ನಡಿಯೋ ದೇವರ ಚಾಕರಿಗೆ

ನಡಿಯೋ ದೇವರ ಚಾಕರಿಗೆ ಮುಕ್ತಿ-
ಗೊಡೆಯ ಖಾದರಲಿಂಗ ನೆಲಸಿರ್ಪ ಗಿರಿಗೆ                    ||ಪ||

ಎಡಬಲಕೆ ನೋಡುತಲಿ ಷಣ್ಮುಖ
ಒಡಲೊಳಗೆ ತನ್ನ ಮನವ ಸೇರಿಸಿ
ಕಡು ವಿಷಯ ಕರುಣಾಬ್ದಿಗಳ ಕೈ
ಹೊಡೆದು ಮುಂದಕೆ ಒಡುತೋಡುತ                        ||ಅ.ಪ.||

ಬಯಲೊಳು ಬಯಲು ಪುಟ್ಟಿಸಿದಾ ನಿರ್‍-
ಬಯಲಿನೊಳಗೆ ತನ್ನಾಲಯವ ಕಟ್ಟಿಸಿದಾ
ಭವನಿವಾರಣ ಭಕ್ತವತ್ಸಲ
ಅಹುದೆನಿಸಿ ನಿಶ್ಚಯಿಸಿ ಮನದೊಳು
ತವಕ ತೂರ್ಯದ ಲಕ್ಷದಿಂದಲಿ
ಭವಸಮುದ್ರವ ದಾಂಟು ದಾಟುತ                            ||೧||

ಆ ಮಹಾಮಹಿಮ ಪೇಳಿದನು ಈ
ಭೂಮಿಯೋಳ್ ಹುಲಗೂರ ಗ್ರಾಮಕಿಳಿದನು
ನಾಮ ರೂಪ ಕ್ರಿಯಾ ಕಲಾಪದಿ
ಸೀಮೆಯನು ಗೆಲಿದಂಥ ಸ್ವಾಮಿಯ
ನೇಮ ಹಿಡಿದಾತ್ಮನೊಳು ಭಜಿಸುತ
ಕಾಮ ಕ್ರೋಧವ ಕಾಲಿಲೊದೆಯುತ                        ||೨||

ಜೀವ ಪರಮರೊಂದುಗೂಡಿ ಅನು
ಭಾವದಿ ಸಾಯ್ಯುಜ್ಯ ಪದವಿಯ ಬೇಡಿ
ಕಾಯಿ ಸಕ್ಕರಿ ಊದನೀಡುತ
ಜಿವ್ಹೆಯೊಳು ಮಂತ್ರವನು ಜಪಿಸುತ
ಠಾವು ಶಿಶುವಿನಾಳಿಂದ ಹೊರಟು
ಮಾಯಿಯನು ಮುರಿದೊತ್ತಿ ಮೌಜಿಲೆ                        ||೩||
*    *    *    *

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಖಾದರಿ ಸದಾವರಿ
Next post ಹಮ್ ತೋ ದೇಖಾ ಮೊಹಮ್ಮದ

ಸಣ್ಣ ಕತೆ

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…