ಕ್ರಾಂತಿ ಹರಿಕಾರ ಸುಭಾಷ ಚಂದ್ರ

ಕ್ರಾಂತಿ ಮಂತ್ರದ ಹರಿಕಾರ
ನಿಷ್ಕಪಟ ಮನದ ನೇತಾರ
ಉಕ್ಕಿಸಿದ್ದ ಯುವಮನದಿ
ಸ್ಪೂರ್ತಿ ಸಹಕಾರ

ಜೈ ಹಿಂದ ಜೈಕಾರ
ಜನಸಾಗರದಿ ಝೇಂಕಾರ
ಜನಮನದಿ ಅಳಿಯದೇ
ಜನಜನಿತ ನಿರಂತರ

ಸ್ವರಾಜ್ ಪಕ್ಷದ ಉದಯ
ನಿನ್ನ ತತ್ವದ ವಲಯ
ಬೆಳೆಸಿತ್ತು ಜನರಲ್ಲಿ
ಸ್ವಾತಂತ್ರ್‍ಯ ವೆಂಬ ಮತ್ತು ಬಲೆಯ
ಭುಗಿಲೆದ್ದ ಬೆಂಕಿಯದು
ಅಜಾದ ಹಿಂದ ಫೌಜ್
ಹೊರನಾಡ ನೆಲೆಯಲ್ಲಿ
ನಿನ್ನ ಜಯದ ಬೇಟೆಯಲಿ

ಕಂಚಿನ ಕಂಠಕ್ಕೆ ಮರುಳಾಗಿ
ಯುವ ಹೃದಯ ಮನದಿಂದ
ಮೊಳಗಿತ್ತು ಕರೆದು ‘ನೇತಾಜಿ’
ಅನ್ವರ್ಥಕದ ಬಿರುದು

ಉಗ್ರಾಗಾಮಿಯ ಗತ್ತು
ಪರಮವೈರಿಗೆ ಕುತ್ತು
ನಡೆದಿತ್ತು ತೆರೆಮರೆಯ
ಮರಣ ಮಸಲತ್ತು
ವಾಯುಯಾನದ ವೇಳೆ
ಪ್ರಾಣ ವಾಯುವ ಕೇಳೆ
ಮರಣ ದೈತ್ಯ
ಆದರೂ ಅದು ನಿಗೂಢ ಸತ್ಯ

*****

Previous post ಪ್ರಾರ್ಥನೆ
Next post ನೂರು ಮಂದಿ ಮನುಷ್ಯರು

ಸಣ್ಣ ಕತೆ

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

  • ದಾರಿ ಯಾವುದಯ್ಯಾ?

    ಮೂವತೈದು ವರ್‍ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್‍ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್… Read more…

cheap jordans|wholesale air max|wholesale jordans|wholesale jewelry|wholesale jerseys