೆಂಕಿಯದು
ಅಜಾದ ಹಿಂದ ಫೌಜ್
ಹೊರನಾಡ ನೆಲೆಯಲ್ಲಿ
ನಿನ್ನ ಜಯದ ಬೇಟೆಯಲಿ

ಕಂಚಿನ ಕಂಠಕ್ಕೆ ಮರುಳಾಗಿ
ಯುವ ಹೃದಯ ಮನದಿಂದ
ಮೊಳಗಿತ್ತು ಕರೆದು ‘ನೇತಾಜಿ’
ಅನ್ವರ್ಥಕದ ಬಿರುದು

ಉಗ್ರಾಗಾಮಿಯ ಗತ್ತು
ಪರಮವೈರಿಗೆ ಕುತ್ತು
ನಡೆದಿತ್ತು ತೆರೆಮರೆಯ
ಮರಣ ಮಸಲತ್ತು
ವಾಯುಯಾನದ ವೇಳೆ
ಪ್ರಾಣ ವಾಯುವ ಕೇಳೆ
ಮರಣ ದೈತ್ಯ
ಆದರೂ ಅದು ನಿಗೂಢ ಸತ್ಯ

*****

Previous post ಪ್ರಾರ್ಥನೆ
Next post ನೂರು ಮಂದಿ ಮನುಷ್ಯರು

ಸಣ್ಣ ಕತೆ

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

  • ಬ್ರಿಟನ್ ದಂಪತಿಗಳ ಪ್ರೇಮ ದಾಖಲೆ

    ಫ್ರಾಂಕ್ ಆಗ ಇನ್ನು ಹದಿನಾಲ್ಕು ವರ್ಷದ ಹುಡುಗ ತೆಳ್ಳಗೆ ಬೆಳ್ಳಗೆ ಇದ್ದು, ಕರಿಯ ಬಣ್ಣದ ದಟ್ಟ ಕೂದಲಿನ ಬ್ರಿಟಿಷ್ ಬಾಲಕ. ಹೈಸ್ಕೂಲಿನಲ್ಲಿ ಓದುತ್ತಿದ್ದ ಫ್ರಾಂಕ್‌ಗೆ ಕಾಲ್ಚೆಂಡು ಆಟ… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…